
ಮಂಗಳೂರಿನ ಬಿಷಪರಾದ ಡಾ. ಪಿಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ವಂದನೀಯ ಗುರುಗಳಾದ ರೂಬನ್ ನಿಶಿತ್ ಲೋಬೊರವರು ಯಾಜಕಿ ದೀಕ್ಷೆಯನ್ನು ಸ್ವೀಕರಿಸಿದರು. ಬೆಳಿಗ್ಗೆ 9:30 ಕ್ಕೆ ಜರಗಿದ ಯಾಜಕಿ ದೀಕ್ಷೆಯ ಸಮಾರಂಭದಲ್ಲಿ ಯಾಜಕರು, ಧಾರ್ಮಿಕ ಸದಸ್ಯರು, ಕುಟುಂಬಸ್ಥರು ಹಾಗೂ ಜನಸ್ತೋಮವೇ ನೆರೆದಿತ್ತು. ಬಲಿದಾನದ ನಂತರ ನಡೆದ ಅಭಿನಂದನ ಸಮಾರಂಭದಲ್ಲಿ ಹೊಸದಾಗಿ ಯಾಜಕರಾದ ರೂಬನ್ ನಿಶಿತ್ ಲೋಬೊರವರನ್ನು ಸನ್ಮಾನಿಸಲಾಯ್ತು. ವಂದನೀಯ ಪಾ. ಪ್ರೇಮ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಂದನೀಯ ಫಾ. ರಾಕೇಶ್ ಮಥಾಯಸ್ ರವರು ಅಭಿನಂದಿಸಿದರು. ಅನಿತಾ ಲೋಬೊ ಸ್ವಾಗತಿಸಿ, […]

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಶೇ.92.68 ಫಲಿತಾಂಶ ದಾಖಲುಗೊಂಡಿದೆ.ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯಲ್ಲಿ ಅಗ್ರಸ್ಥಾನದಲ್ಲಿ ಕುಮಾರಿ ಸುಜಾತ 555 ಪಡೆದಿದ್ದಾಳೆ. ಸಿಂಚನಾ 541, ಪ್ರತಿಭಾ 512, ಅನಘ 504 ಅಂಕ ಪಡೆದು ಸಾಧನೆ ಮಾಡಿದ್ದಾರೆ.ಶಾಲೆಯ ಒಟ್ಟು ಫಲಿತಾಂಶ ಎ ಗ್ರೇಡ್ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾಲ್ ರೇಗೊ […]

ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನ 10ನೇ ತರಗತಿಯ ಎಲ್ಲಾ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. 36 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 16 ಮಂದಿನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ. ಪ್ರಣತಿ ಎಸ್ ಶೆಟ್ಟಿ 613 (98.08%) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಅಭಿಜ್ಞಾ ಜೆ.ಎಸ್ 611 (97.76%) ಅಂಕ ಗಳಿಸಿ ದ್ವಿತೀಯ ಸ್ಥಾನ, ದಿಗಂತ ಕೆ.ಎಸ್ 609 (97.44%) ಅಂಕ ಗಳಿಸಿ ತೃತೀಯ ಸ್ಥಾನ […]

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಇಬ್ಬರು ಅಭ್ಯರ್ಥಿಗಳಾದ ಫಾ. ಓಸ್ವಲ್ಡ್ ವಾಸ್ (ಹಿರ್ಗಾನ) ಮತ್ತು ಫಾ. ರೋಹನ್ ಮಸ್ಕರೇನ್ಹಸ್ (ಕೆಂಲ್ಬೆಟ್ ಬೋಳ) ಅವರಿಗೆ ಗುರು ದೀಕ್ಷೆಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬಿಷಪ್ ಲೋಬೊ, ಕ್ರೈಸ್ತ ಧರ್ಮಗುರು ದೇವರ ವ್ಯಕ್ತಿಯಾಗಿದ್ದು, ದೇವರ ಹಾಗೂ ಜನರ ಪ್ರೀತಿಗೆ ಪಾತ್ರರಾದವರಾಗಿರುತ್ತಾರೆ. ಜನರಿಂದ ಜನರಿಗಾಗಿ ಧರ್ಮಗುರುವಾಗಿ ದೇವರು ಆಯ್ಕೆ ಮಾಡಿದ ವ್ಯಕ್ತಿ ಅವರಾಗಿರುತ್ತಾರೆ. ದೇವರ ವಾಕ್ಯವನ್ನು […]

ಕಲ್ಯಾಣಪುರ; ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಏಪ್ರಿಲ್ 29, 2025 ರಂದು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಆಡಿಯೋ ವಿಶುವಲ್ ಹಾಲ್ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಅಲ್ಲಿ ಗೌರವಾನ್ವಿತ ಅತಿಥಿಗಳು ಮತ್ತು ಅಧ್ಯಾಪಕರು ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು. ಮಣಿಪಾಲದ ಕೆಎಂಸಿಯ ಐಎಚ್ಬಿಟಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ದೀಪಿಕಾ ಉದ್ಘಾಟನಾ ಭಾಷಣ ಮಾಡಿದರು, ದಾನಿಗಳ ಅರ್ಹತಾ ಮಾನದಂಡಗಳು, ಆರೋಗ್ಯ ಪ್ರಯೋಜನಗಳು ಮತ್ತು ಸಾಮಾನ್ಯ ರಕ್ತ ಸಂಬಂಧಿತ ಸಮಸ್ಯೆಗಳ ಬಗ್ಗೆ […]

ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಕೈಸ್ತ ಶಿಕ್ಷಣ ಆಯೋಗದ ನೇತೃತ್ವದಲ್ಲಿ ಚರ್ಚಿನ ಮಕ್ಕಳಿಗೆ ನಾಲ್ಕು ದಿನಗಳ.ಬೇಸಿಗೆ ರಜೆಯ ಆಧ್ಯಾತ್ಮಿಕ ತರಬೇತಿ ಶಿಬಿರವನ್ನು ಏಪ್ರಿಲ್ 21 ರಂದು ಬೆಳೆಗ್ಗೆ 8 ಗಂಟೆಗೆ ಚರ್ಚಿನ ಧರ್ಮ ಗುರುಗಳಾದವಂದನೀಯ ಫಾ. ಎಡ್ವಿನ್ ಡಿಸೋಜಾರವರು ಬಲಿಪೂಜೆಯೊಂದಿಗೆ ಆರಂಭಿಸಿದರು. ಮೊದಲನೆಯ ದಿನ, ಏಪ್ರಿಲ್ 21 ರಂದು ಸುರತ್ಕಲ್, ಸೇಕ್ರೆಡ್ ಹಾರ್ಟ್ ಚರ್ಚನ ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾ.ರಿಚಾರ್ಡ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು, ಬೈಬಲ್ ಆಧಾರಿತ ಕೆಲವು ಗುಂಪು ಚಟುವಟಿಕೆಗಳಲ್ಲಿ, ಏಕಪಾತ್ರ:ಅಭಿನಯ […]

ಜಾಹಿರಾತು ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡ ಸಾಹಿತ್ಯ್ ಸಂಭ್ರಮ್ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಆಮ್ಚಿ ಮಾಂಯ್ ಪತ್ರಿಕೆಯ ಮಾಜಿ ಸಂಪಾದಕರಾದ ಮುಕ್ತಿ ಪ್ರಕಾಶ್ ನಾಮಾಂಕಿತ ವಂದನೀಯ ಗುರು ಫ್ರಾನ್ಸಿಸ್ ಡಿಸೋಜ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಕಾಡೆಮಿಯು ಸಾಹಿತ್ಯ ಕಾರ್ಯಕ್ರಮಗಳನ್ನು ಊರೂರುಗಳಲ್ಲಿ ಹಮ್ಮಿಕೊಂಡು ಅಕಾಡೆಮಿಯ ಇರುವಿಕೆಯನ್ನು ಕೊಂಕಣಿಗರಲ್ಲಿ ತೋರ್ಪಡಿಸುತ್ತದೆ ಇಂತಹ […]

ಕುಂದಾಪುರ – ಕಾಶ್ಮೀರದ ಫಹಲ್ಗಾಮದಲ್ಲಿ ನಡೆದ ಭಯೋತ್ಪಾದಕೆ ದಾಳಿ ಇಡಿ ದೇಶಕ್ಕೆ ಆಫಾತ ನೀಡಿದೆ. ನಮ್ಮವರನ್ನು. ಕಳೆದುಕೊಂಡ ಯಾತನೆ ಆವರಿಸಿದೆ. ‘ಇಂತಹ ದುಷ್ಕತ್ಯ ಎಸಗಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಆಗಲೇಬೆಕು. ಕೇಂದ್ರ’ ಸರಕಾರ ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆಮೊಳಹಳ್ಳಿ ಹೇಳಿದರು. ಸೋಮವಾರ (28) ರಂದು ಸಂಜೆ ಇಲ್ಲಿನ ಶಾಸ್ತ್ರಿ ವ್ರತ್ತದಲ್ಲಿ ಫಹಲ್ಗಾಮದಲ್ಲಿ ನಡದ ಭಯೋತ್ಪಾದಕ ದಾಳಿ ಖಂಡಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆಯೋಜಿದ ಪ್ರತಿಭಟನೆ […]

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಕುಡುಬಿ ಜಾನಪದ ಸಮಾವೇಶ 2025 ಕಾರ್ಯಕ್ರಮವು 27-04-2025ರಂದು ಮಿಜಾರಿನ, ಮಿಜಾರು ಅಣ್ಣಪ್ಪ ಸಭಾಂಗಣದಲ್ಲಿ ಜರುಗಿತು. ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆಯು ವೈಭವಯುತವಾಗಿ ದೂಮಚಡವು ಮುಖ್ಯರಸ್ತೆಯಿಂದ ಮಿಜಾರ್ ಅಣ್ಣಪ್ಪ ಸಭಾಭವನದವರೆಗೆ ನಡೆಯಿತು. ಮೆರವಣಿಗೆಯಲ್ಲಿ 1500 ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೋಹನ್ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ತನಗೂ, ತನ್ನ […]