
ಕುಂದಾಪುರ:’ನಾವು ದಿನನಿತ್ಯ ವಿವಿಧ ರೀತಿಯ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಇರುತ್ತೇವೆ. ನಮಗೆ ಸಿಕ್ಕಿದ ಅವಕಾಶ- ಸೌಲಭ್ಯಗಳನ್ನು ಇತರರಿಗೂ ನೀಡುವ ಔದಾರ್ಯ ನಮ್ಮಲ್ಲಿರಬೇಕು. ಇಂಥ ಸರಳ ಮೌಲ್ಯಗಳನ್ನು ನಾವು ಪಾಲಿಸಿದರೆ ಸ್ವಾಮಿ ವಿವೇಕಾನಂದರ ಕನಸಿನ ಭಾರತ ದೇಶ ಕಟ್ಟುವಲ್ಲಿ ನಾವು ಕೊಡುಗೆಯನ್ನು ನೀಡಿದಂತಾಗುತ್ತದೆ’ ಎಂದು ಜೆಸಿ ಅಕ್ಷತಾ ಗಿರೀಶ್ ಐತಾಳ್ , ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರು, ಜೆಸಿಐ ಇವರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿಟಿಯ ಸಹಯೋಗದಲ್ಲಿ ಆಯೋಜಿಸಿದ ‘ ಎಂಪವರಿಂಗ್ ಯೂತ್ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು. ಮುಖ್ಯ ಅತಿಥಿಯವರಾದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಉದಾತ್ತ ಸ್ಮರಣೆ ಮಾಡಿ ತರಬೇತುದಾರರು ನೀಡುವ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು. ತರಬೇತುದಾರರಾಗಿ ಆಗಮಿಸಿದ ಪ್ರೊವಿಶನಲ್ ಝೋನಲ್ ಟ್ರೈನರ್ ಜೆಸಿ ಕ್ವೀನಿ ಡಿಕೊಸ್ಟಾ ರವರು ಸಂವಹನ, ಸೃಜನಶೀಲತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಮಾಡಬೇಕಾದ ಸದಭಿರುಚಿಯ ವರ್ತನೆಯ ಬಗ್ಗೆ ವಿದ್ಯಾರ್ಥಿಗಳನ್ನು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿವರಿಸಿದರು. ಕುಂದಾಪುರ ವಲಯ ಉಪಾಧ್ಯಕ್ಷರಾದ ಜೆಸಿ ಅಭಿಲಾಷ್ ಬಿ.ಎ ಯವರು ವಿದ್ಯಾರ್ಥಿಗಳು ಬದುಕಿನಲ್ಲಿ ಒಳ್ಳೆಯ ವಿಚಾರಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಯೂತ್ ಐಕಾನ್ ಗಳಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜೆ.ಸಿ.ಐ ಕುಂದಾಪುರ ಸಿಟಿ ಯ ನೂತನ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ ರವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಜೆ.ಸಿ. ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.

12 Thursday: On the eighth day of the novena, the Holy Shrine of Infant Jesus offered special prayers for the sick and suffering at Bikarnakatte. Today was also the day to pray for the elderly, so devotees brought their elderly family members to be prayed over. Special Masses were held for them at 10.30 a.m. […]

11 Wednesday: At the Holy Shrine of the Infant Jesus in Bikarnakatte, nine masses were held on the seventh day of the novena, and special prayers were offered for the donors and well-wishers of the shrine. he faithful were admonished to seek first the kingdom of God and the rest of the things will follow, […]

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಯೋಜನಾ ಅರಿವು ‘ ಕಾರ್ಯಕ್ರಮ’ ’ ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಕುಂದಾಪುರ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(KUIDFC), ಕರ್ನಾಟಕ ಸಮಗ್ರ ನಗರ ನೀರು ನರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ ಹಾಗೂ ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ(CAPRR) ಚಟುವಟಿಕೆಗಳ ಆಶ್ರಯದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು. ಶ್ರೀ ಮಾಲತೇಶ್ ಎಮ್.ಎಚ್, ಸುಮುದಾಯ ಅಭಿವೃದ್ಧಿ ಸಹಾಯಕರು, KUIDFC KIUWMIP, ಉಡುಪಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಎಲ್ಲಾ ಕಡೆ ನಿರಂತರವಾಗಿ ಸರಬರಾಜು ಮಾಡುವ ಬಗ್ಗೆ ದೃಶ್ಯಾವಳಿಗಳ ಮೂಲಕ ಸವಿವರವಾದ ಮಾಹಿತಿಗಳನ್ನು ನೀಡಿದರು. ಕೆಯುಐಡಿಎಫ್ ಸಿಪಿಐಯು, ಕುಂದಾಪುರ ಇದರ ಸಹಾಯಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಎಸ್. ಹಿರೇಮಠ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಟಿ.ಸಿ, ಕುಂದಾಪುರ ಇದರ ಸಮಾಲೋಚಕ ಅಭಿಯಂತರರಾದ ಶ್ರೀ ಪಿ.ವಿ.ಸುರೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಹೊಸ ಅರಿವು ಮೂಡಿಸುವ ಪುರಸಭೆಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು.

ಕಳೆದ 29 ವರ್ಷಗಳಿಂದ ಮಂಗಳೂರು ಆಸುಪಾಸಿನಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್, ಬಿಜೈ ಮುಖ್ಯ ರಸ್ತೆಯಲ್ಲಿ, ಅತ್ಯಾಧುನಿಕ ಸೌಕರ್ಯಗಳ ‘ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ದಿಪಡಿಸುತ್ತಿದೆ. ಸಹಕಾರಿ ರಂಗದ ಭೀಷ್ಮ ಎಂದೇ ಹೆಸರುವಾಸಿಯಾಗಿರುವ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಈ ಸಮುಚ್ಚಯದ ಸಹ – ಪ್ರವರ್ತಕರಾಗಿದ್ದಾರೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಇದೀಗ ಬುಕ್ಕಿಂಗ್ಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತಿದೆ.ಬಿಜೈ ಮುಖ್ಯ ರಸ್ತೆ ಪ್ರದೇಶ, ಸ್ಮಾರ್ಟ್ ಸಿಟಿಯ ವ್ಯಾಪ್ತಿಗೆ ಬರುವ […]

YOUTH EXHORTED TO ‘PURSUE LASTING JOY RATHER THAN FLEETING PLEASURES’ 10 Tuesday:Nine masses were held throughout the day on the sixth day of the novena at the Infant Jesus Shrine in Bikarnakatte, with a particular emphasis on praying for the youth. “Be happy while you are young, and let your heart give you joy in […]

Special prayers for those working abroad offered at Infant Jesus 09 Monday: The fifth day of novena was held at the holy shrine of Infant Jesus at Bikarnakatte today and special prayers were offered for those working abroad. The day’s theme, “Let love and faithfulness never leave you” (Proverbs 3:3), inspired everyone to consider how […]

ಬಸ್ರೂರು, ಜ.6: ಇಲ್ಲಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ 18 ನೇಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ, ಮಾಜಿ ಶಾಸಕ ಜಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಳೆದ 18 ವರ್ಷಗಳಿಂದ ಬಸ್ರೂರಿನ ಶ್ರೀ ಶಾರದಾ ಆಂಗ್ಲಮಾಧ್ಯಮ ಶಾಲೆ ಉತ್ತಮ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಭಾಟಿಸಿದ ಶಿಕ್ಷಣ ಸಂಯೋಜಕ, ರಾಜ್ಯ ಜೆಡಿಎಸ್ ವಕ್ತಾರ ಮಹೇಶ್ ಗೌಡ ಮಂಡ್ಯ ಮಾತನಾಡಿ, ಈ ಶಾಲೆ ಉತ್ತಮ ಶೈಕ್ಷಣಿಕ […]