
ಮಂಗಳೂರು, ಏಪ್ರಿಲ್ 22: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದೇ ಮೊದಲ ಬಾರಿಗೆ ಕೌಶಲ್ಯ ಸಬಲೀಕರಣ ಕಾರ್ಯಕ್ರಮದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿ ಡಾ. ಪಿ.ಎಲ್. ಧರ್ಮ ನೇತೃತ್ವದ ನಾಯಕತ್ವ ತಂಡ – ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಗೌರವಾನ್ವಿತ ಅಧ್ಯಕ್ಷ ಡಾ. ಜಯರಾಜ್ ಅಮೀನ್, ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ‘ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ […]

ಮಂಗಳೂರು;ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಇವರ ಸಹಯೋಗದಲ್ಲಿ ಬಜ್ಜೋಡಿಯ ಇನ್ಫೆಟ್ ಮೇರಿ ಚರ್ಚ್ ಸಭಾಂಗಣದಲ್ಲಿ ʼಮಾಣ್ಕಾಂ-ಮೊತಿಯಾಂʼ ಶೀರ್ಷಿಕೆಯಡಿ ಎಪ್ರಿಲ್ 21ರಿಂದ 23ರವರೆಗೆ, 3 ದಿನ ಮಕ್ಕಳ ರಜಾ ಶಿಬಿರವನ್ನು ಹಮ್ಮಿಕೊಂಡಿತ್ತು. ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶ್ರೀ ರೋಯ್ ಕ್ಯಾಸ್ತೆಲಿನೊರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ನಮ್ಮ ಕೊಂಕಣಿ ಭಾಷೆಯು ರಾಷ್ಟದ 22 ಅಧಿಕೃತ ಭಾಷೆಗಳಲ್ಲಿ ಒಂದು. ನಾವು ಕೊಂಕಣಿ ಭಾಷೆ ಮಾತನಾಡಿದ್ದರಿಂದ ಕೊಂಕಣಿ ಭಾಷೆಯು ಉಳಿದಿದೆ. ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷೆಯನ್ನು ಉಳಿಸಲು ಹಲವಾರು ಕಾರ್ಯಕ್ರಮದ ಮೂಲಕ ಪ್ರಯತ್ನಿಸುತ್ತಿದೆ. ಅಕಾಡೆಮಿಯು ಆಯೋಜಿಸಿದ ಈ ಕಾರ್ಯಕ್ರಮವು ಮಕ್ಕಳಿಗೆ ವಿವಿಧ ವಿಚಾರಗಳನ್ನು ಕಲಿಸಿದೆ. ಇಂತಹ ಶಿಬಿರಗಳಿಂದ ಕೊಂಕಣಿ ಭಾಷೆಯನ್ನು ಮಕ್ಕಳು ಕಲಿಯುವ ಮೂಲಕ ಅವರ ಸಮಗ್ರ ಅಭಿವೃದ್ದಿಯಾಗಲಿ, ಮಕ್ಕಳು ಮುಂದೆ ಬರಲು ಶಿಬಿರವು ಪ್ರೇರಣೆಯಾಗಲಿ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಇನ್ಫೆಂಟ್ ಜೀಸಸ್ ಶ್ರೈನಿನ ರೆಕ್ಟರ್ ಆದ ವಂದನೀಯ ಮೆಲ್ವಿನ್ ಡಿಕುನ್ಹಾ, ಬಜ್ಜೋಡಿ ಚರ್ಚ್ ನ ಧರ್ಮಗುರುಗಳಾದ ವಂ.ದೊಮಿನಿಕ್ ವಾಸ್, ಬಜ್ಜೋಡಿ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಜಾನೆಟ್ ಡಿಸೋಜ, ಶಿಬಿರದ ಸಂಚಾಲಕರಾದ ಅರುಣ್ ರಾಜ್ ರೊಡ್ರಿಗಸ್, ಅಕಾಡೆಮಿಯ ಸದಸ್ಯ ಸಂಚಾಲಕರಾದ ನವೀನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರು ಅಧ್ಯಕ್ಷೀಯ ಭಾಷಣದಲ್ಲಿ, ಅಕಾಡೆಮಿಯು ಮುಂದೆಯೂ ಕೂಡ ಇಂತಹ ಶಿಬಿರಗಳನ್ನು ಆಯೋಜಿಸಲು ತಯಾರಿದೆ. ಆದುದರಿಂದ ಎಲ್ಲಾ ಸಮುದಾಯದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕೊಂಕಣಿ ಭಾಷೆ ಮತ್ತು ಗುಮಟ್ ಗೆ ಬಹಳ ಹತ್ತಿರದ ಸಂಬಂಧವಿದೆ. ಗುಮಟ್ ಹಾಗೂ ಹೊಸ ವಿಷಯದ ಬಗ್ಗೆ ಮಕ್ಕಳಿಗೆ ಈ ಶಿಬಿರದಲ್ಲಿ ಕಲಿಯಲು ಅವಕಾಶ ಸಿಕ್ಕಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರನ್ನು ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಮೊದಲಿಗೆ ಶಿಬಿರಾರ್ಥಿಗಳು ಸಂಗೀತ, ನಾಟಕ, ನೃತ್ಯವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು ಮತ್ತು ತಾವು ಶಿಬಿರದಲ್ಲಿ ಕಲಿತ ವಿಷಯಗಳನ್ನು ತಮ್ಮ ಅನಿಸಿಕೆಯಲ್ಲಿ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಹಂಚಲಾಯಿತು. ಬಜ್ಜೋಡಿ ಚರ್ಚ್ ನ ಧರ್ಮಗುರುಗಳಾದ ವಂ|ದೊಮಿನಿಕ್ ವಾಸ್ ರವರು ಸ್ವಾಗತಿಸಿ, ಶಿಬಿರಾರ್ಥಿಯಾದ ರಿಯಾನ್ ಪಿಂಟೊರವರು ವಂದಿಸಿದರು. ಶಿಬಿರಾರ್ಥಿಗಳಾದ ಸಮೈರಾ ಫೆರ್ನಾಂಡಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಉಡುಪಿ ಡಯಾಸಿಸ್ನ ಬಿಷಪ್ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಡಯಾಸಿಸ್ನ ವಿಕಾರ್ ಜನರಲ್ ಮತ್ತು ಮಿಲಾಗ್ರಿಸ್ ಕ್ಯಾಥೆಡ್ರಲ್ನ ರೆಕ್ಟರ್ ಅತಿ ವಂ. ಫರ್ಡಿನಾಂಡ್ ಗೊನ್ಸಾಲ್ವೆಸ್, ಉಡುಪಿ ಡಯಾಸಿಸ್ನ ಕುಲಪತಿ ಅತಿ ವಂ. ಸ್ಟೀಫನ್ ಡಿಸೋಜಾ, ಮೌಂಟ್ ರೋಸರಿಯ ಪ್ಯಾರಿಷ್ ಪಾದ್ರಿ ರೆ. ಫಾ. ಪ್ರದೀಪ್ ಕಾರ್ಡೋಜಾ, ಹೋಲಿ ಕ್ರಾಸ್ ಕಟ್ಪಾಡಿಯ ರೆ. ಫಾ. ರಾನ್ಸನ್ ಡಿಸೋಜಾ ಮತ್ತು ಡಯೋಸಿಸನ್ ಪಾದ್ರಿಗಳು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಕೋರುವ ಬಲಿಪೂಜೆಯನ್ನು ಜಂಟಿಯಾಗಿ ನೆರವೇರಿಸಿದರು. […]

ಕುಂದಾಪುರ: ಮಾರ್ಚ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸದಾನಂದ ಕಾಮತ್ ಮಾತನಾಡಿ ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರು ಜವಾಬ್ದಾರಿ ಬಹಳವಿದೆ.ಅದಕ್ಕಾಗಿ ಕಾಲೇಜು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂದರೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮ ಪಿ.ಎಮ್.ಕೆ ವಿ.ವಾಯ್ ಭಂಡಾರ್ಕಾರ್ಸ್ ಕಾಲೇಜಿಗೆ ದೊರೆತಿರುವ ಕುರಿತು ಅಭಿನಂದಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಉದ್ಯೋಗ ಆಧಾರಿತ ಮತ್ತು […]

ಬೈಂದೂರು; ಕಳೆದ ಎಂಟು ತಿಂಗಳುಗಳಿಂದ ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ, ಇದೀಗ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಿರ್ಗಮಿಸುತ್ತಿರುವ ಜೆಜ್ವಿತ್ ಧರ್ಮಗುರು ರೆ.ಫಾ. ಜೊಸ್ವಿನ್ ಪಿರೇರಾ ರವರಿಗೆ ಬೈಂದೂರಿನ ಕ್ರೈಸ್ತ ಸಮುದಾಯದ ಪರವಾಗಿ ಬೀಳ್ಕೊಡುಗೆ ಸಮಾರಂಭ ಜರುಗಿತು. […]

ಮಂಗಳೂರು; ಎಮ್.ಸಿ.ಸಿ. ಬ್ಯಾಂಕ್ 2024–25 ವಿತ್ತೀಯ ವರ್ಷದಲ್ಲಿ 13.00 ಕೋಟಿ ಲಾಭ, ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆಕರ್ನಾಟಕದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13.00 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ 1.30% ಎನ್.ಪಿ.ಎ. ದಾಖಲಿಸಿದೆ.ದಾಖಲೆಯ ಲಾಭ ಮತ್ತು […]

2025 ರ ಏಪ್ರಿಲ್ 19 ರ ಶನಿವಾರ ಸಂಜೆ 7.00 ಗಂಟೆಗೆ ಚರ್ಚ್ನ ಪೋರ್ಟಿಕೋದಲ್ಲಿ ಈಸ್ಟರ್ ಮೇಣದಬತ್ತಿಯನ್ನು ಬೆಳಗಿಸುವುದರೊಂದಿಗೆ ಬಹುನಿರೀಕ್ಷಿತ ಈಸ್ಟರ್ ಜಾಗರಣೆ ಸೇವೆಯು ಪ್ರಾರಂಭವಾಯಿತು. ಪ್ಯಾರಿಷ್ ಪಾದ್ರಿ ರೆವರೆಂಡ್ ಡಾ. ರೋಕ್ ಡಿಸೋಜಾ, ಸಹಾಯಕ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಆಲಿವರ್ ನಜರೆತ್ ಮತ್ತು ಅತಿಥಿ ಪಾದ್ರಿ ರೆವರೆಂಡ್ ಫಾದರ್ ಇವಾನ್ ಮಾಡ್ತಾ, ಫಾದರ್ ರೋಡ್ರಿಗಸ್ ಮತ್ತು ರೆವರೆಂಡ್ ಫಾದರ್ ಸ್ಟೀವನ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಎಲ್ಲಾ ಪ್ಯಾರಿಷಿಯನ್ನರ ಸಮ್ಮುಖದಲ್ಲಿ ಈಸ್ಟರ್ ಜಾಗರಣೆಯು ಯೇಸು ಸಮಾಧಿಯಲ್ಲಿದ್ದ […]

ಉಡುಪಿ; ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ‘ಈಸ್ಟರ್’ ಮತ್ತೊಮ್ಮೆ ಆಚರಿಸುವ ಭಾಗ್ಯ ನಮ್ಮದಾಗಿದೆ. ಈ ಶುಭ ಸಂದರ್ಭದಲ್ಲಿ ಸಮಾಜದ ಎಲ್ಲಾ ಬಂಧು ಮಿತ್ರರಿಗೆ ಹಬ್ಬದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಈಸ್ಟರ್ ನವೀಕರಣ, ನಿರೀಕ್ಷೆ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯದ ಶಾಶ್ವತ ಸಂಕೇತವಾಗಿ ನಿಂತಿದೆ – ಇದು ಆಧ್ಯಾತ್ಮಿಕ ಪ್ರಯಾಣದ ಹಾದಿಯನ್ನು ಲೆಕ್ಕಿಸದೆ ಆಳವಾಗಿ ಪ್ರತಿಧ್ವನಿಸುವ ಸಂದೇಶವಾಗಿದೆ. ಈ ಋತುವು ನಮ್ಮೆಲ್ಲರನ್ನೂ ರೂಪಾಂತರವನ್ನು ಸ್ವೀಕರಿಸಲು, ನಮ್ಮ ಭೇದÀಗಳನ್ನು ಮೀರಿ ಕರುಣೆ ಮತ್ತು ತಿಳುವಳಿಕೆಯ ಮನೋಭಾವದಲ್ಲಿ ಒಂದಾಗಲು […]

ಕೋಟ, ಎ.20; ಕೋಟ ಸಂತ ಅಂತೋನಿ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನು ಆಚರಿಸಲಾಯಿತು. ಪಾಸ್ಕ ಆಚರಣೆಯ […]