ಚೈತನ್ಯ ವೃದ್ಧಾಶ್ರಮದಲ್ಲಿ ಜೇಸಿಐ ಕುಂದಾಪುರ ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನ

JANANUDI.COM NETWORK

ಕುಂದಾಪುರ, ಏ.8: ಜೇಸಿಐ ಕುಂದಾಪುರ ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನದ ಅಂಗವಾಗಿ ಇಲ್ಲಿನ ಚೈತನ್ಯ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಆಯುಷ್ಧಾಮ್  ವೈದ್ಯರಾದ ಡಾ. ರವೀಂದ್ರ ರವರು ತುಳಸಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು ಆರೋಗ್ಯ ದಿನದ ಮಹತ್ವ ಹಾಗೂ ಮನುಷ್ಯನ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಸಂತುಲತೆ ಕುರಿತಾಗಿ ತಿಳಿ ಹೇಳಿದರು.

ಶಿಬಿರದ ವೈದ್ಯಾಧಿ ಕಾರಿ ಯಾಗಿ ಆಗಮಿಸಿದ್ದ ಆಯುಷ್ ಆಸ್ಪತ್ರೆಯ ವೈದ್ಯರಾದ ಡಾ. ಸೋನಿ ಡಿ ಕೋಸ್ಟ ರವರು ತಮ್ಮ ನುರಿತ ತಂಡದೊಂದಿಗೆ ವೃದ್ಧಾಶ್ರಮದಲ್ಲಿದ್ದ ಮೂವತ್ತಕ್ಕೂ ಹೆಚ್ಚು ವೃದ್ಧರ ಆರೋಗ್ಯ ತಪಾಸಣೆ ನಡೆಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೆ ಸಿ ಅಭಿಲಾಷ್ ಬಿ ಎ ರವರು ವಹಿಸಿದ್ದರು .
ಸ್ಥಾಪಕಾಧ್ಯಕ್ಷರಾದ ಜೇಸಿ ಹುಸೇನ್ ಹೈಕಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂರ್ವ ಅಧ್ಯಕ್ಷರಾದ ಜೆ ಸಿ ನಾಗೇಶ್ ನಾವಡ, ಜೆ ಸಿ ಪ್ರಶಾಂ
ತ್ ಹವಲ್ದಾರ್ ಮತ್ತಿತರರು ಉಪಸ್ಥಿತರಿದ್ದರು .