
ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ ಇವರು ಕೋಟೇಶ್ವರ ಕೊಡಿ ಹಬ್ಬದಲ್ಲಿ ಮೂರು ದಿನಗಳ ಕಾಲ ವಿಶೇಷ ವಾದ ಬ್ರಹತ್ ವೇಷ ಧರಿಸಿ ಐದು ಬಡ ಮಕ್ಕಳ ವೈಧ್ಯಕೀಯ ಚಿಕಿತ್ಸೆಗಾಗಿ ಒಟ್ಟು 2,00,000 ದೇಣಿಗೆ ಸಂಗ್ರಹ ಮಾಡಿದ್ದು ದಿನಾಂಕ 04-12-23 ರಂದು ದೇಣಿಗೆ ಸಂಗ್ರಹಿಸಿದ ಹಣವನ್ನು ಶ್ರೀ ಕೋಟಿಲಿಂಗೆಶ್ವರ ದೇವಸ್ಥಾನದಲ್ಲಿ ಮಕ್ಕಳ ಪೋಷಕರ ಕೈಗೆ ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು.ಈ ಸಂಧರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಶ್ರೀ ಸುರೇಶ್ ಬೆಟ್ಟಿನ್ , ಮಂಜುನಾಥ್ […]

ಕುಂದಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಡಿಸೆಂಬರ್ 8ರಂದು ನಡೆಯಲಿದೆ.ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್.ಎಸ್.ಬಲ್ಲಾಳ್ ಅವರು ಸಾಧಕರಿಗೆ ಸನ್ಮಾನ ಪ್ರದಾನ ಮಾಡಲಿದ್ದಾರೆ.ಕುಂದಾಪುರ ವಿಧಾನಸಭಾ ಕ್ಷೇತ್ರದ […]

ಮಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಜೆಯನ್ನು ಕಡಿತ ಗೊಳಿಸದಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ ಸೋಜರಿಂದ ಕುಲಪತಿಗಳಿಗೆ ಮನವಿ.ಕಳೆದ 150 ವರ್ಷಗಳಿಂದ ಮದ್ರಾಸ್ ವಿಶ್ವವಿದ್ಯಾನಿಲಯದ ಕಾಲದಿಂದಲೂ ಕರಾವಳಿ ಕರ್ನಾಟಕದ ವಿಶ್ವಸಂಸ್ಥೆಗಳು ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾಲದ ರಜೆ ಸವಲತ್ತನ್ನು ಅನುಭವಿಸಿವೆ. ಆದರೆ ಈ ವರ್ಷ ಈ ರಜೆಯನ್ನು ಕಡಿತಗೊಳಿಸದಂತೆ ಮಾಜಿ MLC ಐವನ್ ಡಿ ಸೋಜರವರ ಮುಂದಾಳತ್ವದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ […]

ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ನವೆಂಬರ್ 26 ರಂದು ಮಂಗಳೂರಿನ ಲೈಟ್ಹೌಸ್ ರಸ್ತೆಯಲ್ಲಿರುವ ಲೇಡೀಸ್ ಕ್ಲಬ್ನಲ್ಲಿ ನಡೆದ ಸದಸ್ಯರ ಸಂಪರ್ಕ ಕಾರ್ಯಕ್ರಮದೊಂದಿಗೆ ಅದ್ಭುತ ಯಶಸ್ಸನ್ನು ಸಂಘಟಿಸಿತು.ಈ ಕಾರ್ಯಕ್ರಮದ ಉದ್ದೇಶವು ಸದಸ್ಯರನ್ನು ಒಟ್ಟುಗೂಡಿಸುವುದು ಮಾತ್ರವಲ್ಲ, ಸಮಾಜದ ಪ್ರಗತಿಯನ್ನು ರೂಪಿಸುವಲ್ಲಿ ಪರಿವರ್ತಕ ಶಕ್ತಿ ವ್ಯವಹಾರಗಳನ್ನು ಗುರುತಿಸುವ ಸಹಯೋಗದ ವಸ್ತ್ರವನ್ನು ನೇಯ್ಗೆ ಮಾಡಿದಂತೆ ಕಾರ್ಯಪ್ರವತ್ತವಾಗುವುದು. ಸಂಜೆ ಡಾ ಜೆಸ್ಸಿಕಾ ಮೊಂತೇರೊ ಮತ್ತು ಅವರ ತಂಡದ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಅಧ್ಯಕ್ಷ ಜಾನ್ ಬಿ ಮೊಂಟೆರೊ ಅವರು ರಚನಾ […]

ಕುಂದಾಪುರ: ಪ್ರತಿದಿನವು ಇತರರನ್ನು ಗೆಲ್ಲಿಸಿ ಎಂದು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷರಾದ ಗುರೂಜಿ ಶಾಂತಾರಾಮ್ ಭಂಡಾರ್ಕರ್ ಅವರು ಹೇಳಿದರು.ಅವರು ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಸಮಾರಂಭ- 2023 ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಪ್ರತಿದಿನವು ಮನೆ ಮನಸಿನಲ್ಲಿ ಕನಸಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರು ಜಯಗಳಿಸಬೇಕು. ನಿಮಗೂ ಬದುಕಿನಲ್ಲಿ ಸಾರ್ಥಕತೆಯ ಅನುಭವವಾಗುತ್ತದೆ. ಆಗ ಜಗತ್ತು ನಿಮ್ಮ ವಶವಾಗುತ್ತದೆ. ಅಲ್ಲದೆ ಪ್ರತಿ ವರ್ಷ ನಮ್ಮ ತಂದೆಯವರಾದ ಎ.ಎಸ್.ಭಂಡಾರ್ಕಾರ್ ಅವರು […]

ಕುಂದಾಪುರ,ಡಿ.5: ವಿ.ಕೆ.ಬುಡೊಕೋನ್ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಅಸೋಸಿಯೆಶನ್ ಆಫ್ ಇಂಡಿಯಾ ಇವರು ಡಿಸೆಂಬರ್ ೩ ರಂದು ಮಂದಾರ್ತಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಆಹ್ವಾನಿತರ ಓಪನ್ ಕರಾಟೆ ಚಾಂಪಿಯೆನ್ ಶಿಪ್ ಇದರಲ್ಲಿ ಕುಮಾರಿ ರಿಶೆಲ್ ಡಿಸಿಲ್ವಾ ಇವರು ಜೂನಿಯರ್ ಕರಾಟೆ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಇವರಿಗೆ ಕುಂದಾಪುರದ ಕರಾಟೆ ಮಾಸ್ಟರ್ ಕಿರಣ್ ಇವರ ಶಿಸ್ಯೆಯಾಗಿದ್ದು ಇವಳು ಕುಂದಾಪುರದ ವಿಲ್ಸನ್ ಮತ್ತು ರೋಶನಿ ಡಿಸಿಲ್ವಾರ ಪುತ್ರಿಯಾಗಿದ್ದಾಳೆ.

ಕುಂದಾಪುರ: “ಕುಂದಪ್ರಭ” ಸಂಸ್ಥೆಯ ವತಿಯಿಂದ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ “ಸಾಧಕರ ಕಥೆ” ಸ್ಪರ್ಧೆ ಏರ್ಪಡಿಸಲಾಗಿದೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕೇಳಿರುವ, ಓದಿರುವ, ಸಾಧಕರ ವಿಷಯಗಳನ್ನು ಉತ್ತಮವಾಗಿ ಕಥಾ ರೂಪದಲ್ಲಿ ನಿರೂಪಿಸುವ ಯುವ ಬರಹಗಾರರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಕಥೆ ನಾಲ್ಕು ಪುಟ ಮೀರದಂತೆ ಟೈಪ್ ಮಾಡಿ ಕಳುಹಿಸಬೇಕು. ಇಮೈಲ್ ಸಹ ಮಾಡಬಹುದು. kundaprabha@gmail.com , 15-12-2023ರೊಳಗೆ ತಲುಪುವಂತೆ “ಕುಂದಪ್ರಭ” ಕಥಾ ಸ್ಪರ್ಧೆ, ನಾರಾಯಣಗುರು ಕಾಂಪ್ಲೆಕ್ಸ್, ಈಸ್ಟ್ […]

ಸಾಹಿತಿ, ನಾಟಕಗಾರ, ಯಕ್ಷಗಾನ ಪ್ರಸಂಗಕರ್ತ, ಕವಿ, ವಾಚಕಾಭಿನಯ, ಪರಿಣತ, ವಾಗ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರನ್ನು “ಕುಂದಪ್ರಭ” ಸಂಸ್ಥೆಯ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 07-01-2024 ರಂದು ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ.ಹಿರಿಯ ಪತ್ರಕರ್ತ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ಇದಾಗಿದೆ.ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬಿಎಸ್ಎನ್ಎಲ್ ಉದ್ಯೋಗಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಯಕ್ಷಗಾನ, ನಾಟಕ, ಸಾಹಿತ್ಯ, ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ. ಡಾ| […]

ಮಂಗಳೂರು: ಡಿಸೆಂಬರ್ 3, 2023 ರಂದು ವಾಮಂಜೂರಿನ ಬೆಥನಿ ಭಗಿನಿಯರ ಪ್ರಾಂತೀಯ ಕಟ್ಟಡದ ಉದ್ಘಾಟನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 3:30 ಕ್ಕೆ, ಯೂಕರಿಸ್ಟಿಕ್ ಸೆಲೆಬ್ರೇಶನ್, ಆರ್ಟಿ ರೆವ್ ಡಾ ಪೀಟರ್ ಪೌಲ್ ಸಲ್ಡಾನ್ಹಾ ಅವರು ನಿರ್ವಹಿಸಿದರು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅವರು ಮಹತ್ವದ ಸಂದರ್ಭದಲ್ಲಿ ಶುಭ ಕೋರಿದರು. ಅವರ ಧರ್ಮೋಪದೇಶದಲ್ಲಿ, ಅವರು ಮೆಸ್ಸೀಯನ ಜಾಗರೂಕ ನಿರೀಕ್ಷೆಯನ್ನು ಒತ್ತಿಹೇಳುತ್ತಾ, ,ಕ್ರಿಸ್ಮಸ್ ಋತು ಆಗಮನವನ್ನು ಘೋಷಿಸಿದರು . ಕಾರ್ಯಕ್ರಮಕ್ಕೆ ೧೨ ಜನ ಧರ್ಮಗುರುಗಳು ಭಾಗವಹಿಸಿದ್ದರು.ಈವೆಂಟ್ನ ಪರಾಕಾಷ್ಠೆ ಎಂದರೆ ರೆವ ಸೀನಿಯರ್ […]