ಕುಂದಾಪುರ ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರ್ಯೋತ್ಸವವ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇದರ ವತಿಯಿಂದ ಭಂಡಾರಕಾರ್ಸ್ ಕಾಲೇಜಿನ ಕೋಯಾಕುಟ್ಟಿ – ಲಯನ್ಸ್ ಹಾಲ್‍ನ ಎದುರುಗಡೆ 75ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕ್ಲಬಿನ ಅಧ್ಯಕ್ಷರಾದ ನವೀನ ಕುಮಾರ ಶೆಟ್ಟಿಯವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನದ ಕುರಿತು ಮಾತನಾಡಿದರು. ಮಾಜಿ ಲಯನ್ಸ್ ಗವರ್ನರಗಳಾದ ಕೆ. ಜಯಕರ ಶೆಟ್ಟಿ ಹಾಗೂ ಪ್ರಕಾಶ ಟಿ. ಸೋನ್ಸ್‍ರವರು ಸ್ವಾತಂತ್ರ ದಿನದ ಮಹತ್ವವನ್ನು ವಿವರಿಸಿದರು. ಲ. ರಾಜೀವ ಕೋಟ್ಯಾನ್‍ರವರು ಸಿಹಿತಿಂಡಿ ವಿತರಿಸಿದರು. ಲ. ಶಂಕರ ಶೆಟ್ಟಿಯವರು ಕೃತಜ್ಞತೆ ಅರ್ಪಿಸಿದರು.