ಶ್ರೀ ಕುಂಭಾಸಿ ಸೋದೆ ಮಠದಲ್ಲಿ ಸಾಮೂಹಿಕ ತಿಲತರ್ಪಣ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಸರ್ವಪಿತೃ ಅಮಾವಾಸ್ಯೆಯ ಗುರುವಾರದಂದು ಸೋದೆ ಶ್ರೀ ವಾದಿರಾಜ ಮಠದ ಮೂಲ ಮಠವಾದ ಶ್ರೀ ಕುಂಭಾಸಿ ಮಠದಲ್ಲಿ ಸಾಮೂಹಿಕ ತಿಲತರ್ಪಣ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಮಠದ ವ್ಯವಸ್ಥಾಪಕ ಕುಂಭಾಸಿ ಲಕ್ಷ್ಮೀನಾರಾಯಣ ಪುರಾಣಿಕರ ನೇತೃತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ವಿಪ್ರರು ಶ್ರೀ ಹರಿಹರ ಮಹಾಲಿಂಗೇಶ್ವರ ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನಗೈದು ತಮ್ಮ ಕುಟುಂಬದ ಅಗಲಿದ ಹಿರಿ – ಕಿರಿಯ ಸದಸ್ಯರು, ಆಚಾರ್ಯರು, ಬಂಧು – ಮಿತ್ರರಿಗೆ ಸದ್ಗತಿ ಕೋರಿ ಸಾಮೂಹಿಕ ತಿಲತರ್ಪಣ ನೀಡಿದರು. ವೇದಮೂರ್ತಿ ತ್ರಿವಿಕ್ರಮ ಗೋಟರು ಮಹಾಲಯ ಅಥವಾ ಸರ್ವಪಿತೃ ಅಮಾವಾಸ್ಯೆಯ ಮಹತ್ವ, ತಿಲತರ್ಪಣದ ಅಗತ್ಯಗಳನ್ನು ವಿವರಿಸಿ, ತರ್ಪಣದ ವಿಧಿವಿಧಾನಗಳನ್ನು ನೆರವೇರಿಸಿದರು.