ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

JANANUDI.COM NETWORK

ಕುಂದಾಪುರ,ಎ.15 ಸಂತ ಜೋಸೆಫರ ಪ್ರೌಢ ಶಾಲೆಯ ಸಬಾಂಗಣದಲ್ಲಿ ಎ.14 ರಂದು ಡಾ| ಬಿ.ಆರ್.ಆಂಬೇಡ್ಕರ್‍ರವರ ಭಾವ ಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವುದರ ಮೂಲಕ ಆಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿಯವರು ‘ಡಾ| ಬಿ.ಆರ್.ಆಂಬೇಡ್ಕರ್‍ರವರ ಸಂವಿಧಾನದಿಂದ ನಾವಿತ್ತು ಜಗತ್ತಿನ ಅತ್ಯುನತ್ತ ಸಂವಿಧಾನವನ್ನು ಪಡೆದುಕೊಂಡ ರಾಷ್ಟ್ರದಲ್ಲಿ ಬದುಕುತಿದ್ದೆವೆ, ಭಾರತದ ಎಲ್ಲಾ ಜಾತಿ ಮತ ಭೇದದ ಜನರು ಜೀವಿಸಲು, ಮಾನತ್ಚವಾದಿ ತತ್ವದೊಂದಿಗೆ ರೂಪಿಸಿದ ಸಂವಿಧಾನದ ಅಡಿ ಬದುಕುತಿದ್ದೆವೆ, ಅಂಬೇಡ್ಕರ್ ಜಗತ್ತಿಗೆ ಮಾದರಿ’ ಎಂದು ಅಂಬೇಡ್ಕರ್ ಜಯಂತಿಯ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
.