ಆರ್ ಸಿ ಸಿ ರೋಟರಿಯ ಅವಿಭಾಜ್ಯ ಅಂಗ ;ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ರಾಜಾರಾಂ ಭಟ್

JANANUDI.COM NETWORK


ಬೀಜಾಡಿ: ಆರ್‍ಸಿಸಿಯ ಕೆಲಸಗಳಲ್ಲಿ ರೋಟರಿಯವರು ಹೆಚ್ಚು ಹೆಚ್ಚಾಗಿ ಭಾಗವಹಿಸಬೇಕು. ಅವರ ಕಾರ್ಯಕ್ರಮಗಳು ರೋಟರಿಗೆ ಪೂರಕವಾಗಿದ್ದು, ಆರ್‍ಸಿಸಿ ರೋಟರಿಯ ಅವಿಭಾಜ್ಯ ಅಂಗವಾಗಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಹೇಳಿದರು.
ಅವರು ಭಾನುವಾರ ಕೋಟೇಶ್ವರ ವಿಶ್ವಕರ್ಮ ಸಭಾಭವನದಲ್ಲಿ ನಡೆದ ಕೋಟೇಶ್ವರ ರೋಟರಿ ಕ್ಲಬ್, ರೋಟರಿ ಸಮುದಾಯ ದಳ ಕೊರವಡಿ ಮತ್ತು ಬೀಜಾಡಿ ಇವರ ಆಶ್ರಯದಲ್ಲಿ ರೋಟರಿ ಸಮುದಾಯ ದಳದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣಮೂರ್ತಿ ಪಿ.ಕೆ ವಹಿಸಿದ್ದರು. ಸಾಂಸ್ಕøತಿಕ ಕಾರ್ಯಕ್ರಮವನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವಲಯ 2ರ ಅಸಿಸ್ಟೆಂಟ್ ಗನರ್ವರ್ ಸುರೇಶ್ ಬೇಳೂರು, ಝೋನಲ್ ಲೆಫ್ಟಿನೆಂಟ್ ಶಂಕರ ನಾಯ್ಕ, ಜಿಲ್ಲಾ ಆರ್‍ಸಿಸಿ ಪ್ರತಿನಿಧಿ ನಾಗರಾಜ ಹೆಚ್.ಎನ್ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ಕೊರವಡಿ ರೋಟರಿ ಸಮುದಾಯ ದಳ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಬೀಜಾಡಿ ರೋಟರಿ ಸಮುದಾಯ ದಳ ಅಧ್ಯಕ್ಷ ಗಿರೀಶ್ ಕೆ.ಎಸ್, ರೋಟರಿ ಕ್ಲಬ್ ಕೋಟೇಶ್ವರದ ಆರ್‍ಸಿಸಿ ಸಭಾಪತಿ ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಚೇರ್‍ಮೆನ್ ಗಣೇಶ್ ಶೆಟ್ಟಿ ಎಂ ಸ್ವಾಗತಿಸಿದರು. ಆರ್‍ಸಿಸಿ ಜಿಲ್ಲಾ ಚೇರ್‍ಮೆನ್ ಪ್ರಭಾಕರ ಬಿ.ಕುಂಭಾಶಿ ಪ್ರಾಸ್ತಾವನೆಗೈದರು. ಕೋಟೇಶ್ವರ ರೋಟರಿ ಕ್ಲಬ್ ಕಾರ್ಯದರ್ಶಿ ನಾಗೇಶ್ ಶೆಟ್ಟಿಗಾರ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.