ಕುಂದಾಪುರ ಅಸಲಿ ಚಿನ್ನಾಭರಣ ಕದ್ದು, ನಕಲಿ ಚಿನ್ನ ಇಟ್ಟು ವಂಚನೆ.

JANANUDI.COM NETWORK


ಕುಂದಾಪುರ: ಕೂರ್ಗಿ ಗ್ರಾಮದ ಕೊರವಡಿಮನೆ ಎಂಬಲ್ಲಿ ಚಿನ್ನಾಭರಣ ಎಗರಿಸಿ ಬದಲಿಗೆ ನಕಲಿ ಚಿನ್ನ ಇಟ್ಟು ಮನೆ ಕೆಲಸದಾಕೆಯೊಬ್ಬಳು ವಂಚಿಸಿದ ಪ್ರಕರಣ ದಾಖಲಾಗಿದೆ.
ಈ ಕುರಿತು ಮನೆ ಮಾಲಾಕಿ ಭವಾನಿ ಶೆಡ್ತಿಯು ಪೆÇಲೀಸರಿಗೆ ದೂರು ನೀಡಿದ್ದಾರೆ.ಭವಾನಿ ಶೆಟ್ತಿಯವರ ಪ್ರಕಾರ ಸುಮಾರು ಎರಡು ತಿಂಗಳಿಂದ ಅವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದ ಶಾಂತಾ ಕುಮಾರಿ ಮನೆಯಲ್ಲಿಟ್ಟಿದ್ದ ಗೋದ್ರೆಜ್ ಕಪಾಟಿನ ಕೀಲಿಗಳನ್ನು ಬಳಸಿ, ಕಪಾಟಿನಲ್ಲಿದ್ದ 6 ಚಿನ್ನದ ಬಳೆ ಮತ್ತು ಒಂದು ಚಿನ್ನದ ಸರವನ್ನು ಕಳವು ಮಾಡಿ, ಅದರ ಬದಲು ಆ ಆಭರಣಗಳನ್ನು ಹೋಲುವ ಆಭರಣಗಳನ್ನು ಕಪಾಟಿನ ಅದೇ ಸ್ಥಳದಲ್ಲಿ ಇಟ್ಟು ವಂಚನೆ ಮಾಡಿದ್ದಾಳೆಂದು ತಿಳಿಸಿದ್ದಾರೆ.
ಈ ದೂರನ್ನು ಕುಂದಾಪುರ ಗ್ರಾಮಾಂತರ ಠಾಣೆ ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.