ಕೆನರಾ ಬ್ಯಾಂಕ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಕೊಡುಗೆ

JANAUNUDI.COM NETWORK

 

 

ಕೆನರಾ ಬ್ಯಾಂಕ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ಕೊಡುಗೆ 

 

ಕುಂದಾಪುರದ ಕೆನರಾಬ್ಯಾಂಕ್ ಶಾಖೆಯ ವತಿಯಿಂದ ಆರಕ್ಷಕ ಇಲಾಖೆ ಹಾಗೂ ಸಾರ್ವಜನಿಕರಿಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್‍ನ್ನು ನೀಡಲಾಯಿತು. ಕುಂದಾಪುರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕೆನರಾಬ್ಯಾಂಕ್ ಚೀಪ್ ಮೆನೇಜರ್ ಎಂ.ಪಿ.ನಂದನ , ಸೀನಿಯರ್ ಮೆನೇಜರ್ ರತ್ನಾಕರ ಗಾಣಿಗ ಹಾಗೂ ಕುಂದಪ್ರಭ ಸಂಸ್ಥೆಯ ಯು.ಎಸ್.ಶೆಣೈ ಅವರು ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಅವರಿಗೆ ಪೆಟ್ಟಿಗೆಗಳನ್ನು ಹಸ್ತಾಂತರಿಸಿದರು.
ಕೆನರಾಬ್ಯಾಂಕಿನ ರಾಜೇಂದ್ರ, ಕುಂದನ್, ರಾಮ ದೇವಾಡಿಗ ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಅವರು ಮಾತನಾಡಿ, “ಕೊರೊನಾ ನಿಯಂತ್ರಣದಲ್ಲಿ ಕೆನರಾಬ್ಯಾಂಕ್ ಒದಗಿಸಿದ ಸೌಲಭ್ಯಗಳು ಬಹಳ ಉಪಯುಕ್ತವಾಗಿದ್ದು, ಇವುಗಳನ್ನು ಕುಂದಾಪುರ ವೃತ್ತದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಉಪಯೋಗಿಸಲಾಗುವುದು” ಎಂದರು.