

ಕುಂದಾಪುರ :ರಾಷ್ಟ್ರೀಯ ಅಹಿಂದ ಸಂಘಟನೆ ರಿ.ಬೆಂಗಳೂರು ಇದರ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿ ಬೈಂದೂರು ಕಾಂಗ್ರೆಸ್ ನ ಯುವ ಮುಂದಾಳು ಸುಬ್ರಹ್ಮಣ್ಯ ಪೂಜಾರಿ, ಯೆಡ್ತರೆ ಇವರನ್ನು ನಿಯೋಜಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಹಿಂದುಳಿದ ವರ್ಗ,ಪರಿಶಿಷ್ಟ ಪಂಗಡ,ಪರಿಶಿಷ್ಟ ಜಾತಿ, ರಾಜ್ಯಘಟಕ,ರಾಜ್ಯ ಸಮಿತಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ನ ಕಟ್ಟಾ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ಮಂಚೂಣಿಯಲ್ಲಿರುವ ಸುಬ್ರಹ್ಮಣ್ಯ ಪೂಜಾರಿ ತನ್ನ ನಿಸ್ವಾರ್ಥ, ಪ್ರಾಮಾಣಿಕ ಸೇವೆಯಿಂದಾಗಿ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ.

