ಶ್ರೀನಿವಾಸಪುರ : ಅಧಿಕಾರಿಗಳು ಬಡವರ ಹೊಟ್ಟೆ ಹೊಡೆಯುವುದು ಒಳ್ಳೆಯದಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು

ವರದಿ ;ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಪಟ್ಟಣದ ಹೊರ ವಲಯದ ಪುಂಗನೂರು ಕ್ರಾಸ್ ಸಮೀಪ ಕೆಲವರು ರಸ್ತೆ ಬದಿಯಲ್ಲಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿರುವುದನ್ನು ಶುಕ್ರವಾರ ನೋಡಿದ ಬಳಿಕ ಮಾತನಾಡಿದ ಅವರು , ಐದು ಮಂದಿ ಬಡವರ ರಸ್ತೆ ಅಂಚನ್ನು ಬಿಟ್ಟು ಅಂಗಡಿ ಮಳಿಗೆ ನಿರ್ಮಿಸಿಕೊಂಡು , ಕೆಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು . ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ವಿವೇಚನಾರಹಿತ ಕ್ರಮದಿಂದಾಗಿ ಅವರ ತುತ್ತಿಗೆ ಕಲ್ಲುಬಿದ್ದಂತಾಗಿದೆ ಎಂದು ಹೇಳಿದರು . ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಹುಸೇನ್ ಸಾಬ್ , ಎಂಜಿನಿಯರ್‌ಗಳಾದ ಎಲ್.ಎಂ.ನಾಗರಾಜ್ , ನಾಗರಾಜ್ , ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ,ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ , ಗೋಪಾಲರೆಡ್ಡಿ , ವೇಣು , ರಾಮಾಂಜಮ್ಮ , ಈರಪ್ಪ , ಶ್ರೀನಿವಾಸ್ , ಹರೀಶ್ ಯಾದವ್ , ಅಂಗಡಿ ಕಳೆದುಕೊಂಡಿರುವ ಶ್ರೀರಾಮರೆಡ್ಡಿ , ಮಂಜುನಾಥ್ , ಸುಶೀಲಮ್ಮ, ಉಮಾಶ್ರೀ , ಸರಸ್ವತಮ್ಮ ಇದ್ದರು .