ಜೆಸಿಐ ಬೆಳ್ಮಣ್ ನ ಕಾರ್ಯದರ್ಶಿ ಜೆ ಸಿ ಸತೀಶ್ ಪೂಜಾರಿ ಅಬ್ಬನಡ್ಕ ಇವರಿಗೆ ಜೇಸಿಐ ಸಾಧನಾ ಶ್ರೀ ಪ್ರಶಸ್ತಿ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್: ಜೇಸಿಐ ಸಂಸ್ಥೆ ನೀಡುವ ಸಾಧನಾ ಶ್ರೀ ಪ್ರಶಸ್ತಿಯನ್ನು ಈ ವರ್ಷ ಜೆಸಿಐ ಬೆಳ್ಮಣ್ ನ ಕಾರ್ಯದರ್ಶಿ ಜೆ ಸಿ ಸತೀಶ್ ಪೂಜಾರಿ ಅಬ್ಬನಡ್ಕ ಪಡೆದುಕೊಂಡಿದ್ದಾರೆ.
ಕುಂದಾಪುರ ಕೋಟೇಶ್ವರದ ಕೃಷ್ಣ ಸಹನಾ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ಜೇಸಿ ವಲಯ ಹದಿನೈದರ ವಲಯ ವ್ಯವಹಾರ ಸಮ್ಮೇಳನದಲ್ಲಿ ವಲಯಾಧ್ಯಕ್ಷೆ JC PPP ಸೌಜನ್ಯಾ ಹೆಗ್ಡೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಹಾರ ವಿಭಾಗದ ಚೇರ್ಮನ್ Jc ಸಮದ್ ಖಾನ್, ಜೆಸಿಐ ಬೆಳ್ಮಣ್ ಅಧ್ಯಕ್ಷರಾದ JFM ಕೃಷ್ಣ ಪವಾರ್, ಜೆಸಿ ಚಿನ್ಮಯಿ, ಜೇಸಿ ದೀಕ್ಷಿತ್ ,ಜೆಸಿ ಲಿತಿಶಿಯಾ, ಜೆಸಿ ಅನ್ನಪೂರ್ಣ ಉಪಸ್ಥಿತರಿದ್ದರು.