ಗೋಕರ್ಣ; ತಿರುಚಿಯ ಮೆಡಿಕಲ್ ಕಾಲೇಜಿನಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯರು ಗೋಕರ್ಣದಲ್ಲಿ ಈಜಲು ಹೋಗಿ ಸಮುದ್ರದ ಅಲೆಗೆ ಕೊಚ್ಚಿಹೋಗಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಜಟಾಯು ತೀರ್ಥದಲ್ಲಿ ನಡೆದಿದೆ ತಮಿಳುನಾಡು ಮೂಲದ ತಿರುಚಿಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರಾದ ಕನಿಮೋಳಿ, ಹಿಂದುಜ ಸಾವಿಗೆ ಒಳಗಾದ ವಿದ್ಯಾರ್ಥಿನಿಯರಾಗಿದ್ದಾರೆ. ತಮಿಳುನಾಡಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ 23 ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸಿದ್ದರು.ಇಬ್ಬರು ವಿದ್ಯಾರ್ಥಿನಿಯರು ಸಂಜೆ ಜಟಾಯು ತೀರ್ಥದ ಬಳಿ ಸಮುದ್ರದಕ್ಕೆ ಇಳಿದಿದ್ದರು. ಈ ವೇಳೆ […]

Read More

ಶ್ರೀನಿವಾಸಪುರ: ಪಟ್ಟಣದ ತಾಲೂಕು ವಕೀಲರ ಸಂಘದ ವತಿಯಿಂದ, ಹಿರಿಯ ವಕೀಲ ಹಾಗೂ ಕರ್ನಾಟಕ ರಾಜ್ಯ ವಕೀಲರ ಸಂಘದ ಸದಸ್ಯರಾದ ವೈ.ಆರ್. ಸದಾಶಿವಾರೆಡ್ಡಿ ಅವರ ಮೇಲೆ ಅಪರಿಚಿತರಿಂದ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಸೋಮವಾರ ತಹಶೀಲ್ದಾರ್ ಜಿ.ಎನ್. ಸುದೀಂದ್ರರವರ ಮೂಲಕ ಮನವಿ ಪತ್ರವನ್ನು ನೀಡಲಾಯಿತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ. ಜಯರಾಮೇಗೌಡ ಮಾತನಾಡಿ, “ನಮ್ಮ ತಾಲ್ಲೂಕಿನವರು ಆದ ವೈ.ಆರ್. ಸದಾಶಿವಾರೆಡ್ಡಿ ಅವರ ಮೇಲೆ ಎ.16 ರಂದು ಬೆಳಿಗ್ಗೆ 8:30ಕ್ಕೆ ಬೆಂಗಳೂರಿನ ಕಚೇರಿಯಲ್ಲಿ ಹಲ್ಲೆ ನಡೆಸಲಾಗಿದೆ.ಅಪರಿಚಿತ […]

Read More

ಕಿನ್ನಿಕಂಬ್ಲಾದ ರೋಸಾ ಮಿಸ್ಟಿಕಾ ನೊವಿಟಿಯೇಟ್‌ನಿಂದ ಹೊಸದಾಗಿ ನೇಮಕಗೊಂಡ ಮೂವರು ನವಶಿಷ್ಯರಾದ ಸಿಸ್ಟರ್ ರೆನಿಶಾ ಮೆನೆಜಸ್, ಸಿಸ್ಟರ್ ಚಂದ್ರಿಕಾ ಮತ್ತು ಸಿಸ್ಟರ್ ಸೋಫಿಯಾ ರೊಡ್ರಿಗಸ್ ಅವರ ತಾತ್ಕಾಲಿಕ ವೃತ್ತಿಯು ಏಪ್ರಿಲ್ 22, 2025 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಿತು. ಡೆರೆಬೈಲ್ ಪ್ಯಾರಿಷ್‌ನ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಜೋಸೆಫ್ ಮಾರ್ಟಿಸ್ ಅವರ ನೇತೃತ್ವದಲ್ಲಿ ಮತ್ತು ಫಾದರ್ ರೋಶನ್ ಒಪಿ ಅವರಿಂದ ಆಚರಿಸಲ್ಪಟ್ಟ ಯೂಕರಿಸ್ಟಿಕ್ ಆಚರಣೆಯೊಂದಿಗೆ ಈ ಗಂಭೀರ ಸಂದರ್ಭವನ್ನು ಗುರುತಿಸಲಾಯಿತು. ಯೂಕರಿಸ್ಟಿಕ್ ಆಚರಣೆಯ ಸಮಯದಲ್ಲಿ, ಮಂಗಳೂರು ಪ್ರಾಂತ್ಯದ […]

Read More

ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹೌಸ್‌ಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ ಸೋಜಾರವರು ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ)ಇದರ ಕೇಂದ್ರಿಯ ಅಧ್ಯಕ್ಷರಾದ ಆಲ್ವಿನ್ ಡಿ ಸೋಜಾರವರು ತೆರಳಿ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುದರ ಮೂಲಕ ಶ್ರದಾಂಜಲಿ ಸಲ್ಲಿಸಿದರು.ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ಪ್ರಾನ್ಸಿಸ್ ಇವರ ಮರಣದ ವಾರ್ತೆ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆಯನ್ನು ನಡೆಸುವುದರ ಜೊತೆಗೆ […]

Read More

ಆಕುಲುತೋ; ಸೆಂಟ್ ಕ್ಲೇರ್ ಕ್ಯಾಥೋಲಿಕ್ ಚರ್ಚ್ ಇಸ್ಟರ್ ಆಚರಣೆಯನ್ನು 2025ರ ಏಪ್ರಿಲ್ 20ರ ಭಾನುವಾರ, ಬೆಳಿಗ್ಗೆ 9:00 ಗಂಟೆಗೆ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಆನಂದಭರಿತವಾಗಿ ಆಚರಿಸಿತು. ಈ ಪವಿತ್ರ ಸಮಾರಂಭದ ಮುಖ್ಯಕಾರ್ಯನಿರ್ವಾಹಕರು Parish Priest ಫಾದರ್ ಸ್ಟೀಫನ್ ಡಿಸೋಜಾರಾಗಿದ್ದರು. ಈ ಆಚರಣೆಯಲ್ಲಿ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಉಲ್ಲಾಸ ನೀಡಿದರು.ತಮಗೆ ನೀಡಿದ ಉಪದೇಶದಲ್ಲಿ ಫಾ. ಸ್ಟೀಫನ್ ಅವರು ಇಸ್ಟರ್‌ನ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಅವರು ಯೇಸು ಕ್ರಿಸ್ತನ ಪುನರುತ್ಥಾನವು ಮರಣದ ಮೆರೆಗೆ ಜೀವದ […]

Read More

ಬೆಂಗಳೂರು ;ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಹಿನ್ನೆಲೆ ತೆಲಂಗಾಣ, ತಮಿಳುನಾಡು, ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ.ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇರ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ,ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ.

Read More

ಕುಂದಾಪುರ : ಇಂದು ಬುಧವಾರ ( ಏ 16)ನಡೆದ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್ ನಲ್ಲಿ ಸೂಚಿಸಲಾದ ಕೋಟೇಶ್ವರದ ಸಿ ಇ ಟಿ ಪರೀಕ್ಷಾ ಕೇಂದ್ರವನ್ನು ಹುಡುಕುವುದರಲ್ಲಿ ಸುಸ್ತು ಹೊಡೆದು ಹೋಗಿದ್ದಾರೆ.ಇಲಾಖೆಯಿಂದ ವಿದ್ಯಾರ್ಥಿ ಗಳಿಗೆ ನೀಡಲಾಗಿದ್ದ ಹಾಲ್ ಟಿಕೇಟ್ ಗಳಲ್ಲಿ ಕೋಟೇಶ್ವರದ ಪರೀಕ್ಷಾ ಕೇಂದ್ರದ ವಿಳಾಸವು ಗವರ್ನಮೆಂಟ್ ಪಿ ಯು ಕಾಲೇಜು, ಏನ್ ಎಚ್ 66, ಕೋಟೇಶ್ವರ.ಎಂದು ನಮೂದಿಸಲಾಗಿತ್ತು. ಆದರೆ ಇಡೀ ಕೋಟೇಶ್ವರ ಜಾಲಾಡಿದರೂ ಅಂತಹ ಹೆಸರಿನ ಯಾವುದೇ ಪರೀಕ್ಷಾ […]

Read More

ವಿವಿಧ ಪ್ರಶಸ್ತಿಗಳು:-ಭಾವನಾತ್ಮಕವಾಗಿ ಕಲೆಯಲ್ಲಿ ಸ್ಪಂದಿಸಿದಾಗ ಮಾತ್ರ ಇಂತಹ ಕಲಾಚಟುವಟಿಕೆಗಳು ಮೂಡಿ ಬರಲು ಸಾಧ್ಯ ಎಂದು ಬಣ್ಣಿಸಿದ ಶ್ರೀಮತಿ ಶ್ಯಾಮಲ ಎಸ್. ಕುಂದರ್ ರವರು ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್‍ನ 19 ರಿಂದ 75 ವಯೋಮಿತಿಯ 23 ವಿದ್ಯಾರ್ಥಿಯರ ‘ಪರಂಪರಾ’ ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ವಿತರಿಸಿದರು. ‘ದಿ ಬೆಸ್ಟ್ ಆರ್ಟ್ ವರ್ಕ್’ ಪ್ರಶಸ್ತಿಯನ್ನು ಶರಣ್ ಎಸ್. ಕುಮಾರ್, ‘ದಿ ಬೆಸ್ಟ್ ಪಬ್ಲಿಕ್ ವೀವ್ಹ್ ಆರ್ಟ್’ ಪ್ರಶಸ್ತಿಯನ್ನು ಉಜ್ವಲ್ […]

Read More

ಶ್ರೀನಿವಾಸಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ – ಜಿ.ಕೆ.ವೆಂಕಟಶಿವಾರೆಡ್ಡಿ14ಎಸ್‍ವಿಪಿ2ಇಪಿಶ್ರೀನಿವಾಸಪುರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಾ. […]

Read More
1 4 5 6 7 8 218