ಕುಂದಾಪುರ :ರೆಡ್ ಕ್ರಾಸ್ ಸಂಸ್ಥೆಯಿಂದ ಜಿನೇವಾ ಒಪ್ಪಂದದ ದಿನಾಚರಣೆ

ವಿಶ್ವದಾದ್ಯಂತ ರೆಡ್ ಕ್ರಾಸ್ ಸಂಸ್ಥೆ ಜಿನೇವಾ ಒಪ್ಪಂದ ದಿನಾಚರಣೆ ಯನ್ನು ಅಗಸ್ಟ್ ಹನ್ನೆರಡರಂದು ಆಚರಿಸುತ್ತಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ ಈ ದಿನ ಇದನ್ನು ಆಚರಿಸಿತು. ಭಂಡಾರ್ಕರ್ಸ ಕಾಲೇಜು, ವರದರಾಜ್ ಶೆಟ್ಟಿ ಕಾಲೇಜು ಕೋಟೇಶ್ವರ, ಆಶ್ರಿತ್ ನರ್ಸಿಂಗ್ ಕಾಲೇಜು ಹೀಗೆ ಒಟ್ಟು ಆರ್ ನೂರು ವಿದ್ಯಾರ್ಥಿಗಳು ಭಾಗವಹಿಸಿ ಕುಂದಾಪುರ ಪೇಟೆ ಯಲ್ಲಿ ಮೆರವಣಿಗೆ ಮಾಡಿ ಆ ಮೇಲೆ ಕೋಯಾಕುಟ್ಟಿ ಸಭಾಂಗಣದಲ್ಲಿ ಸೇರಿದರು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಸಭಾಪತಿ ಎಸ್ ಜಯಕರ ಶೆಟ್ಟಿ ವಹಿಸಿದರು. ಕಾರ್ಯಕ್ರಮದ ದಲ್ಲಿ ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಸತ್ಯನಾರಾಯಣ ಪೌರಾಣಿಕ, ರೆಡ್ ಕ್ರಾಸ್ ಸಂಯೋಜಕರಾದ ಪ್ರೊಫೆಸರ್ ಸತ್ಯನಾರಾಯಣ, ಪ್ರೊ. ವಿದ್ಯಾರಾಣಿ, ಕೋಟೇಶ್ವರದ ಶೇಖರ. ಬಿ. ಮತ್ತು ಆಶ್ರಿತ್ ಕಾಲಜಿನ ಭಾಗ್ಯಶ್ರೀ ಉಪಸ್ಥಿತರಿದ್ದರು.

ಉಪಹಾರದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.ಡಾ. ಸೋನಿ ಕಾರ್ಯ ಕ್ರಮ ನಿರೂಪಿಸಿ ಸ್ವಾಗತ ಗೈದರು. ಕಾರ್ಯದರ್ಶಿ ಸೀತಾರಾಮ ಶೆಟ್ಟಿ ವಂದಿಸಿದರು.