ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಂಘದ ಮಹಾಸಭೆ

JANANUDI.COM NETWORK

ಕುಂದಾಪುರ: ಸ್ಥಳೀಯ ಭಂಡಾರ ಕಾರ್ಸ್ ಕಾಲೇಜಿನ 1985-86ನೇ ಸಾಲಿನ ಸಮಾನ ಮನಸ್ಕ ಬಿಕಾಂ ಪದವಿ ವಿದ್ಯಾರ್ಥಿಗಳಿಂದ ಆರಂಭಗೊಂಡ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ರಾಜ್ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.    ಸಂಘವು ಸೇವಾ ಮನೋಭಾವ ಹಾಗೂ ಅತ್ಯಂತ ಪಾರದರ್ಶಕವಾಗಿ ವ್ಯವಹಾರ ನಡೆಸುತ್ತಿದ್ದು,ಸರ್ವ ಸದಸ್ಯರ ಸಹಕಾರದಿಂದ ಪ್ರಗತಿಯ ಪಥ ದಲ್ಲಿ ಸಾಗುತ್ತಿದೆ. ಸಿಬಂದಿಗಳ ಉತ್ತಮ ಸೇವೆಯಿಂದ ಗ್ರಾಹಕ ವಲಯದಲ್ಲೂ ಹೆಸರನ್ನು ಗಳಿಸಿರುವುದು ಹೆಮ್ಮೆಯ ವಿಚಾರ ಎಂದು ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಹೇಳಿದರು.                      ಸಂಘದ ಕಾರ್ಯದರ್ಶಿ ಜಗನ್ನಾಥ್ ಪುತ್ರನ್ ಸಂಘದ ನಡಾವಳಿಗಳನ್ನು ಮಂಡಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ವಿನಯ ಪಾಯ್ಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಒಜಲಿನ್ ರೆಬೆಲ್ಲೋ, ನಿರ್ದೇಶಕರಾದ ಶಿವಮೂರ್ತಿ ಭಂಡಾರ ಕಾರ್, ನಾಗರಾಜ್ ಶೇರಿಗಾರ್,ವಸಂತ ಶೆಟ್ಟಿ ಉಪಸ್ಥಿತರಿದ್ದರು.ನಿರ್ದೇಶಕ ರಾಜೀವ ಕೋಟ್ಯಾನ್ ವಂದಿಸಿದರು.