ಸರ್ಕಾರಿ ಸಮಾರಂಭದಲ್ಲಿ ನಿರ್ಧಿಷ್ಟ ಧರ್ಮದ ಪೂಜೆ: ಅಧಿಕಾರಿಗಳಿಗೆ ತರಾಟೆ, ಪುರೋಹಿತನನ್ನು ಹೊರಗೆ ಕಳುಹಿಸಿದ ಸಂಸದ

JANANUDI NEWS NETWORK

ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂತಿಲ್‌ಕುಮಾರ್ ಅವರು ಸರ್ಕಾರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುತ್ತಿದ್ದ ಭೂಮಿ ಪೂಜೆಯನ್ನು ತಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರ್ಚಕನನ್ನು ವಾಪಾಸ್ಸು ಕಳುಹಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರವಾಗಿದ್ದು, ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್‌ ಇದೇ ಸಂದರ್ಭದಲ್ಲಿ ಹೇಳಿರುವುದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕತೆಯನ್ನು ದೂರ ಇಟ್ಟಿದ್ದಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘೀಸಿದ್ದಾರೆ.