ಖ್ಯಾತ ಸಿನಿಮಾ ನಿರ್ಮಾಪಕ ವಿಕೆ ಮೋಹನ್  ಬೆಂಗಳೂರಿನ ತಮ್ಮ  ನಿವಾಸದಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ 

JANANUDI.COM NETWORK

 

 

 

ಖ್ಯಾತ ಸಿನಿಮಾ ನಿರ್ಮಾಪಕ ವಿಕೆ ಮೋಹನ್  ಬೆಂಗಳೂರಿನ ತಮ್ಮ  ನಿವಾಸದಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ 

 

 

ಖ್ಯಾತ ಸಿನಿಮಾ ನಿರ್ಮಾಪಕ ,ವಿಕೆ ಮೋಹನ್ ನಿನ್ನೆ ತಡ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ  ತಿಳಿದು ಬಂದಿದೆ. ಇವರು ಸಿನಿಮಾ ಉದ್ಯಮದಲ್ಲಿ ಫೈನಾನ್ಶಿಯರ್ ಅಗಿ ಹೆಸರು ಗಳಿಸಿದ್ದರು.

 ವಿಕೆ ಮೋಹನ್ ಡಾ.ರಾಜ್ ಕುಟುಬಕ್ಕೆ ತುಂಬಾ ಹತ್ತಿರದ ಓಡನಾಟ ಇಟ್ಟು ಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಅರ್ಥಿಕವಾಗಿ ಮುಂಗಟ್ಟು ಎದುರಿಸುತ್ತಿದ್ದ ಮೋಹನ್ ಮನೆ ಮೇಲೆ ಎರಡು ಬಾರಿ ಐಟಿ‌ ಅಧಿಕಾರಿಗಳು ದಾಳಿ‌ ನಡೆಸಿದ್ದರು. ನಂತರ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗುತ್ತದೆ. ಅವರು  ವನಿನ್ನೆ ತಡ ರಾತ್ರಿ ಬೆಂಗಳೂರಿನ‌ ಮನೆಯಲ್ಲಿ‌ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಮೂಲತ ವಕ್ವಾಡಿ ಕುಂದಾಪುರದವರಾದ ಮೋಹನ್  ಬಾಲ್ಯದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.ಶ್ರಮ ಜೀವಿಯಾಗಿದ್ದ ಮೋಹನ್ ಫೈನಾನ್ಸ್ ವ್ಯಾವಹಾರದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಸಿನಿಮಾ ರಂಗಕ್ಕೆ‌ಕಾಲಿಟ್ಟ ಮೋಹನ್ ಯಶಸ್ವಿ ಸಿನಿಮಾ ಪ್ರೋಡ್ಯೂಸರ್ ಆಗಿ ಬೆಳೆದಿದ್ದರು.ರಾಜ್ ಕುಟುಂಬದೊಂದಿಗೆ ಅತ್ಮೀಯ ಸಂಭಂಧ ಇಟ್ಟುಕೊಂಡಿದ್ದ ಅವರು ತನ್ನ‌ಹುಟ್ಟೂರಲ್ಲಿ ತನ್ನದೇ ಅಭಿಮಾನಿಗಳನ್ನು‌ ಹೊಂದಿದ್ದ ಅವರು  ದಾನ ಧರ್ಮ ಅಸಹಾಯಕರಿಗೆ ನೆರವನ್ನು ನೀಡುವ ಮೂಲಕ‌ ಸಮಾಜದಲ್ಲಿ ಗುರುತಿಸಿ ಕೊಂಡಿದ್ದರು.