ಕೆ. ಶಿವಾನಂದ ಶ್ರದ್ದಾಂಜಲಿ ಸಭೆ

JANANUDI.COM NETWORK

 

 

 

ಕೆ. ಶಿವಾನಂದ ಶ್ರದ್ದಾಂಜಲಿ ಸಭೆ

 

ಕುಂದಾಪುರ, ಜ.28: ಕಾಂಗ್ರೆಸ್ ಪಕ್ಷದ ನಾಯಕರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕೆ. ಶಿವಾನಂದರವರಿಗೆ ಶ್ರದ್ದಾಂಜಲಿ ಸಭೆಯನ್ನು ಜನವರಿ 26 ರಂದು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಲಾಯಿತು.
ಕೆ.ಶಿವಾನಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಉತ್ತಮ ನಾಯಕರಾಗಿದ್ದು ಕುಂದಾಪುರ ಪರಿಸರದಲ್ಲಿ ಜನಸೇವೆಯನ್ನು ನೀಡಿದ್ದಾರೆ. ಅವರ ಅಗಲಿಕೆ ಕುಂದಾಪುರ ಕಾಂಗ್ರೆಸಿಗೆ ತುಂಬಲಾರದ ನಷ್ಟವಾಗಿದೆ’ ಎಂದು ವಿಕಾಸ್ ಹೆಗ್ಡೆ ಮಾಜಿ ಅಧ್ಯಕ್ಷರು ಕುಂದಾಪುರ ನಗರ ಪ್ರಾಧಿಕಾರ ಇವರು ಕೇ.ಶಿವಾನಂದ ಇವರಿಗೆ ನುಡಿನಮನಗಳನ್ನು ಸಲ್ಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಬಿ.ಹೆರಿಯಣ್ಣ ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರು, ನಾರಯಣ ಆಚಾರಿ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಅಬ್ದುಲ್ಲಾ ಕೋಡಿ, ಶಂಕರ ಪೂಜಾರಿ, ಪ್ರಭಾಕರ ಕೋಡಿ, ಚಂದ್ರ ಅಮೀನ್, ಸುಭಾಶ್ ಪೂಜಾರಿ, ಕಾಳಪ್ಪ ಪೂಜಾರಿ ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ವಿಠಲ ಕಾಂಚನ್, ಆರಿಫ್ ಹುಸೇನ್, ಧರ್ಮಪ್ರಕಾಶ್, ಜ್ಯೋತಿ ಮೊಗವೀರ, ಹೇಮಾ ಪೂಜಾರಿ, ರಾಘವೇಂದ್ರ, ಸಂದೇಶ, ಕೆ.ಶಿವಕುಮಾರ್, ಸ್ಟೀವನ್ ಡಿಕೋಸ್ತಾ ಹಂಗಳೂರು, ಮುನಾಫ್ ಕೋಡಿ, ಕೆ.ಪಿ.ಅರುಣ್ ಪಟೇಲ್, ಕೇಶವ ಭಟ್, ದಿನೇಶ, ಅಶೋಕ ಸುವರ್ಣ, ಸಂಪತ್ ಶೆಟ್ಟಿ, ಪಲ್ಲವಿ, ಗಣೇಶ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.