ಕುಂದಾಪುರದಲ್ಲಿ ಗಾಂಜಾ ಹಾಗೂ ಬ್ರೌನ್ ಶುಗರ್ ಮಾರಾಟ ಯತ್ನ: ಒಬ್ಬನ ಬಂಧನ, 1.800 ಕೆ.ಜಿ ಗಾಂಜಾ ಹಾಗೂ ಬ್ರೌನ್ ಶುಗರ್ ವಶ

JANANUDI.COM NETWORK

ಕುಂದಾಪುರ, ದಿನಾಂಕ 21-10-2021 ರಂದು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ್ ಎನ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ  ರವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾದ ಶ್ರೀಕಾಂತ್ ಕೆ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಕುಂದಾಪುರ ಶಾಸ್ತ್ರೀಪಾರ್ಕ್ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಮಹಮ್ಮದ್ ಜಾಫರ್ ಗುಡುಮಿಯಾ, 28 ವರ್ಷ, ತಂದೆ : ಗುಡುಮಿಯಾ, ಅಸ್ಬಾಭಾಗ್, ಬಿಣಗಾ, ಕಾರವಾರ, ಉತ್ತರಕನ್ನಡ ಜಿಲ್ಲೆ ಎಂಬವನನ್ನು ದಸ್ತಗಿರಿ ಮಾಡಿ ಒಟ್ಟು 1 ಕೆ.ಜಿ 800 ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 40,000/- ರೂಪಾಯಿ ಹಾಗೂ 01 ಗ್ರಾಂ ಬ್ರೌನ್ ಶುಗರ್ ಅಂದಾಜು ಮೌಲ್ಯ 10,000/- ರೂಪಾಯಿ, 2 ಮೊಬೈಲ್ ಫೋನ್, 1,500 ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡು ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು

 ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅ.ಕ್ರ 116/2021 ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕಾರ್ಯಚರಣೆಯಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಛೇರಿಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ ಕುಮಾರ್, ರಮೇಶ ಕುಲಾಲ್, ಕುಂದಾಪುರ ಪೊಲೀಸ್ ಠಾಣೆಯ ರಾಘವೇಂದ್ರ ಮೊಗೇರ ಮತ್ತು ವಿಜೇತ್ ಹಾಗೂ ಜೀಪು ಚಾಲಕರಾದ ರಾಜು ರವರು ಭಾಗವಹಿಸಿರುತ್ತಾರೆ.