
ಕುಂದಾಪುರ,ಜ.17: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರದ್ಘಾಟಿಸುವ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು. ಹಕ್ಕುಪತ್ರ ವಿತರಣೆಗಾಗಿ ಕುಂದಾಪುರ ತಾಲೂಕು ಪಂಚಾಯತ್ ಕಛೇರಿಗೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರನ್ನು […]

ದಿನಾಂಕ 14 -01- 2024 ಭಾನುವಾರ ಬೆಳಿಗ್ಗೆ 7. 30ಕ್ಕೆ ದಿವ್ಯ ಬಲಿ ಪೂಜೆಯ ಮೂಲಕ ಸಂತ ಸೇಬಶ್ಚಿಯನರಾ ಹಬ್ಬವನ್ನು ಆಚರಿಸಲಾಯಿತು. ದಿವ್ಯ ಜ್ಯೋತಿ ಸಂಚಾಲಕರಾದ ವಂದನೀಯ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ. ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸೇಬಸ್ಟಿಯನ್ ನರ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನವನ್ನು ನೀಡಲಾಯಿತುತದನಂತರ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು. ಉದ್ಘಾಟಕರಾಗಿ ನಿಟ್ಟೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್, ಪಂಚಾಯತ್ ಸದಸ್ಯರಾದ […]

ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ರವರ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಅನ್ನು ಜನವರಿ 14, 2024 ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಭವ್ಯವಾದ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು, ಮುಖ್ಯ ಅತಿಥಿಗಳಾಗಿ ಎಂ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರೊನಾಲ್ಡ್ ಡಿಸೋಜಾ ಅವರು ಭಾಗವಹಿಸಿದರು. ಶ್ರೀ ಮೆಲ್ವಿನ್ ಪೆರಿಸ್ […]

ಅಲಂಗಾರ್ ದೇವಾಲಯದಲ್ಲಿ ಬಾಲಯೇಸುವಿನ ಹಬ್ಬವನ್ನು 14 ಜನವರಿ 2024 ರಂದು ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಿಶ್ರಾಂತ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮಹಾಮಸ್ತಕಾಭಿಷೇಕದ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ಪಾಲಿಕೆಯ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ದೇವರ ವಾಕ್ಯವನ್ನು ಬೋಧಿಸಿದರು. ಅವರು ತಮ್ಮ ಪ್ರವಚನದಲ್ಲಿ “ದೇವರು ನಮ್ಮೊಂದಿಗೆ, ನಾವು ನಮ್ಮ ನೆರೆಹೊರೆಯವರೊಂದಿಗೆ” ಎಂಬ ವಿಷಯವನ್ನು ಎತ್ತಿ ತೋರಿಸಿದರು. ಮೂಡುಬಿದಿರೆಯ ಧರ್ಮಾಧಿಕಾರಿಗಳಾದ ವೆರಿ ರೆ.ಫಾ ಓನಿಲ್ ಡಿಸೋಜ ಮತ್ತು ವರಡೋದ ಧರ್ಮಗುರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. […]

ಜ.22 : ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವರ್ಣ ಪಲ್ಲಕ್ಕಿ ಉತ್ಸವ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ವಿಗ್ರಹದ ಪ್ರಾಣ ಪ್ರತಿಷ್ಠಾನ ನಡೆಯುವ ಅಂಗವಾಗಿ ವಿಶೇಷ ಪೂಜೆ ಹಾಗೂ ದೀಪಾವಳಿ ಆಚರಣೆ ನಡೆಯಲಿದೆ. ಮುಂಜಾನೆಯಿಂದ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಸ್ವರ್ಣ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ರಾತ್ರಿ ಉತ್ಸವದ ನಂತರ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ದಿನ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಹಾಗೂ ಸ್ವರ್ಣಪಲ್ಲಕ್ಕಿ […]

ಜನವರಿ ೧೪ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಸಂತ ನಿರಂಕಾರಿ ಮಿಶನ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ನಾಗೂರಿನ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ “ರಕ್ತದಾನ ಶಿಬಿರ” ಆಯೋಜಿಸಲಾಗಿದ್ದು ಮಾನವೀಯತೆಯ ಈ ಮಹಾಯಜ್ಞ ದಲ್ಲಿ ಸಂತ ನಿರಂಕಾರಿ ಮಿಶನ್ನಿನ ಅನುಯಾಯಿಗಳೊಂದಿಗೆ ಸುತ್ತ ಮುತ್ತಲಿನಊರಿನ ಅನೇಕ ಗಣ್ಯರು ಪಾಲ್ಗೊಂಡರುಈ ಕಾರ್ಯ ಕ್ರಮ ವನ್ನು ಪೂಜ್ಯನೀಯ ಝೋನಲ್ ಇಂಚಾರ್ಜ್ ಸುನೀಲ್ ರಾತ್ರಾಜೀಯವರು ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ರಕ್ತ ದಾನದ ಮಹತ್ವ […]

ರೋಹನ್ ಕಾರ್ಪೊರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ಕಟ್ಟಡದ ನಿರ್ಮಾಣಕಾರ್ಯವು ಭರದಿಂದ ಸಾಗುತ್ತಿದೆ. ಜನವರಿ 14ರಂದು ರೋಹನ್ಕಾರ್ಪೊರೇಶನ್ ಯಶಸ್ವಿ 30 ವರ್ಷಗಳನ್ನು ಪೂರೈಸಿ, 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಈ ಪ್ರಯುಕ್ತರೋಹನ್ ಸಿಟಿ, ರೋಹನ್ ಸ್ಕ್ವೇರ್, ರೋಹನ್ಎಸ್ಟೇಟ್ಸ್ ಮತ್ತುಇನ್ನಿತರಆಯ್ದಪ್ರಾಜೆಕ್ಟ್ಗಳ (ಶರತ್ತುಗಳು ಅನ್ವಯಿಸಲಾಗಿದೆ) ಮೇಲೆ 10% ವಿಶೇಷ ರಿಯಾಯಿತಿಯನ್ನು ಹಮ್ಮಿಕೊಳ್ಳಲಾಗಿದೆ.ಈ ಕೊಡುಗೆಜನವರಿ 31, 2024ರವರೆಗೆ ಇರುವುದು.‘ರೋಹನ್ ಸಿಟಿ’ ರೋಹನ್ ಕಾರ್ಪೊರೇಶನ್ ಇದರಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷಚದರ ಅಡಿ ವಸತಿ […]

ಕುಂದಾಪುರ, ಜ.13: ಕೇಂದ್ರ ಸರಕಾರ ನಡೆಸಿದ ಸ್ವಚ್ಛ ಸರ್ವೇಕ್ಷಣಾ 2023ರಲ್ಲಿ ಕುಂದಾಪುರ ಪುರಸಭೆ ಕರ್ನಾಟಕದಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಮಂಗಳೂರು ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಒಂಬತ್ತನೇ ಮತ್ತು ದೇಶದಲ್ಲಿ 253 ನೇ ಸ್ಥಾನದಲ್ಲಿದ್ದರೆ, ಉಡುಪಿ ಕರ್ನಾಟಕದಲ್ಲಿ ಹತ್ತನೇ ಮತ್ತು ರಾಷ್ಟ್ರೀಯ ಶ್ರೇಯಾಂಕದಲ್ಲಿ 278 ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಈ ವಾರ್ಷಿಕ ಸಮೀಕ್ಷೆಯು ಒಂದು ಲಕ್ಷದೊಳಗಿನ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಆಧರಿಸಿ ನಗರಗಳನ್ನು ವರ್ಗೀಕರಿಸುತ್ತದೆ. ನಾಲ್ಕು ಹಂತಗಳಲ್ಲಿ ನಡೆಸಲಾದ […]

ಕುಂದಾಪುರ, ಜ.13: ಸ್ಥಳೀಯ ಸಂತ ಮೇರಿಸ್ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ ಮತ್ತು ಕ್ರೀಡಾ ಕೊಠಡಿಯ ಉದ್ಘಾಟನೆಯನ್ನು ದಾನಿಗಳಾದ ಅನಿಲ್ ಮತ್ತು ಸಿಂಥಿಯಾ ಸಿಕ್ವೇರಾ ದಂಪತಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂತ ಮೇರಿಸ್ ಪ್ರೌಢಶಾಲೆಯ ಜಂಟಿ ಕಾರ್ಯದರ್ಶಿಗಳಾದ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಪಾಠ,ಆಟ, ಊಟ ಇವು ಮುರೂ ಕೂಡ ಮುಖ್ಯ. ಈಗ ಪಾಟದ ಜೊತೆ ಅಡುಗೆ ಕೋಣೆ ಸಿದ್ದವಾಗಿದೆ, ಇನ್ನು ಮುಂದೆ ನಿಮಗೆ ವಿದ್ಯಾರ್ಥಿಗಳಿಗೆ ರುಚಿ ಶುಚಿಯಾದ ಊಟ […]