

ಕುಂದಾಪುರ,ಎ.18; “ಇವತ್ತು ಯೇಸು ಕ್ರಿಸ್ತ್ರರು ಮೂರು ಸಂಸ್ಕಾರಗಳನ್ನು ಸ್ಥಾಪಿಸಿದ ಬಹಳ ಪವಿತ್ರವಾದ ದಿನ. ಒಂದು ಯಾಜಕತ್ವದ ದಿನ ಯಾಜಕರು ಮನುಷ್ಯ ಮಧ್ಯದಿಂದ ಆರಿಸುವನು, ಆತ ದೇವ ಮತ್ತು ಮನುಸ್ಯರ ಮಧ್ಯೆ ಸೇವೆ ನೀಡುವನಾಗಿದ್ದಾನೆ, ಮತ್ತೊಂದು ಕೊನೆಯ ಭೋಜನ ಅಂದರೆ, ನನ್ನ ದೇಹವನ್ನು ನಾನೇ ಬಲಿದಾನವನ್ನು ಅರ್ಪಿಸಿ, ನನ್ನ ರಕ್ತವನ್ನು ಹರಿಸುತ್ತೇನೆ ಎಂದು ಶಿಲುಭೇಗೆರಿ, ಇದೇ ನೆನಪಲ್ಲಿ ಪೂಜೆಯ ವೇಳೆ ರೊಟ್ಟಿಯ ಮುಖಾಂತರ ನನ್ನನ್ನು ಸೇವಿಸಿದರೆ ನೀವು ಮುಕ್ತಿಯನ್ನು ಪಡೆಯುವಿರಿ, ಎಂದು ಸಂದೇಶ ನೀಡಿ ರೋಟ್ಟಿಯ ಸಂಸ್ಕಾರ ನೆರವೇರಿಸಿದ ದಿನ, ಮತ್ತೊಂದು ನೀವು ಸ್ವರ್ಗ ರಾಜ್ಯ ಬೇಕು ಅನ್ನುವರು, ಎಲ್ಲರಕಿಂತ ಸಣ್ಣವರಾಗಬೇಕು, ಅದಕ್ಕೆ ಅಂದಿನ ಕಾಲದ ಗುಲಾಮರಂತೆ ಶಿಸ್ಯರ ಪಾದಗಳನ್ನು ತೊಳೆದರು’ ಎಂದು ಅ।ವಂ। ಪಾವ್ಲ್ ರೇಗೊ ಹೇಳಿದರು.
ಅವರು ಎ. 17 ರಂದು ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಕೊನೆಯ ಭೋಜನದ ಹಬ್ಬ ಧಾರ್ಮಿಕ ಕಾರ್ಯಕ್ರಮದ ಮುಖ್ಯ ಯಾಜಕರಾಗಿ ಸಂದೇಶ ನೀಡಿದರು.
ಕುದಾಪುರ ಚರ್ಚಿನ ಚರ್ಚ್ ಪರಿಧಿಯಲ್ಲಿನ ಆರಿಸಿದ ಪ್ರತಿನಿಧಿಗಳ, ವೇದಿ ಸೇವಕರ, ಮತ್ತು ಸಾಮಾನ್ಯ ಜನರ ಪಾದ ತೊಳೆಯುವ ಆಚರಣೆ ನೆರವೇರಿಸಿ, ಪರಮ ಪ್ರಸಾದದ ಆರಾಧನೆಯನ್ನು ನೆಡಸಿಕೊಟ್ಟರು. ಈ ಪ್ರಾರ್ಥನ ವಿಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.




















































































