
ಕುಂದಾಪುರ; ಆರೋಗ್ಯ ತಪಾಸಣಾ ಶಿಬಿರ ರೆಡ್ ಕ್ರಾಸ್ ಸಂಸ್ಥೆಯು ನಿಯತವಾಗಿ ನಡೆಸುತ್ತಾ ಬಂದಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಬಳಿಯಿರುವ ಜನೌಷಧಿ ಕೇಂದ್ರದ ವಠಾರದಲ್ಲಿ ಜರುಗಿದ್ದು 150ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು.

ಶಂಕರನಾರಾಯಣ : ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ಉದ್ದೇಶದಿಂದ ಶೈಕ್ಷಣಿಕ ವರ್ಷದ ದ್ವಿತೀಯ ಸೆಮಿಸ್ಟರ್ಅವಧಿಯಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹುಡುಗ ಮತ್ತು ಹುಡುಗಿಯರಿಗೆ ನಾಲ್ಕು ತಂಡಗಳನ್ನಾಗಿ (ಎಮರಾಲ್ಡ್, ಸಪಾಯರ್, ರೂಬಿ ಮತ್ತು ಟೋಪಾಜ್ ) ರಚಿಸಿ ಅಕ್ಟೋಬರ್ ತಿಂಗಳ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ವಿವಿಧ ರೀತಿಯ ಒಳಾOಗಣ ಮತ್ತು ಹೊರಾಂಗಣ ಕ್ರೀಡೆ,ಸಾಂಸ್ಕೃತಿಕಸಹಪಠ್ಯಚಟುವಟಿಕೆ ಮತ್ತು ಶಿಸ್ತು ಇತ್ಯಾದಿ ವಿಭಾಗಗಳಲ್ಲಿ ತೋರಿದ ಸರ್ವಾ0ಗೀಣ ಪ್ರಗತಿಯನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಠಿತ ವಿಕ್ಟರ ಅವಾರ್ಡ್ ಪ್ರಶಸ್ತಿಯನ್ನು […]

ಪಡುಕೋಣೆ;ಡಿಸೆಂಬರ್ 24 ರ ಸಂಜೆ ಪಡುಕೋಣೆ ಸಂತ ಅಂತೋನಿ ಇಗರ್ಜಿಯ, ಧರ್ಮಗುರು ವಂ। ಫ್ರಾನ್ಸಿಸ್ ಕರ್ನೇಲಿಯೊ ಮೇಲುಸ್ತುವಾರಿಯಲ್ಲಿ, 4 ಅತಿಥಿ ಧರ್ಮಗುರುಗಳು ಕ್ರಿಸ್ಮಸ್ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.

ಶ್ರೀ ಗೋಪಾಲಕೃಷ್ಣ ಮಹಾಗಣಪತಿ ದೇವಸ್ಥಾನ ಕಟ್ಟು ಹೆಮ್ಮಾಡಿ ಇಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜಾ ಕಾರ್ಯಕ್ರಮವು ಡಿಸೆಂಬರ್ 29ರಂದು ಜರುಗಲಿರುವುದು ಬೆಳಿಗ್ಗೆ ಗಂಟೆ 9ಕ್ಕೆ ಸರಿಯಾಗಿ ಸತ್ಯನಾರಾಯಣ ಪೂಜೆ ಹಾಗೂ ಗೋಪಾಲಕೃಷ್ಣ ಬಾಲಕಿಯರ ಭಜನಾ ತಂಡ ಕಟ್ಟು ಹೆಮ್ಮಾಡಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:30ಕ್ಕೆ ಸರಿಯಾಗಿ ಅನ್ನ ಸಂತರ್ಪಣೆ ನಡೆಯಲಿರುವುದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ರಾತ್ರಿ ಗಂಟೆ ಹತ್ತಕ್ಕೆ ಸರಿಯಾಗಿ […]

ಕೋಟಃ ಡಿಸೆಂಬರ್ 24 ರ ಸಂಜೆ ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ, ಧರ್ಮಗುರು ವಂ।ರೆಜಿನಾಲ್ಡ್ ಪಿಂಟೊ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಮತ್ತು ವಂ।ದೀಪಕ್ ಪುಟಾರ್ಡೊ ಸಹಬಲಿದಾನವನ್ನು ಅರ್ಪಿಸಿದರು. ಭಕ್ತಾಧಿಗಳು ಕ್ರಿಸ್ಮಸ್ ಭಕ್ತಿ ಗೀತೆಗಳನ್ನು ಹಾಡಿದರು. ವಂ। ಸ್ಟ್ಯಾನಿ ತಾವ್ರೊ ಕ್ರತ್ಜನತೆ ಮತ್ತು ಶುಭಾಷಗಳನ್ನು ಕೋರಿದರು. ಬಲಿ ಪೂಜೆಯ ನಂತರ ಭಕ್ತಾದಿಗಳು ಪರಸ್ಪರ ಶುಭಾಷಯಗಳನ್ನು ಹಂಚಿಕೊಂಡರು.

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪಿ ಯು ಕಾಲೇಜಿನ ದ್ವಿತೀಯ ಪಿ ಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆ ಸಂಸ್ಥೆಗಳಿಗೆ 70 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭೇಟಿ ನೀಡಿ ವಿವಿಧ ದಿನಬಳಕೆಯ ಗ್ರಹೋಪಯೋಗಿ ವಸ್ತುಗಳ ಉತ್ಪಾದನೆ, ನೂತನ ತಂತ್ರಗಾರಿಕೆಯ ಬಳಕೆ, ಪ್ರೊಡಕ್ಷನ್ ಮತ್ತು ಪ್ರೋಸೆಸ್ಸಿಂಗ್, ಕಚ್ಚಾವಸ್ತುಗಳ ಬಳಕೆಯಿಂದ ಉತ್ಪಾದನೆಯಾಗುವ ತ್ಯಾಜ್ಯಗಳ ಮರುಬಳಕೆ, ಉದಯವಾಣಿ ದಿನಪತ್ರಿಕೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡರು ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರಾದ […]

ಗಂಗೊಳ್ಳಿಃ ಡಿಸೆಂಬರ್ ೨೪ ರ ಸಂಜೆ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ, ಧರ್ಮಗುರು ವಂ।ತೋಮಸ್ ರೋಶನ್ ಡಿಸೋಜಾ ಇವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.

ಕುಂದಾಪುರ (ಡಿ.26): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ವೃತ್ತಿಯ ಕಡಗೆ ಮನಸ್ಸು ಮಾಡುತ್ತಾರೆ. ಆದರೆ ಇತರ ಕೆಲಸದ ಕಡೆಗೆ ಮನಸ್ಸು ಮಾಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮ, ದೇಶ ಭಕ್ತಿಯನ್ನು ಬೆಳೆಸಿಕೊಂಡರೆ ದೇಶ ಸೇವೆಯನ್ನು ಮಾಡುವ ಬೇರೆ ಬೇರೆ ಸರ್ಕಾರಿ ಕೆಲಸಗಳಿವೆ. ಅದರತ್ತ ಮನಸ್ಸು ಮಾಡಬೇಕು ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಶ್ರೀಯುತ ಪುನೀತ್ ಕುಮಾರ್ ಹೇಳಿದರು.ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು […]

ಕಲ್ಯಾಣಪುರದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಯು ಭವ್ಯವಾದ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ ಕಾರ್ಯಕ್ರಮವಾಗಿತ್ತು. ಸಂಜೆ 6:30 ರಿಂದ 7:00 ರವರೆಗೆ ಕ್ಯಾರೋಲ್ ಗಾಯನದ ಮೋಡಿಮಾಡುವ ಅಧಿವೇಶನದೊಂದಿಗೆ ಪ್ರಾರಂಭವಾಯಿತು, ಜೊವಿಟಾ ಫೆರ್ನಾಂಡಿಸ್ ಮತ್ತು ಅವರ ಸುಸಂಘಟಿತ ಗಾಯಕರ ತಂಡ. ಅವರ ಮಧುರ ಮತ್ತು ಸಾಮರಸ್ಯದ ಕ್ಯಾರೋಲ್ಗಳ ನಿರೂಪಣೆಯು ವಾತಾವರಣವನ್ನು ಸಂತೋಷ ಮತ್ತು ಗೌರವದಿಂದ ತುಂಬಿತು, ರಾತ್ರಿಯ ಸ್ವರವನ್ನು ಸಂಪೂರ್ಣವಾಗಿ ಹೊಂದಿಸುತ್ತದೆ. ಅತ್ಯಾಕರ್ಷಕ ದೀಪಗಳು, ಕ್ರಿಸ್ಮಸ್ ಅಲಂಕಾರಗಳು, ನಕ್ಷತ್ರಗಳು ಮತ್ತು ಸುಂದರವಾಗಿ ರಚಿಸಲಾದ ಕೊಟ್ಟಿಗೆಗಳಿಂದ ಅಲಂಕರಿಸಲ್ಪಟ್ಟ ಚರ್ಚ್, […]