
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 03-02-2025ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಜ್ರಿ ಮಾನಂಜೆ, ಕಮಲಶಿಲೆ ಇಲ್ಲಿ ನೆರವೇರಿತು.ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಕಮಲಶಿಲೆ ಶ್ರೀಧರ ಅಡಿಗ ಇವರು ಶಿಬಿರವನ್ನು ಉದ್ಘಾಟಿಸಿ ಶಿಬಿರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶಿಬಿರಕ್ಕೆ ಶುಭಹಾರೈಸಿದರು.ತದನಂತರ ರಾಜೀವ ಶೆಟ್ಟಿ ಹಂದಿಮನೆ ಇವರು ವಾರ್ಷಿಕ ವಿಶೇಷ ಶಿಬಿರದ ಲೋಗೋ ವನ್ನು ಅನಾವರಣ […]

ಬ್ರಹ್ಮಾವರ; ಬಾರ್ಕೂರಿನ ಹನೆಹಳ್ಳಿ ಸಮೀಪ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ತರುಣ ಮೃತಪಟ್ಟ ಘಟನೆ ನಡೆದಿದೆ. ಚಾಂತಾರಿನ ಹರಿಪ್ರಸಾದ್(29)ಮೃತ ದುರ್ದೈವಿ ಫ್ಲಿಪ್ ಕಾರ್ಟ್ ಆನ್ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದ ಹರಿಪ್ರಸಾದ್, ಹನೆಹಳ್ಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಗ್ರಾಹಕರಿಗೆ ಕರೆ ಮಾಡಿ ಡೆಲಿವರಿ ವಿಳಾಸ ಕೇಳುತ್ತಿದ್ದಾಗ ಅತಿವೇಗದಲ್ಲಿ ಬಂದ ಆಲ್ಟೋ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಯುವಕ ಕಾರಿನ ಚಕ್ರದಡಿಯಲ್ಲಿ ಸಿಲುಕಿ ಸುಮಾರು ದೂರ ಕಾರು ಎಳೆದುಕೊಂಡು ಹೋಗಿದ್ದು, ಯುವಕ ಸ್ಥಳದಲ್ಲೇ […]

ಉಡುಪಿ : ಫೆಬ್ರವರಿ 2, 2025 ರ ಭಾನುವಾರ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ನಡೆದ ವಾರ್ಷಿಕ ಚುನಾವಣೆಯಲ್ಲಿ 2025 ರ ಸಾಲಿನ ಕ್ಯಾಥೋಲಿಕ್ ಸಭಾ ಮಿಲಾಗ್ರಿಸ್ ಕ್ಯಾಥೆಡ್ರಲ್ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮರ್ಸೆಲಿನ್ ಶೇರಾ ಪಿಂಟೊ ಆಯ್ಕೆಯಾದರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ನೆಲ್ಸನ್ ಡಿ’ಸೋಜಾ ಆಯ್ಕೆಯಾದರು. ಚುನಾವಣೆಗೆ ಮುನ್ನ, ಸಾಮಾನ್ಯ ಪ್ರಾರ್ಥನೆ ಪ್ರಾರ್ಥನೆಯನ್ನು ನಡೆಸಲಾಯಿತು, ಇದನ್ನು ಉಡುಪಿ ಡಯಾಸಿಸ್ನ ರೆಕ್ಟರ್ ಮತ್ತು ವಿಕಾರ್ ಜನರಲ್ ಆಗಿರುವ ಘಟಕದ ಆಧ್ಯಾತ್ಮಿಕ ನಿರ್ದೇಶಕ ಶ್ರೀಮತಿ ಫರ್ಡಿನಾಂಡ್ […]

ಕಲ್ಯಾಣಪುರ, ಫೆಬ್ರವರಿ 2, 2025 ರಂದು, ಸಂತೇಕಟ್ಟೆ-ಕಲ್ಲಿಯನ್ಪುರದ ಮೌಂಟ್ ರೋಸರಿ ಚರ್ಚ್, ಮೂರು ಮಹತ್ವದ ಘಟನೆಗಳನ್ನು ಗುರುತಿಸಲು ಸಮುದಾಯವು ಒಟ್ಟುಗೂಡಿದಾಗ ಆಳವಾದ ಆಚರಣೆಗೆ ಸಾಕ್ಷಿಯಾಯಿತು: ಯೂಕರಿಸ್ಟಿಕ್ ಆಚರಣೆಯು ಬೆಳಿಗ್ಗೆ 8:00 ಗಂಟೆಗೆ ಚರ್ಚ್ ಪ್ರವೇಶದ್ವಾರದಲ್ಲಿ ಗಂಭೀರ ಸಮಾರಂಭದೊಂದಿಗೆ ಪ್ರಾರಂಭವಾಯಿತು, ತಾಯಿ ಮೇರಿ ಮತ್ತು ಸಂತ ಜೋಸೆಫ್ ಶಿಶು ಯೇಸುವನ್ನು ಅವರ ಜನನದ 40 ದಿನಗಳ ನಂತರ ಜೆರುಸಲೆಮ್ನ ದೇವಾಲಯದಲ್ಲಿ ಅರ್ಪಿಸಿದ ಪವಿತ್ರ ಕ್ಷಣವನ್ನು ಸ್ಮರಿಸುತ್ತಾರೆ. ಈ ಸುಂದರ ಸಂಪ್ರದಾಯವನ್ನು ಭಕ್ತಿಯಿಂದ ಪುನರುಚ್ಚರಿಸಲಾಯಿತು, ದೈವಿಕ ಕಾನೂನಿನ ನೆರವೇರಿಕೆ ಮತ್ತು […]

ಕುಂದಾಪುರ, ಫೆ. 3 :- ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮೊಗವೀರ ಮಹಾಜನ ಸೇವಾ ಸಂಘ ರಿ ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರು ಆಗಿರುವ ಉದಯ್ ಕುಮಾರ್ ಹಟ್ಟಿಯಂಗಡಿ ಇವರನ್ನು ಫೆಬ್ರವರಿ 2 ರಂದು ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲೆ ವತಿಯಿಂದ ಗೌರವಿಸಲಾಯಿತು.

ಕುಂದಾಪುರ, ಫೆ.2; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಭಾರತೀಯ ಕಿಸಾನ್ ಸಂಘದ ಸಹಯೋಗದೊಂದಿಗೆ ‘ಕ್ರಷಿ ವಿಚಾರ ಸಂಕಿರಣ’ ಕುಂದಾಪುರ ರೋಟರಿ ಲಕ್ಷ್ಮೀ ನರಸಿ೦ಹ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಭಾಟಿಸಿದ ಜಿಲ್ಲಾ ಸಾಧಕ ರೈತ ಪ್ರಶಸ್ತಿ ವಿಜೇತರಾದ ರಮೇಶ್ ನಾಯಕ್ ‘ಯಾವುದೇ ಕ್ಷೇತ್ರದಲ್ಲಿ ಸಫಲತೆ ಪಡೆಯ ಬೇಕಾದರೆ, ನಿರಂತರ ಪರಿಶ್ರಮ ಮತ್ತು ಅಧ್ಯಯನ ಮಾಡಬೇಕು. ಕ್ರಷಿಯಲ್ಲಿ ಸೊಲಿಲ್ಲ, ರೈತರು ಕ್ರಷಿ ವಿಧಾನದಲ್ಲಿ ನವೀಕ್ರತಗೊಳ್ಳುತ್ತಲೇ ಇರಬೇಕು, ಯಾವ ಜಾಗದಲ್ಲಿ ಯಾವ ಕ್ರಷಿ, ಯಾವ ವಿಧಾನದೊಂದಿಗೆ ಮಾಡಬೇಕು […]

ಕುಂದಾಪುರ; ಜನವರಿ 26ರಂದು ನಡೆದ ಚುನಾವಣೆಯಲ್ಲಿ ಲೋಹಿತಾಶ್ವ ಆರ್,ಕುಂದರ್ ಬಾಳಿಕೆರೆ ಕೆಲವು ಸಾಧಿಸಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಯುವ ನಾಯಕ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಇವರು ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದಲ್ಲಿ ಎರಡು ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದಾರೆ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಘಟಕದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು ಮೊಗವೀರ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಇದರ ಸದಸ್ಯರಾಗಿ ಸೇವೆ […]

ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವು ಕಮಲಶಿಲೆಯ ಮಾನಂಜೆಯ ಆಜ್ರಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ಫೆಬ್ರವರಿಯಿಂದ 9ಫೆಬ್ರವರಿ 2025ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.“ಯುದ್ದ ಫಾರ್ ಮೈ ಭಾರತ್ – ಯುಥ್ ಫಾರ್ ಡಿಜಿಟಲ್ ಲಿಟರಸಿ” ಎಂಬ ಶೀರ್ಷಿಕೆಯ ನೆಲೆಯಲ್ಲಿ ನಡೆಯಲಿರುವ ಈ ವಾರ್ಷಿಕ ಶಿಬಿರದಲ್ಲಿ ಶೈಕ್ಷಣಿಕ, ಆರೋಗ್ಯ, ಪರಿಸರ ಸಾಂಸ್ಕೃತಿಕ ಮತ್ತು ಮಾಹಿತಿಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 3ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಉದ್ಘಾಟಕರಾಗಿ ಬ್ರಾಹ್ಮೀ […]

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ : ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಭೇತಿಯನ್ನು ದಿನಾಂಕ 29/1/2025 ರಂದು ಆಯೋಜಿಸಲಾಗಿತ್ತು , ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ನಿಧೀಶ್ ರಾವ್ ಪ್ರೊಫೆಸರ್ ನಿಟ್ಟೆ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ […]