

ಉಡುಪಿ: ಅಗಸ್ಟ್ 28: ಸೆಪ್ಟೆಂಬರ್ 8ರಂದು ನಡೆಯುವ ಮೇರಿ ಮಾತೆಯ ಜನ್ಮದಿನದ ಹಬ್ಬದ ಪ್ರಯುಕ್ತ ಕ್ರೈಸ್ತ ಧರ್ಮದವರು ಆಚರಿಸಲ್ಪಟ್ಟು ಬಂದಿರುವ ತೆನೆ ಹಬ್ಬಕ್ಕೆ ರಜೆ ಘೋಷಣೆ ಮಾಡಲು ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಇವರಿಂದ ಜಿಲ್ಲಾ ಕಚೇರಿ ಮತ್ತು ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಿಗೆ ಮನವಿ ನೀಡಿದರು.
ಅಖೀಲ ಭಾರತ ಕ್ರೈಸ್ತ ಮಹಾಸಭಾ (ರಿ) ಉಡುಪಿ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಕಾರ್ಮಿಣ್ ಲೂಯಿಸ್ ಅವರ ನೇತೃತ್ವದಲ್ಲಿ ಸಭೆಯ ಸದಸ್ಯರು ಉಡುಪಿಯ ಜಿಲ್ಲಾಧಿಕಾರಿಗಳ ಅವರ ಅನುಪಸ್ಥಿತಿಯಲ್ಲಿ ಉಪ ಜಿಲ್ಲಾಧಿಕಾರಿಯವರಿಗೆ ಅಗಸ್ಟ್ 28 ರಂದು ಮನವಿ ಪತ್ರ ಸಲ್ಲಿಸಿದರು.
ಆನಾದಿ ಕಾಲದಿಂದಲೂ ಕ್ರೈಸ್ತ ಧರ್ಮದವರು ಮೇರಿ ಮಾತೆಯ ಜನ್ಮದಿನದ ಹಬ್ಬದ ಪ್ರಯುಕ್ತ ಕ್ರೈಸ್ತ ಧರ್ಮದವರು ಆಚರಿಸಲ್ಪಟ್ಟು ಬಂದಿರುತ್ತೇವೆ, ಇದು ಕುಟುಂಬದ ಹಬ್ಬವಾಗಿ ಆಚರಿಸುತ್ತೇವೆ, ನಾವು ಕ್ರೈಸ್ತ ಧರ್ಮದವರಾಗಿ ಈ ನಾಡಿನ ಸಂಸ್ಕ್ರತಿ ಪ್ರಕಾರ ಈ ಹಬ್ಬವನ್ನು ತೆನೆ ಹಬ್ಬವಾಗಿ ಪರಿವರ್ತಿಸಿಕೊಂಡು ಪಾವಿತ್ರತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಕೇತದ ಹಬ್ಬವಾಗಿ ಕ್ರೈಸ್ತರು ಆಅರಿಸಿಕೊಂಡು ಬರುತ್ತಾ ಇದ್ದೆವೆ. ಆದರಿಂದ ಸರಕಾರವು ಕ್ರೈಸ್ತರು ಆಚರಿಸಲ್ಪಡುವ ತೆನೆ ಹಬ್ಬಕ್ಕೆ ಸೆಪ್ಟೆಂಬರ್ 8 ರಂದು ಸಾರ್ವಜನಿಕ ರಜೆಯನ್ನು ಘೋಷಿಸಬೇಕೆಂದು ವಿನಂತಿಸಿ ಮನವಿಯನ್ನು ನೀಡಲಾಗಿದೆ. ಮನವಿಯನ್ನು ಸ್ವೀಕರಿಸಿದ ಉಡುಪಿ ಉಪ ಜಿಲ್ಲಾಧಿಕಾರಿಗಳು ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಬ್ರಹ್ಮಾವರ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರು ಶ್ರೀಯುತ ಶ್ರೀಕಾಂತ್ ಹೆಗಡೆ ಇವರಿಗೆ ಭೇಟಿ ನೀಡಿ ಅವರಿಗೂ ಕೂಡ ಇದೆ ತರಹದ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಭೆಯ ಕಾರ್ಯದರ್ಶಿ ಶೈಲಾ ಬಾಂಜ್, ಸದಸ್ಯರಾದ ಟೀನಾ ರೊಡ್ರಿಗಸ್, ಟ್ರೆಸಿಲ್ಲಾ ಕ್ರಾಸ್ತಾ, ಜ್ಯೋತಿ ಫೆರ್ನಾಂಡಿಸ್, ಸುನೀತಾ ಡಿಸೋಜಾ, ಆಶಾ ಡಾಯಸ್, ಗೀತಾ ರೆಬೆಲ್ಲೊ, ಶಾಂತಿ ಡಿಸೋಜ ಹಾಜರಿದ್ದರು.


