ಕೋಟೇಶ್ವರ – ಗೀತಾ ಜಯಂತಿ ಆಚರಣೆ – ಸಾಮೂಹಿಕ ಗೀತಾ ಪಠಣ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಗೀತಾ ಜಯಂತಿಯ ಅಂಗವಾಗಿ ಕೋಟೇಶ್ವರದ ಶ್ರೀ ಶಂಕರ ಜಯಂತಿ ಭಜನಾ ಮಂಡಳಿಯವರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಠಣ ನಡೆಯಿತು. ಬೆಳಿಗ್ಗೆ 9ಕ್ಕೆ ಪಠಣ ಆರಂಭಿಸಿದ ತಂಡ ಮಧ್ಯಾನ್ಹ 12ರವರೆಗೂ ಗೀತೆಯ ಸಮಗ್ರ ಹದಿನೆಂಟು ಅಧ್ಯಾಯಗಳನ್ನು ಪಠಿಸಿದರು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸದಸ್ಯೆ ವಸಂತಿ ಮಿತ್ಯಂತ ಗೀತೆಯ ಶ್ರೇಷ್ಠತೆ ಮತ್ತು ಅದರ ಪಠಣದ ಮಹತ್ವವನ್ನು ವಿವರಿಸಿದರು. ಕೊನೆಯಲ್ಲಿ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು.