ಬೇತಮಂಗಲ : ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

ಬೇತಮಂಗಲ : ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು

 

 

 

 

ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣವು ದಾಖಲಾಗಿದೆ.
ಬೇತಮಂಗಲ ಹೋಬಳಿ ಬರ್ಲಿ ಗ್ರಾಮದ ವಿಮಲ ಎಂಬಾಕೆಯು ರವಿ ಎಂಬುವರನ್ನು 2013ನೇ ಸಾಲಿನಲ್ಲಿ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಮದುವೆಯ ಸಂದರ್ಭದಲ್ಲಿ ತವರು ಮನೆಯವರು ನೀಡಿದ್ದ ವರದಕ್ಷಿಣೆಯು ಸಾಲದೆಂದು, ಇನ್ನೂ ತರುವಂತೆ ವಿಮಲಳನ್ನು ಪೀಡಿಸುತ್ತಿದ್ದುದಲ್ಲದೇ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದು, ಪ್ರಸ್ತುತ ಒಡೆದು ಗಾಯಪಡಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರು ನೀಡಿರುತ್ತಾರೆ.
ವಿಮಲ ದೂರಿನನ್ವಯ ಬೇತಮಂಗಲ ಪೊಲೀಸರು ವಿಮಲಳ ಗಂಡ ರವಿ ಸೇರಿದಂತೆ ಅವರ ಕುಟುಂಬಸ್ಥರಾದ ಮೂರ್ತಿ, ರಮೇಶಪ್ಪ, ಶ್ಯಾಮಲಮ್ಮ, ಕಲ್ಪನಾ, ಸುಬ್ರಮಣಿ ರವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.