ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವದು ಬಿಟ್ಟು ಕಮಿಷನ್‌ಗಾಗಿ ಪರದಾಟ ಕುರ್ಚಿಗಾಗಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ: ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಾಲೂರು : – ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವದು ಬಿಟ್ಟು ಕಮಿಷನ್ಗಾಗಿ ಪರದಾಟ ಕುರ್ಚಿ ಗಾಗಿ ಕಿತ್ತಾಟದಲ್ಲಿ ನಿರತರಾ ಗಿದ್ದಾರೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕಿಸಿದರು .
ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಶಾಸಕ ಕೆ.ವೈ. ನಂಜೇಗೌಡ ಅವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಕೋವಿಡ್ ಸೋ೦ಕು ನಿಯಂತ್ರಿಸಲು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕ ರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅವರು ಸೇವೆಂ ರನ್ನು ಗುರುತಿಸಿ ಗೌರವಪೂವ೯ಕವಾಗಿ ಹರಿಶಿಣ ಕುಂಕುಮ ಸೀರೆ ಕುಪ್ಪಸನೀಡಿ ಆಹಾರ ದಿನಸಿಗಳನ್ನು ವಿತರಿಸಿ ಮಾತನಾಡಿದರು . 
ಕೆವಿಡ್ ಸೋಂಕಿನ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದು ಅದರಂತೆ ಮರಣದ ಸಂಖ್ಯೆಯೂ ಹೆಚ್ಚಾಗಿದೆ ರಾಜ್ಯಸರ್ಕಾರ ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಜನರ ಸಾವಿಗೆ ಕಾರಣವಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕಿತರ ಉಸಿರಾಟಕ್ಕೆ ಕನಿಷ್ಠ ಆಕ್ಸಿಜನ್ ಕೊಡುವ ಕೆಲಸವನ್ನು ಸಹ ಮಾಡುತ್ತಿಲ್ಲ ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡುವುದನ್ನು ಬಿಟ್ಟು ವೈದ್ಯಕೀಯ ಸೌಲಭ್ಯಗಳಲ್ಲಿ ಕಮಿಷನ್ ಹಣ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ . ಆರ್ಥಿಕ ಸಂಕಷ್ಟದಲ್ಲಿರುವ ರೈತರು ಕೂಲಿ ಕಾರ್ಮಿಕರು ಬಡವ ರ್ಗದ ಜನತೆ ವಿವಿಧ ವೃತ್ತಿಬಾಂದ ‘ ವರಿಗೆ ರಾಜ್ಯ ಸರ್ಕಾರ ಎರಡು ಪ್ಯಾಕೇಜ್ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದರು . 
ತೆರಿಗೆ ಪಾವತಿಸುವಲ್ಲಿ ಎರಡನೇ ದೊಡ್ಡ ರಾಜ್ಯ ಕರ್ನಾಟಕ ಆದರೆ ತೆರಿಗೆ ಕಡಿಮೆ ಪಾವತಿಸುವ ರಾಜ್ಯಗಳಿಗೆ ಆಕ್ಸಿಜನ್ ಹಾಗೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ ರಾಜ್ಯದಲ್ಲಿ ಬಿಜೆಪಿಯ  ಸಂಸದರನ್ನು ರಾಜ್ಯದ ಜನತೆ ಆಯ್ಕೆಮಾಡಿದ್ದಾರೆ ಆದರೆ ರಾಜ್ಯದ ಪಾಲಿಗೆ ಬೇಕಾಗಿರುವ ತೆರಿಗೆ ಹಣವನ್ನು ನೀಡುತ್ತಿಲ್ಲ ಅಲ್ಲದ ಜನರ ಉಸಿರಾಟದ ಪ್ರಾಣಾಯಾಮ ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳ ಅಗತ್ಯವಿರುವ ಬಗ್ಗೆ ಬಬ್ಬ ಸಂಸದರು ಸಹ ಪ್ರಧಾನ ಮಂತ್ರಿಗಳ ಬಳಿ ಧ್ವನಿ ಎತ್ತಿಲ್ಲ . ಜನರಪ್ರಾಣ ಉಳಿಸುವ ಚಿಂತೆಯನ್ನು ಬಿಟ್ಟು ಕೇವಲ ಅಧಿಕಾರಕ್ಕಾಗಿ ಕಚ್ಚಾಡುತಿದ್ದಾರೆ ಅವರಿಗೆ ಇದು ಸಮಯವೇ ಎಂದರು . ಸೋಂಕಿತರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಹೆಸರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಣ ಲೂಟಿ ಮಾಡಿಕೊಂಡು ಕುರ್ಚಿಗಾಗಿ ಕಚ್ಚಾಟದಲ್ಲಿ ಮುಳುಗಿಹೋಗಿದ್ದಾರೆ ಜನರ ಪ್ರಾಣ ಉಳಿಸುವ ಚಿಂತೆ ಮಾಡುತ್ತಿಲ್ಲ ಈ ಸರ್ಕಾರ ಕೇವಲ 20 % ಕಮೀಷನ್ ಸರ್ಕಾರವಾಗಿದೆ. 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದಿನ ಸಮ್ಮಿಶ್ಕಾಂಗ್ರೆಸ್ ಸರ್ಕಾರವನ್ನು 10 % ಸರ್ಕಾರ ಎಂದು ಹೇಳುತ್ತಿದ್ದರು ಅಂದ್ರೆ ಈಗಿನ ರಾಜ್ಯ ಸರ್ಕಾರ ಜಿ.ಎಸ್ ಟಿ ಜೊತೆಗೆ ವಿ.ಎಸ್.ಟಿ ಅಂದ್ರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ 20 % ಕಮೀಷನ್ ಸರ್ಕಾರಿವಾಗಿದೆ ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಣಿ ಸಲಿಲ್ಲವೇ ಎಂದು ಪ್ರಶ್ನಿಸಿದರು . ಜನಗಳ ಪ್ರಾಣ ಉಳಿಸುವುದು ಬಿಟ್ಟು ಪ್ರಾಣ ಇರುತ್ತಿದ್ದಾರೆ ಗ್ರಾಮೀಣ ಭಾಷೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಸರ್ಕಾರ ಧರ್ಮದ ಹೆಸರಿನಲ್ಲಿ ರಾಮನ ಹೆಸರಿನಲ್ಲಿ ಜನರ ಬಳಿ ಮತ ಹಾಕಿಸಿಕೊಂಡು ಜನರ ಕಷ್ಟ ನೊಡದೆ ಅಧಿಕಾರಕ್ಕಾಗಿ ಕಚ್ಚಾಡುತಿದ್ದಾರೆ . ಕೋರೆನಾದಿಂದ ರಾಜ್ಯದಲ್ಲಿ ತತ್ತರಿಸಿಹೋಗಿರುವ ಜನತೆಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್ 89 ಸಾವಿರ ಜನ ರೈತರಿಗೆ ಮಾತ್ರ ಆದರೆ 2 ಲಕ್ಷ ರೈತರಿಗೆ ಪ್ಯಾಕೇಜ್ ತಲುಪುತ್ತಿಲ್ಲ ಇದು ಕೇವಲ ಸರ್ಕಾರದ ರೈತರ ಕಣೋರೆಸುವ ತಂತ್ರವಾಗಿದೆ ರೈತರ ಬಡವರ ಜನಪರವಲ್ಲದ ಸರ್ಕಾರವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸರ್ಕಾರವನ್ನು ಕಿತ್ತೊಗೆಂರುವ ಕೆಲಸ ಮಾಡಬೇಕು ಎಂದರು .
ಕೋಲಾರ ಜಿಲ್ಲೆಯ ಜನರು ಶ್ರಮಜೀವಿಗಳ ಆಗಿದ್ದು ಛಲವನ್ನು ಹೊಂದಿದ್ದಾರೆ ರೈತರು ಸ್ವಾಭಿಮಾನಿಯಾಗಿ ಬದುಕುವುದಕ್ಕೆ ನೆರವು ನೀಡಿದ್ದು ಕಾಂಗ್ರೆಸ್ ಸರ್ಕಾರ ಸರ್ಕಾರದ ಅವಧಿಯಲ್ಲಿ 1200 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಅದರಂತೆ ಕಾಮಗಾರಿ ಮುಗಿದು ಜಿಲ್ಲೆಯ ಕೆಲವೇ ಕೆರೆಗಳಿಗೆ ನೀರು ಹರಿಯುತ್ತಿವೆ ಕೆಸಿ ವ್ಯಾಲಿ ಎರಡನೇ ಹಂತದಲ್ಲಿ ಕ್ಯೂ ಹೆಚ್ಚು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕೋಟಿ ರೂಗಳನ್ನು ಬಜೆಟ್ನಲ್ಲಿ ನಿಗದಿಪಡಿಸಿ ಬಿಡುಗಡೆ ಮಾಡಲಾಗಿತ್ತು ಅದರಂತೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಗುತ್ತಿಗೆದಾರರು ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದು ಈಗಿನ ಸರ್ಕಾರಕ್ಕೆ ಕಮಿಷನ್ ನೀಡಿಲ್ಲ ವೆಂದು ಎರಡನೇ ಹಂತದ ಯೋ ಜನೆಗೆ ಹಸಿರು ನಿಶಾನೆ ನೀಡಿಲ್ಲ , ಎರಡು ವರ್ಷವಾದರೂ ಇದುವರೆಗೂ ಕಾಮಗಾರಿಯನ್ನು ಪ್ರಾರಂಭಿಸಲಿಲ್ಲ ಎಂದರು ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ಇದುವರೆಗೂ ಪ್ರಗತಿ ಕಾಣಲಿಲ್ಲ ಜಿಲ್ಲೆಯ ಕೆಲಸ ಮಾಡುವವರನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ ಸ್ಥಗಿತಕೊಡಿರುವ ನೀರಾವರಿಯೋ ಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು .
ಮಾಜಿ ಸಚಿವ ಜಮೀರ್ ಅಹ್ಮದ್‌ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಡವರ ಪರವಾಗಿ ಕಾಳಜಿ ಇಲ್ಲ ಕೋವಿಡ್ ಸಂದಭ೯ದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಸೋಂಕಿನಿಂದ ಮೃತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದಾರೆ ಸೋಂಕಿನ ಪ್ರಮಾಣ ಮೃತರ ಸಂಖ್ಯೆ ಸಮರ್ಪಕ ಮಾಹಿತಿ ನೀಡುತಿಲ್ಲ ರಾಜ್ಯದಲ್ಲಿ ಇದುವರೆಗೂ 20 ಸಾವಿರ ಮಂದಿ ಸೋಂಕಿನಿಂದ ಮೃತರಾಗಿದ್ದಾರೆ ಮೃತರ ಕುಟು೦ಬಗಳಿಗೆ ಪರಿಹಾರ ನೀಡಲಿಲ್ಲ ಸಚಿವರು ಕೋವಿಡ್ ಹೆಸರಿನಲ್ಲಿ ಹಣ ಮಾಡುವುದರಲ್ಲಿ ತೊಡಗಿದ್ದಾರೆ ಎಂದರು . 
ಕೇಂದ್ರ ಸರ್ಕಾರ ಪ್ರಧಾ ನಮಂತ್ರಿಗಳು ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು ಲಸಿಕೆ ತೆಗೆದುಕಕೊಂಡರೆ ಮಾತ್ರ ನಾವು ಜೀವಿ ಸುತ್ತವೆ ಸಲಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ ಆಶಾಕಾರ್ಯಕತೆಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು ಗಗನಕ್ಕೇರಿರುವ ಬೆಲೆಗೆಳನ್ನು ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಬಿಜೆಪಿ ಜಾತಿ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ ಬಡವರಿಗೆ ಸಹಾಯ ಮಾಡುವುದು ನಮ್ಮ ಧರ್ಮ , ಕಾಂಗ್ರೆಸ್ ಪಕ್ಷದ ಎಲ್ಲಾ ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಸಂದರ್ಭದಲ್ಲಿ ರೈತರು ಬಡವರು ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದರು. ಕೋರೊನಾ ಕಷ್ಟಕಾಲದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ದಿನಸಿ ವಿತರಿಸುವ ಮೂಲಕ ವಿಶೇಷವಾಗಿ ಇಲ್ಲಿನ ಶಾಸಕ ಕೆ.ವೈ.ನಂಜೇಗೌಡ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಅತ್ಯಂತ ಸಕ್ರಿಯ ಶಾಸಕರು ಕ್ಷೇತ್ರದ ಅಭಿವೃದ್ಧಿ ಜನಗಳಿಗೆ ಸಹಾಯ ಮಾಡುವುದರಲ್ಲಿ ಅಭಿವೃದ್ಧಿಪರ ಕ್ರಿಯಾಶೀಲರಾಗಿದ್ದಾರೆ ಕೋವಿ ಸಂದರ್ಭದಲ್ಲಿ ಸೋಂಕಿತರ ನೋವಿನಲ್ಲಿ ಇರುವ ವರಿಗೆ ಸ್ಪಂದಿಸಿ ಜನಸಾಮಾನ್ಯರಿಗೆ ನೆರವಾಗುತ್ತಿದ್ದಾರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಭಿನಂದಿಸುವುದಾಗಿ ತಿಳಿಸಿದರು .

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕೋವಿಡ್ ಸೋಂಕು ತಡೆಗಟ್ಟಲು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಕೋವಿಡ್ ಸಂದ ರ್ಭದಲ್ಲಿ ಕೋವಿಡ್ ಸೋಂಕು ತಡೆಗಟ್ಟಲು ಕರೋನಾ ವಾರಿಯರ್ಸ್ಗಳಾಗಿ ಆಶಾ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವೈದ್ಯರು ಸಿಬ್ಬಂದಿ ಸೇನಾನಿಗಳ ಹೋರಾಟದ ಹಾದಿಯಲ್ಲಿ ಶ್ರಮಿಸುತ್ತಿದ್ದಾರೆ ಇವರ ಸೇವೆ ಶ್ಲಾಘನೀಯವಾಗಿದೆ ಪ್ರತಿನಿತ್ಯ ತಾಲೂಕು ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಸಮಿತಿ ಸಭೆ ಸೇರಿ ಚರ್ಚಿಸಿ ತಾಲೂಕಿನ ಅಭಿವೃದ್ಧಿಯನ್ನು ಬದಿಗೊತ್ತಿ ತಾಲೂಕು ಆಡಳಿತ ಶ್ರಮಿಸುತ್ತಿದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಆದೇಶದಂತೆ  ಕರೋನಾ ವಾರಿಯ ರ್ಸ್ ಆಗಿ ಸೇವೆಸಲ್ಲಿ ಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಆಹಾರಗಳನ್ನು ವಿತರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಅಸ್ಲಾಂ ಪಾಷಾ , ಜಿಪಂ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ , ಪುರಸಭಾಧ್ಯಕ್ಷ ಮುರಳಿಧರ್ , ಉಪಾಧ್ಯಕ್ಷೆ ಭಾರತ ‘ ಮ್ಮ ಶಂಕರಪ್ಪ , ಸದಸ್ಯರಾದ ಮಂಜುನಾಥ್ ಇಮ್ಮಿಯಾಜ್ ಖಾನ್ , ಚೈತ್ರ ರವಿಕುಮಾರ್ , ಗ್ರಾಪಂ ಅಧ್ಯಕ್ಷ ಹೇಮಾಮಾಲಿನಿ , ತಾಪಂ ಉಪಾಧ್ಯಕ್ಷ ನಾಗವೇಣಿ , ಸಹಕಾರ ಯೂನಿಯನ್ ಉಪಾ ಧ್ಯಕ್ಷ ಗೋವರ್ಧನ್ ರೆಡ್ಡಿ , ಜಿಪಂ ಮಾಜಿ ಸದಸ್ಯ ಹನುಮಂತರೆಡ್ಡಿ , ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮಿ ನಾರಾಯಣ್ , ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ , ಮುಖಂಡರಾದ ಅಂಜನಿಸೋಮಣ್ಣ , ಸಿಎಂ ಅಶೋಕ್ ಕುಮಾರ್ , ಸಂತೇಹಳ್ಳಿ ನಾರಾಯಣಸ್ವಾಮಿ ಮಧುಸೂ ದನ್ , ಅಶ್ವತ್‌ರೆಡ್ಡಿ , ಪ್ರದೀಪ್‌ರೆಡ್ಡಿ , ಮೈಲಾಂಡಹಳ್ಳಿ ನಾರಾಯಣ ಸ್ವಾಮಿ , ಬ್ಯಾಲಹಳ್ಳಿ ರಮೇಶ್ , ಯುವ ಕಾಂಗ್ರೆಸ್ ಅಧ್ಯಕ್ಷ ತಸ್ವೀರ್ ಅಹ್ಮದ್ , ಇದ್ದರು .