ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ

JANANUDI.COM NETWORK

 

ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ

 

 

 

ಕುಂದಾಪುರ,ಜು.೧; ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ ಹಾಗೂ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಜೂನ್ ೩೦ ರಂದು ನಡೆಸಲಾಯಿತು. ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಶಂಕರನಾರಾಯಣ ಇವರು ನೆರೆದಿರುವ ಸಭೀಕರನ್ನು ಸ್ವಾಗತಿಸಿದರು. ರೋಟರಿಯ ನಿಯೋಜಿತ ಅಧ್ಯಕ್ಷರಾದ ರೋ. ಡಾ. ಉತ್ತಮ್ ಕುಮಾರ್ ಶೆಟ್ಟಿ ಇವರು ಗಿಡದ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ರೋಟರಿ ಅಧ್ಯಕ್ಷರಾದ ರೋ. ದೇವರಾಜ್ ಇವರು ನೆರೆದಿರುವವರಿಗೆ ಗಿಡಗಳನ್ನು ವಿತರಿಸಿದರು. ರೋ. ಜುಡಿತ್ ಮೆಂಡೋನ್ಸಾ ಧನ್ಯವಾದ ಸಮರ್ಪಿಸಿದರು. ಈ ಸಂಧರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್. ಗೊಂಡ, ರೋಟರಾಕ್ಟ್ ಅಧ್ಯಕ್ಷರಾದ ಆಲ್ಡ್ರಿನ್ ಡಿಸೋಜಾ, ರೋ. ಕೆ. ಕೆ. ಕಾಂಚನ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.