

ಕುಂದಾಪುರ: ತಲ್ಲೂರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಾಸುದೇವ ಖಾರ್ವಿ(61 )ಅವರು ತಲ್ಲೂರು ಕೋಟೆಬಾಗಿಲಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಜುಲೈ 13ರ ರಾತ್ರಿ ನಿಧನರಾದರು. ಮೀನುಗಾರಿಕಾ ವೃತ್ತಿಯಲ್ಲಿದ್ದ ಅವರು ಸಮಾಜ ಸೇವೆಯಲ್ಲೂ ಗುರ್ತಿಸಿ ಕೊಂಡಿದ್ದರು. ಮೃತರು ಪತ್ನಿ ಒಂದು ಹೆಣ್ಣು ಹಾಗೂ ಮಾಜಿ ಗ್ರಾ.ಪಂ.ಸದಸ್ಯ ಸುನೀಲ್ ಖಾರ್ವಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.