


ಶ್ರೀನಿವಾಸಪುರ : ಪಿಡಿಪಿಎಸ್ ಸ್ಕೀಮ್ ೧ ತಿಂಗಳು ಇರುತ್ತದೆ .ಯಾವುದೇ ಕಾರಣಕ್ಕೂ ರೈತರು ಆತುರವನ್ನು ಪಡುಬಾರದೆಂದು ತಿಳಿ ಹೇಳಿದರು. ರೈತರು ಹಣ್ಣು ಆಗದೀರ ಮಾರುಕಟ್ಟೆ ಮಾವಿನ ಕಾಯಿಗಳು ತೆಗೆದು ಕೊಂಡುಬಾರದೆಂದರು. ಹಂತ ಹಂತವಾಗಿ ಕಾಯಿಗಳನ್ನು ಕೀಳಬೇಕು ಸರ್ಕಾರವು ಜಾರಿಗೆ ತಂದಿರುವ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಎಲ್ಲಾ ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದರು.
ಪಟ್ಟಣದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾವು ಬೆಳೆಗಾರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾತನಾಡಿದರು.
ನಾಳೆ ಬೆಳಗ್ಗೆಯಿಂದಲೇ ರೈತರು ರಿಜಿಸ್ಟ್ರೇಷನ್ ಮಾಡಿಸಬಹುದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್ ೪೭ ಕಡೆ ರಿಜಿಸ್ಟರ್ ಮಾಡಲು ಈ ಬಾರಿ ಅವಕಾಶ ನೀಡಲಾಗಿದೆ ಎಲ್ಲರೂ ಎಪಿಎಂಸಿ ಕಚೇರಿಗೆ ಬರಬೇಕಾಗಿಲ್ಲ ನಿಮ್ಮ ಊರಿನಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿಯೇ ರೈತರು ರಿಜಿಸ್ಟರ್ ಮಾಡಿಸಬಹುದು. ತೋಟಗಾರಿಕೆ ಕಚೇರಿಯಲ್ಲಿ ಆಧಾರ್ ಸಂಖ್ಯೆ ಕೊಟ್ಟರೆ ನಿಮಗೆ ರಿಜಿಸ್ಟರ್ ಮಾಡಿಕೊಡುತ್ತಾರೆ ಎಂದು ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ರೋಣೂರು ರೈತ ಸಂರ್ಪಕ ಕೇಂದ್ರಕ್ಕೆ ಬೇಟಿ ನೀಡಿದರು . ತಾಲೂಕಿನ ದೊಡ್ಡಪಲ್ಲಿ, ದಿಂಬಾಲ, ಚಾಂಪಲ್ಲಿ ಗ್ರಾಮಗಳ ಮಾವಿನ ತೋಟಕ್ಕೆ ಬೇಟಿ ನೀಡಿ ಫಸಲನ್ನ ಪರಿಶೀಲಿಸಿದರು.ನಂತರ ರೋಣೂರು ಗ್ರಾಮದ ರೈತ ಸಂಪರ್ಕ ಕೇಂದ್ರ ಭೇಟಿಯ ನೀಡಿದಿ ಬಿತ್ತನೆ ಬೀಜ ದಾಸ್ತಾನು ಪರಿಶೀಲನೆ ಮಾಡಿದರು.
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ಇಂದು ಮಾವು ಬೆಳೆಗಾರರ ಪರಸ್ಥತಿ ಯಾವ ರೀತಿಯಾಗಿದೆ ಎಂದರೆ ಬೆಳೆಯು ಇಲ್ಲ, ಮಾರುಕಟ್ಟೆಯಲ್ಲಿ ಬೆಲೆಯು ಇಲ್ಲದೆ ಸಂಕಷ್ಟವನ್ನು ಎದುರುಸುತ್ತಿದ್ದಾರೆಂದು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಳು ತೋಡಿಕೊಂಡರು. ವಿಶೇಷವಾಗಿ ಜಿಲ್ಲಾಧಿಕಾರಿಗಳು ಮಾವು ಬೆಳೆಗಾರರಿಗೆ ಒಂದಿಷ್ಟು ಸಲಹೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.
ಜಿಲ್ಲಾರಕ್ಷಾಣಾಧಿಕಾರಿ ಕನ್ನಿಕಾ ಸಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಂ.ಎಸ್.ಮಂಗಳ, ಅಡಿಷಿನಲ್ ಎಸ್ಪಿ. ರವಿಶಂಕರ್, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕರು ರವಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಂಜುಳ, ಉಪ ನಿರ್ದೇಶಕರು ಅನ್ನಿಸಲ್ಮಾ ಡಿವೈಎಸ್ಪಿ ಮೊನಿಶಾ, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಂ.ಮಹೇಶ್ ಬಾಬು, ಎಪಿಎಂಸಿ ಕಾರ್ಯದರ್ಶಿ ಪಂಕಜ, ರೈತ ಮುಖಂಡ ರಾದ ಪಾತಕೋಟೆ ನವೀನ್ಕುಮಾ ನೀಲಟೂರು ಚಂದ್ರಶೇಖರ್, ಹಾಗೂ ರೈತರು ಹಾಜರಿದ್ದರು.




