ಬಸ್ರೂರು: ಮುಸ್ಲಿಮ್ ಕ್ರೈಸ್ತ ಹಿಂದುಗಳಿಂದ ಸ್ಥಳ ದಾನದಿಂದ ಗರಡಿಗಾಗಿ ರಸ್ತೆ ನಿರ್ಮಾಣ

ಬಸ್ರೂರು: ಬಸ್ರೂರಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚೆನ್ನಕೇಶವ ಗರಡಿಗೆ ಹೋಗಲು ರಸ್ತೆಗಾಗಿ ಮುಸ್ಲಿಮ್ ಕ್ರೈಸ್ತ ಹಿಂದುಗಳಿಂದ ಸ್ಥಳ ದಾನ ಮಾಡಿದ ಪ್ರಯುಕ್ತ ರಸ್ತೆ  ನಿರ್ಮಿಸಲು ಸಾಧ್ಯವಾಗಿದ್ದು,ಈ ರಸ್ತೆಯ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಪೂಜಾರಿ ಅವರು ನೆರವೇರಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಬೇಳೂರು ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ, ಗ್ರಾ.ಪಂ. ಪಿಡಿಒ ನಾಗೇಂದ್ರ, ಅರುಣ್‌ ಕುಮಾರ್‌ ಶೆಟ್ಟಿ ಕೊಳ್ಳೇರೆ, ಎಚ್‌. ದೇವಾನಂದ ಶೆಟ್ಟಿ  ಬಸ್ರೂರಿನ ಎರಡು ಜಮಾತಿನ ದ ಜಿ. ಇಸ್ಮಾಂಯಿಲ್‌ ಸಾಹೇಬ್‌, ಖಾದಿರ್‌ ಭಾಷಾ ಉಪಸಿಸ್ಥರಿದ್ದರು

12 ಫೀಟು ಅಗಲ 450 ಫೀಟು ಉದ್ದದ ರಸ್ತೆಗೆ ಸ್ಥಳ ದಾನ ಮಾಡಿದ ಪೀಟರ್‌ ಸೆರಾವೋ, ಅದಮ್‌ ಸಾಹೇಬ್‌, ನಾಸಿರ್‌ ಅಲಿ ಟಿ ದೇವಾನಂದ ಶೆಟ್ಟಿ, ಈ ನಾಲ್ವರು ರಸ್ತೆಗಾಗಿ ಸ್ಥಳ ದಾನ ಮಾಡಿದ ದಾನಿಗಳು. ನಾಸೀರ್ ಆಲಿ ಸಾಹೇಬ್‌” ಸ್ವಾಗತಿಸಿ, ಅಜೇಜ್‌ ಸಾಹೇಬ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.