ಮೂಡ್ಲಕಟ್ಟೆ ಎಂ ಐ ಟಿ : ಇಂಜಿನಿಯರ್ ದಿನಾಚರಣೆ

JANANUDI.COM NETWORK

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮಚಾರಣೆ ದಿನ ಅಂಗವಾಗಿ ಇಂಜಿನಿಯರ್ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜ ರವರು ವಿಶ್ವೇಶ್ವರಯ್ಯ ರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಸರ್ ಎಂ ವಿ ರವರು ಪ್ರಾಮಾಣಿಕತೆ ಮತ್ತು ಸಾಧನೆಯ ವಿಷಯಗಳ ಮೇಲೆ ಪ್ರಾಂಶುಪಾಲರು ಹಲವು ಸನ್ನಿವೇಶಗಳನ್ನ ವಿವರಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸಂಸ್ಥಾಪಕಧ್ಯಕ್ಷ ರಾದ ದಿವಂಗತಾ ಐ ಎಂ ಜಯರಾಮ ಶೆಟ್ಟಿ ಅವರು ಒಬ್ಬ ಇಂಜಿನಿಯರ್ ಆಗಿದ್ದು, ಅವರ ಪ್ರತಿಮೆಗೆ ಕೂಡ ಮಾಲಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಡೀನ್, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನಕುಮಾರ್ ಸ್ವಾಗತಿಸಿ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ದೀಪಕ್ ಶೆಟ್ಟಿ ಧನ್ಯವಾದ ಅರ್ಪಿಸಿದರು.