ಬಜೆಟ್ ಕುರಿತು ಕಾಂಗ್ರೆಸ್‌ನ ಎಂ.ಎಲ್.ಅನಿಲ್‌ಕುಮಾರ್‌ ಪ್ರತಿಕ್ರಿಯೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್‌

ಕೇಂದ್ರ ಬಜೆಟ್ ಕುರಿತು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್‌ ಪ್ರತಿಕ್ರಿಯಿಸಿ , ಜನರ ನಿರೀಕ್ಷೆ ಹುಸಿಯಾಗಿದೆ , ರಾಜ್ಯದ ಕಡೆಗಣನೆ ಮಾತ್ರವಲ್ಲ , ಕೋಲಾರ ಜಿಲ್ಲೆಯನ್ನು ಮರೆಯಲಾಗಿದೆ . ಕೋಲಾರದ ರೈಲ್ವೆ ಕೋಚ್ ಕಾರ್ಖಾನೆ ಪ್ರಸ್ತಾಪವೂ ಇಲ್ಲ , ಇದರ ಬದಲಿಗೆ ರೈಲ್ವೆ ವರ್ಕ್‌ಶಾಪ್ ಸ್ಥಾಪನೆಯ ಮಾತು ಎಲ್ಲಿ ಕೇಳಿ ಬಂದಿಲ್ಲ ಇದು ರೈತರು , ಮಹಿಳೆಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ .