ಕುಂದಾಪುರದ‌‌ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದಿವಂಗತ ಡಾ.ಆರ್. ಎನ್. ಶೆಟ್ಟಿವರಿಗೆ ಶೃದ್ಧಾಂಜಲಿ ಸಭೆ.

JANANUDI.COM NETWORK

ಕುಂದಾಪುರ,ಡಿ.18: ಸ್ವರ್ಗಸ್ಥರಾದ ಕೈಗಾರಿಕೋದ್ಯಮಿ, ಹಲವು ಪ್ರಕಲ್ಪಗಳ ರೂವಾರಿ, ಶಿಕ್ಷಣಶಿಲ್ಪಿ, ಪದ್ಮಭೂಷಣ ಡಾ. ಆರ್. ಎನ್. ಶೆಟ್ಟಿಯವರ ಪುಣ್ಯಸ್ಮೃತಿಯ ಅಂಗವಾಗಿ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯರು ಡಾ. ಆರ್. ಎನ್ .ಶೆಟ್ಟಿಯವರ ಜೀವನಗಾಥೆಯನ್ನು ವಿವರಿಸಿ ಅಗಲಿದ ಮಹಾಚೇತನಕ್ಕೆ ಶಾಂತಿ ಕೋರಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ. ಭಾಂಡ್ಯ ಸುಧಾಕರ ಶೆಟ್ಟಿಯವರು ವಿವಿಧ ರಂಗಗಳಲ್ಲಿ ಡಾ. ಆರ್. ಎನ್.‌ ಶೆಟ್ಟಿಯವರ ಉದಾರ ಮನದ ಕೊಡುಗೈ ದಾನದ ಗುಣಗಳ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ನವೀನ ಕುಮಾರ ಶೆಟ್ಟಿಯವರು ರಾಜ್ಯದೆಲ್ಲೆಡೆ ಪಸರಿಸಿದ ಡಾ. ಆರ್. ಎನ್. ಶೆಟ್ಟಿಯವರ ಸಾಧನೆಗಳು ಮತ್ತು ಶೈಕ್ಷಣಿಕ ಕೊಡುಗೆಗಳನ್ನು ತಿಳಿಸಿ, ನಮ್ಮ ವಿದ್ಯಾಸಂಸ್ಥೆಗೆ ನೀಡಿದ ಧನಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿ, ಮೃತರ ಆತ್ಮಕ್ಕೆ ಸದ್ಗತಿ ಕೋರಿದರು. ಸ್ವರ್ಗೀಯ ಡಾ. ಆರ್.‌ ಎನ್. ಶೆಟ್ಟಿಯವರ ಪುಣ್ಯಸ್ಮರಣೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುವರು ಮತ್ತು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿಗಳು ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.