ವಿಚಾರವಾದಿಗಳ ಸವಾಲಿಗೆ ತಾಂಬೂಲಾ (ವಿಳ್ಯದೆಲೆ ನೋಡಿ)  ಜ್ಯೋತಿಷ್ಯ ಹೇಳುವ  ಎಲ್ಲಾ ಜ್ಯೋತಿಷ್ಯರಿಗೆ ಸೋಲು

JANANUDI.COM NETWORK

ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ಅಖಿಲ ಭಾರತೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳುವವರಿಗೆ ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜ್ಯೋತಿಷ್ಯರು ಕೂಡ ತಪ್ಪು ಉತ್ತರಗಳನ್ನು ಹೇಳುವ ಮೂಲಕ ಸೋತಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲೇ ಲಕೋಟೆ ತೆರೆದು ಜ್ಯೋತಿಷಿಗಳು ನೀಡಿದ ಉತ್ತರ ತಪ್ಪು ಎಂದು ಸಾಬೀತು ಪಡಿಸಿ  ಒಂದು ಲಕ್ಷ ರೂಪಾಯಿ  ಬಹುಮಾನ ತನ್ನಲ್ಲೇ ಇರಿಸಿಕೊಂಡಿದ್ದಾರೆ.   

ಪ್ರೊ.  ನರೇಂದ್ರ ನಾಯಕ್ ರವರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ ನಲ್ಲಿ 10 ದಿರ್ಹಮ್ , 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್, 6 ನೆಯದ್ದರಲ್ಲಿ Astrology Flopped miserably Once again ಎಂದು ಬರೆಯಲಾಗಿತ್ತು. 7ನೆಯದ್ದರಲ್ಲಿ ಭಾರತದ 10 ರೂ. ಕರೆನ್ಸಿ ಇಡಲಾಗಿತ್ತು.       

ಈ ಸವಾಲನ್ನು ಸ್ವೀಕರಿಸಿರುವ ಕೇವಲ ನಾಲ್ವರು ಜ್ಯೋತಿಷಿಗಳು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆಲ್ಲೂ ಅವರೆಲ್ಲರೂ ತಪ್ಪಾಗಿ ಉತ್ತರ ನೀಡಿದ್ದಾರೆ. ಓರ್ವರು ಆರು ಖಾಲಿ ಲಕೋಟೆಗಳು ಎಂದು, ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿ ಸೋಲನ್ನು ಕಂಡಿದ್ದಾರೆ.