ಉದ್ಧವ್‌ ಠಾಕ್ರೆಯ ಕಪಾಳಕ್ಕೆ ಬಾರಿಸುತ್ತೇನೆ ಎಂದ್ದ ಕೇಂದ್ರ ಸಚಿವ ನಾರಾಯಣ್‌ ರಾಣೆಯ ಬಂಧನ

JANANUDI.COM NETWORK

ಮುಂಬೈ,ಅ. 24.: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಮಂಗಳವಾರ ಮಹಾರಾಷ್ಟ್ರದ ರತ್ನಗಿರಿ ಪೊಲೀಸರು. ಬಂಧಿಸಿದ್ದಾರೆ

    ರತ್ನಗಿರಿಯ ಸಂಗಮೇಶ್ವರದಲ್ಲಿ ಜನಾಶೀರ್ವಾದ ಯಾತ್ರೆ ನಡೆಯುತ್ತಿರುವ ವೇಳೆ ಪೊಲೀಸ್‌ ಸಿಬ್ಬಂದಿ ನಾರಾಯಣ್‌ ರಾಣೆ ಅವರನ್ನು ಬಂಧಿಸಿದರು. ನನ್ನನ್ನು ಯಾರು ಏನು ಮಾಡಿಕೊಳ್ಳಲಾಗುವುದಿಲ್ಲ, ನನ್ನನ್ನು ಯಾರು ನಿರ್ಬಂಧಿಸಲಾಗುವುದಿಲ್ಲ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸಚಿವ ನಾರಾಯಣ್‌ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ನಾರಾಯಣ್‌ ರಾಣೆ ಅವರ ಬಂಧನದ ವೇಳೆ ಅರೆಸ್ಟ್‌ ವಾರೆಂಟ್‌ ಅನ್ನು ತೋರಿಸಿಲ್ಲ ಎಂದು ಕೇಂದ್ರ ಸಚಿವ ಪ್ರಮೋದ್‌ ಜತಾರ್‌ ಹೇಳಿದ್ದಾರೆ. ಒತ್ತಡದ ಹಿನ್ನೆಲೆ ಪೊಲೀಸರು ರಾಣೆ ಅವರನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಅರೆಸ್ಟ್‌ ವಾರೆಂಟ್‌ ತೋರಿಸಬೇಕು ಎಂಬ ಕಾನೂನಿದೆ. ಆದರೆ, ಪೊಲೀಸರು ನಿಯಮ ಪಾಲಿಸಿಲ್ಲ ಎಂದು ಹೇಳಿದ್ದಾರೆ.