ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ!: ಕೊರೊನಾಕ್ಕೆ ಮುಕ್ತಿ ದೊರೆಯಬಹುದು, ಆದರೆ ಮೇಲ್ಸೆತುವೆಗೆ ಮುಕ್ತಿ ದೊರಕದು

JANANUDI.COM NETWORK

ಪೋಟೊ: ಚಂದ್ರಶೇಖರ ಶೆಟ್ಟಿ, ಕುಂದಾಪುರ

 

 

ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ!: ಕೊರೊನಾಕ್ಕೆ ಮುಕ್ತಿ ದೊರೆಯಬಹುದು, ಆದರೆ ಮೇಲ್ಸೆತುವೆಗೆ ಮುಕ್ತಿ ದೊರಕದು

 

 

 

ಕುಂದಾಪುರ, ಜೂ.14 ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ! ಈಜು ಕೊಳ ಕಾಮಾಗಾರಿ ಪ್ರಗತಿಯಲ್ಲಿದೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ! ಎಂದು ಯಾರೊ ಟಿ.ಟಿ. ರೋಡ್ ಹತ್ತಿರ ಒಂದು ಬ್ಯಾನರ್ ಹಾಕಿದ್ದಾರೆ.
ಹೆದ್ದಾರಿ 66 ರ ಕಾಮಾಗಾರಿ ಕುಂಟುತ್ತಾ ಇದ್ದು, ದಶಕಗಳೇ ಕಳೆದರೂ, ಇನ್ನೂ ಸಮರ್ಪಕವಾಗಿ ಮುಗಿಯದೆ, ಮಳೆ ನೀರು ಸರಾಗವಾಗಿ ಹರಿಯುಗಿವಂತೆ ಮಾಡಲು ವಿಫಲರಾಗಿ, ನೀರು ರಸ್ತೆಯಲ್ಲೇ ನಿಂತು ಈಜು ಕೊಳದಂತ್ತೆ ಆಗಿದ್ದು, ಇದನ್ನು ಸರಿಪಡಿಸಲಿಕ್ಕಾಗಿ, ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನ ಹರಿಸಲು ಈ ಬ್ಯಾನರನ್ನು ಹಾಕಿರಬಹುದೆಂದು ಚಿಂತಿಸಬಹುದು.
ಹೆದ್ದಾರಿ ಮತ್ತು ಮೇಲ್ಸೆತುವೆ ಹಲವು ವರ್ಷಗಳ ನಂತರವೂ ಮುಗಿಯದೇ ಇರುವುದರಿಂದ ಜನರು ಹತಾಶರಾಗಿದ್ದಾರೆ. ಸಾಂಕ್ರಮಿಕ ರೋಗ ಕೊರೊನಾಕ್ಕೆ ಮುಕ್ತಿ ದೊರೆಯ ಬಹುದಾದರೂ, ಕುಂದಾಪುರದ ಹೆದ್ದಾರಿ ಮತ್ತು ಮೇಲ್ ಸೇತುವೆಗೆ ಮುಕ್ತಿ ದೊರೆಯದು ಎಂದು ಜನ ಮಾತಾಡಿಕೊಳ್ಳ ತೊಡಗಿದ್ದಾರೆ