
T20 World Cup ಅಂಗವಾಗಿ ಈಗಾಗಲೇ ಫೈನಲ್ ಗೆ ಪ್ರವೇಶಿಸಿರುವ ಭಾರತ ಎದುರಾಳಿ ದಕ್ಷಿಣಆಫ್ರಿಕಾದ ಎದುರು ನಾಳೆ ಶನಿವಾರ ನಡೆಯಲಿಕ್ಕಿದೆ. ಈ ಪ್ರಯುಕ್ತ ಶುಭಾಷಯವನ್ನು ಸಾರುವ ” Jai Ho -INDIA ಕಲಾಕೃತಿಯನ್ನು ಕೋಟೇಶ್ವರ ಹಳೆ ಅಳಿವೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್, ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಹಾಲಾಡಿ, ಉಜ್ವಲ್ ನಿಟ್ಟೆ ಇವರು ಮರಳು ಶಿಲ್ಪವನನು ರಚಿಸಿರುತ್ತಾರೆ.

ಕುಂದಾಪುರ, ಜೂ.: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ತಮ್ಮ ವೃತ್ತಿಯಲ್ಲಿ ಪ್ರಮಾಣಿಕ ಕೆಲಸ ಮಾಡಿದಾಗ ಎಲ್ಲರೂ ಗುರುತಿಸುತ್ತಾರೆ. 38 ವರ್ಷಗಳ ಕಾಲ ಶಿಕ್ಷಕರಾಗಿ ವಯೋನಿವೃತ್ತಿಗೊಂಡ ಭಾಸ್ಕರ ಗಾಣಿಗ ಸೇವೆ ಅನನ್ಯವಾಗಿದೆ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಚಾಲಕರು,ಕುಂದಾಪುರ ವಲಯದ ಧರ್ಮಗುರುಗಳು ಆದ ಅತೀ ವಂ.ಫಾ.ಪಾವ್ಲ್ ರೇಗೊ ಹೇಳಿದರು. ಅವರು ಜೂನ್ ೨೮ ರಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಭಾಸ್ಕರ ಗಾಣಿಗ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ಗಂಗೊಳ್ಳಿ, ಜೂ.18: ಗಂಗೊಳ್ಳಿ ಕಥೊಲಿಕ್ ಸಭಾ ಘಟಕದಿಂದ ಶ್ರೀಸಾಮಾನ್ಯರ ದಿನಾಚರಣೆ ಆಚರಿಸಲಾಯಿತು. ಕಳೆದ 34 ವರ್ಷಗಳಿಂದ ಗಂಗೊಳ್ಳಿ ಕಥೊಲಿಕ್ ಸಭಾ ಘಟಕಕ್ಕೆ, ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ನೀಡಿರುವರಿಗೆ ಗಂಗೊಳ್ಳಿ ಚರ್ಚಿನ ಶ್ರೀಸಾಮನ್ಯ ಆಯೋಗ ಮತ್ತು ಕಥೊಲಿಕ್ ಸಭಾ ಘಟಕದಿಂದ ಸನ್ಮಾನಿಸಿ ಕಾಣಿಕೆಯನ್ನು ನೀಡಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿನೋದ್ ಕ್ರಾಸ್ಟೊ ಮಾತನಾಡಿ “ಕಥೊಲಿಕ್ ಸಭಾ ಸಂಘಟನೇಯು, ಶ್ರೀಸಾಮಾನ್ಯರಿಗೆ ಸಮಾಜದಲ್ಲಿ ಸೇವೆ ಮಾಡುವಂತೆ ಪರಿವರ್ತಿಸುತ್ತದೆ, ವಿವಿಧ ರೀತಿಯಲ್ಲಿ ಸೇವೆ ಮಾಡಬಹುದು, ಹೀಗೆ ವಿವಿಧ ರೀತಿಯಲ್ಲಿ ಸೇವೆ ಮಾಡಿ […]

ಬ್ರಹ್ಮಾವರ: “ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಸದಾ ತನ್ನ ಗುರಿಯನ್ನು ಸಾಧಿಸಲು ಛಲ ಬಿಡದೆ ಪ್ರಯತ್ನಿಸಬೇಕು “ಎಂದು ಮುಖ್ಯ ಅತಿಥಿ ರೋಟೇರಿಯನ್ ಅಭಿನಂದನ್ ಶೆಟ್ಟಿ, ಫೋರ್ಟ್ ಗೇಟ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷರು, ಬ್ರಹ್ಮಾವರ – ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಂಎಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ […]

ಭಾರತೀಯ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (ICYM) ಬದ್ಯಾರ್ ಘಟಕವು ಯುವ ಕ್ರಿಶ್ಚಿಯನ್ ವಿದ್ಯಾರ್ಥಿಗಳು (YCS), ಪರಿಸರ ಆಯೋಗ ಮತ್ತು ಯುವ ಆಯೋಗದ ಸಹಯೋಗದೊಂದಿಗೆ ವನಮಹೋತ್ಸವವನ್ನು ಜೂನ್ 23 ರಂದು ಆಚರಿಸಿಲಾಯಿತು. ಮೊದಲು ಬದ್ಯಾರ್ನ ಸೇಂಟ್ ರಾಫೆಲ್ ಚರ್ಚ್ನಲ್ಲಿ ಮೊದಲ ಸಾಮೂಹಿಕ ಪೂಜೆಯ ಬಳಿಕ ನಡೆಯಿತು. ಸಂಕ್ಷಿಪ್ತ ಉದ್ಘಾಟನಾ ಸಮಾರಂಭವು ಕಾರ್ಯಕ್ರಮದ ಆರಂಭಿಸಿ, ಐಸಿವೈಎಂ ಕಾರ್ಯದರ್ಶಿ ರೆಯೋನಾ ಡಿಸೋಜಾ ಸ್ವಾಗತಿಸಿದರು, ಧರ್ಮಗುರುಗಳಾದ ವಂದನೀಯ ಫಾ. ರೋಶನ್ ಕ್ರಾಸ್ತಾ ಅಧ್ಯಕ್ಷೀಯ ಭಾಷಣದಲ್ಲಿ ’ನಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮಹತ್ವವನ್ನು ಒತ್ತಿ […]

ಕುಂದಾಪುರ : ದಿನಾಂಕ 26-06-2024 ರಂದು ಸಂತ ಜೋಸೆಫರ ಪ್ರೌಢಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ತು ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನಾ ಸಮಾರಂಭ ಜರುಗಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇಲ್ಲಿನ ಶಿಕ್ಷಣ ಸಂಯೋಜಕರಾದ ಶ್ರೀಯುತ ಶೇಖರ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳಿಸಿ, ಶಾಲೆಯ ನಿಯಮ ಹಾಗೂ ಶಿಸ್ತು ಕಾಪಾಡುವಲ್ಲಿ ಶಾಲಾ ಸಂಸತ್ತಿನ ಪಾತ್ರ ಅತಿ ಮುಖ್ಯವಾದದ್ದು […]

ಬ್ರಹ್ಮಾವರ : ಎಸ್ ಎಮ್ ಎಸ್ ಪ ಪೂ ಕಾಲೇಜಿನಲ್ಲಿ ಮಾದಕ ವ್ಯಸನ ಮುಕ್ತ ಮಾಹಿತಿ ಕಾರ್ಯಕ್ರಮ. ದಿನಾಂಕ 26/06/2024 ರಂದು ಅಂತರಾಷ್ಟ್ರೀಯ ಮಾದಕ ವಿರೋದಿ ದಿನದಂದು ನಶಾಮುಕ್ತ ಭಾರತ ಅಭಿಯಾನದಡಿ ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಹಾಗೂ ಬ್ರಹ್ಮಾವರ ಅರಕ್ಷಕ ಠಾಣೆ ಇದರ ಜಂಟಿ ಆಶ್ರ ಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಜೀವನ ಮತ್ತು ಅಕ್ರಮ ಕಳ್ಳಸಾಗಾಣೆ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ಅರಕ್ಷಕ ಠಾಣೆಯ […]

ಕುಂದಾಪುರ :ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇಂದು ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆಯನ್ನು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರುಯೋಗ ಶಿಕ್ಷಕ ರತ್ನಕುಮಾರ್ ಯೋಗದ […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮವು ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರಿ ಶಮಿತಾ ರಾವ್, ಕುಮಾರಿ ರೆನಿಟಾ ಲೋಬೊ ಮತ್ತು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು ಶಾಲಾ ಸಂಸತ್ತಿಗೆ ಆಯ್ಕೆಯಾದ 5, 8 ಮತ್ತು 10ನೇ ತರಗತಿಯ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು ಶಿಕ್ಷಕ ಜಗದೀಶ್ ಸ್ವಾಗತಿಸಿ ಶಿಕ್ಷಕಿಯರಾದ ದೀಪಾ ವಂದಿಸಿ ಚೈತ್ರಾ ಮೆಂಡನ್ ಮತ್ತು ಅವಿನಾ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ಹಾಗೂ […]