ನಂದಳಿಕೆ: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷರು ಹಾಗೂ ರಜತ ಮಹೋತ್ಸವ ಸಭಾಂಗಣ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ, ಕಾರ್ಕಳ ಅಮ್ಮಾಸ್ ಸ್ಪೋಟ್ರ್ಸ್ & ಗಿಫ್ಟ್ ಸೆಂಟರ್ನ ಮಾಲಕರಾದ ಸುಧೀರ್ ಪೂಜಾರಿ, ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಕುಂಟಲಗುಂಡಿ ಸುನಿಲ್ ಪೂಜಾರಿ, ಗೀತಾ ಶೆಟ್ಟಿ ಕುಂಟಲಗುಂಡಿ, ದೈವ ನರ್ತಕರಾದ ಬೋಳ ರವಿ ನಲ್ಕೆ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕಾಸರಬೈಲು ಸುರೇಶ್ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ನಿಕಟ ಪೂರ್ವಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಅಬ್ಬನಡ್ಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಮೊದಲಾದವರಿದ್ದರು.
HOLY ROSARY CHURCH, KUNDAPUR – 450 th JUBILEE SOUVENIR 2021
ಇಂದಿನ ಮಕ್ಕಳು ಲೇಸ್,ಫಿಸ್ಜಾ, ಬರಗರ್ ದಂತಹ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿದೆ-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ : ಇಂದಿನ ಮಕ್ಕಳು ಪೌಷ್ಟಿಕ ಆಹಾರವಲ್ಲದ ಕುರುಕುರೆ, ಲೇಸ್,ಫಿಸ್ಜಾ, ಬರಗರ್ ದಂತಹ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿದೆ. ಇದರಿಂದ ಪೌಷ್ಡಿಕತೆಗೆ ಸಂಬಂದಿಸಿದ ಕಾಯಿಲೆಗಳು ಇತ್ತಿಚಿಗೆ ಕಂಡು ಬರುತ್ತಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ತೆರ್ನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮಜಿ ಪೌಡೇಶನ್ ಸಹಯೋಗದಲ್ಲಿ ವಾರದಲ್ಲಿ 6 ದಿನಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಪೂರ್ವಜರು ಮಕ್ಕಳಿಗೆ ಮನೆಯಲ್ಲಿಯೇ ತಯಾರಿಸಿದ ರಾಗಿ ಮಾಲ್ಟ್ ಹಾಗು ಅಕ್ಕಿಯಲ್ಲಿ ಮಾಲ್ಟ್ , ಬೇಸಿದ ತರಕಾರಿಗನ್ನು ತಿನ್ನಿಸಿ ಆರೋಗ್ಯ ಹಾಗು ದೈಹಿಕವಾಗಿ ಪುಷ್ಟಿದಾಯಕವಾದ ಆಹಾರಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಮನೆಯಲ್ಲಿ ತಯಾರಿಸಿ ತಿನ್ನುಸುತ್ತಿದ್ದರು ಇದರಿಂದ ನಾವೆಲ್ಲರೂ ಸಹ ಪುಷ್ಟಿದಾಯಕ ಆಹಾರವನ್ನು ತಿಂದು ಆರೋಗ್ಯವಾಗಿದ್ದೇವೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಸಿ.ಆರ್.ರಾಮಚಂದ್ರೇಗೌಡ, ಡಿವಿಜಿ ಮಂಜು, ಮಧ್ಯಾಹ್ನ ಬಿಸಿಯೂಟ ಶಿಕ್ಷಾಣಾಧಿಕಾರಿ ತಿಮ್ಮರಾಯಪ್ಪ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಅಕ್ಷರ ದಾಸೋಹ ಸಹಾಯಕ ನಿದೇರ್ಶಕಿ ಸುಲೋಚನ, ತಾ.ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಗ್ರಾ.ಪಂ. ಅಧ್ಯಕ್ಷೆ ಮಮತನಾರಾಯಣಸ್ವಾಮಿ, ಉಪಾಧ್ಯಕ್ಷ ವಿ.ನಾಗೇಶ್, ಮಾಸ್ತೇನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಉಪಾಧ್ಯಕ್ಷ ಎಲ್.ಆನಂದ್, ಕಾರ್ಯದರ್ಶಿ ಶಿವಣ್ಣ, ಖಾಜಾಂಚಿ ಎನ್.ವಿ.ವೇಣುಗೋಪಾಲ್, ನಿರ್ದೇಶಕ ರಘುನಾಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ರಾಧಕೃಷ್ಣ, ಟಿ.ಎಲ್.ದಿವಕಾರ್, ಶಾಲೆ ಮುಖ್ಯಶಿಕ್ಷಕ ಟಿ.ಎಲ್.ದಿವಕಾರ್, ಶಿಕ್ಷಕರಾದ ಲಕ್ಷ್ಮಿ, ಆಶಾ, ವೇಣುಗೋಪಾಲರೆಡ್ಡಿ, ಕಾಳಚಾರಿ ಇದ್ದರು.
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ರಜತ ಮಹೋತ್ಸವ ಸಭಾಂಗಣ ಉದ್ಘಾಟನೆ
ನಂದಳಿಕೆ: ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ರಜತ ಮಹೋತ್ಸವ ಸಭಾಂಗಣ ಉದ್ಘಾಟನೆ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ರಜತ ವರ್ಷದ ಸವಿ ನೆನಪಿಗಾಗಿ “ರಜತ ಮಹೋತ್ಸವ ಸಭಾಂಗಣ” ಉದ್ಘಾಟನೆಗೊಂಡಿತು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷರು ಹಾಗೂ ರಜತ ಮಹೋತ್ಸವ ಸಭಾಂಗಣ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ ಅವರು “ರಜತ ಮಹೋತ್ಸವ ಸಭಾಂಗಣ” ವನ್ನು ಉದ್ಘಾಟಿಸಿದರು.
ಸಮಾರಂಭದ ವೇದಿಕೆಯಲ್ಲಿ ಕಾರ್ಕಳ ಅಮ್ಮಾಸ್ ಸ್ಪೋಟ್ರ್ಸ್ & ಗಿಫ್ಟ್ ಸೆಂಟರ್ನ ಮಾಲಕರಾದ ಸುಧೀರ್ ಪೂಜಾರಿ, ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಕುಂಟಲಗುಂಡಿ ಸುನಿಲ್ ಪೂಜಾರಿ, ಗೀತಾ ಶೆಟ್ಟಿ ಕುಂಟಲಗುಂಡಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕಾಸರಬೈಲು ಸುರೇಶ್ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ನಿಕಟ ಪೂರ್ವಾಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಅಬ್ಬನಡ್ಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಮೊದಲಾದವರಿದ್ದರು.
ಎಂ ಐ ಟಿ ಕೆ ಯ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ / Farewell to MITK MBA Students
ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಅಂತಿಮ ಪದವಿ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಕುರಿತು ಶುಭ ಹಾರೈಸಿದರು. ಹಾಗೆಯೇ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಇವರು ಕಲಿತ ಕಾಲೇಜಿಗೆ ಹಾಗು ತಂದೆ ತಾಯಿಗೆ ಗೌರವ ತರುವಂತೆ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ವಿಭಿನ್ನವಾಗಿ ನೆನಪುಗಳನ್ನು ಮೆಲುಕು ಹಾಕುವ ಅಂತಿಮ ವರ್ಷದ ವಿದ್ಯಾರ್ಥಿಗಳ ಡಾಕ್ಯುಮೆಂಟರಿ ವಿಡಿಯೋ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ವಿಭಾಗ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ, ಪ್ಲೇಸ್ಮೆಂಟ್ ಡೀನ್ ಪ್ರೊ. ಅಮೃತಮಾಲ, ಪ್ರೊ. ತಿಲಕಲಕ್ಷ್ಮಿ, ಪ್ರೊ.ಕಾವ್ಯ,
ಪ್ರೊ. ಪೂರ್ಣಿಮಾ ಹಾಗೂ ಪ್ರೊ. ನೀಲ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಹರಾ, ಗಗನ್,ಲತಾ, ದೇವೇಂದ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಲೋಹಿತ್ ಹಾಗೂ ಪ್ರತೀಕ ಶೆಟ್ಟಿ ವಂದಿಸಿದರು.
Farewell to MITK MBA Students
Farewell function to bid farewell to the graduating MBA students of Moodlakatte Institute of Technology, Kundapura was organised by the first year students of the department.
On this occasion Principal of the College, Dr. Abdul Kareem addressed the students and wished them good luck in their all future endeavours. Brand Building Director, Dr. Ramakrishna Hegde advised the students to get success and bring laurels to the parents and almameter with their commitment and resilience. A documentary video of final year students reliving different memories was screened on the occasion.First year students dedicated a variety entertainment program to the outgoing seniors. Department Head, Dr. Suchita Pujari, Placement Dean, Prof. Amritmala, Prof. Tilakalakshmi, Prof. Kavya, Prof. Purnima and Prof. Neil were present in the program. Students Sahara, Gagan, Latha and Devendra did the Master of Ceremony and Lohith and Prateek Shetty
ಕರ್ನಾಟಕದ ಕಥೊಲಿಕ್ ಚಿಂತಕರ ಚಾವಡಿಗೆ ಹೊಸ ಸಮಿತಿಯನ್ನು ಆಯ್ಕೆ / New Leadership Elected at Karnataka Catholic Think Tank’s Strategic Meeting
ಕರ್ನಾಟಕದ ಕಥೊಲಿಕ್ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ವೃತ್ತಿಪರರನ್ನು ಒಳಗೊಂಡ ಚಿಂತಕರ ಚಾವಡಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
25.09.24 ರಂದು ಬೆಂಗಳೂರಿನ ಸುಬೋಧನಾ, ಕ್ರಾಸ್ ಕೇಂದ್ರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಜಾಕಬ್ ಕ್ರಾಸ್ಟಾ ಮತ್ತು ಎಂಟೋನಿ ಮೆಂಡೋನ್ಸಾ ಉಪಾಧ್ಯಕ್ಷರಾಗಿ, ಕ್ಲಾರಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಮತ್ತು ನಿರ್ಮಲ ಜತೆ ಕಾರ್ಯದರ್ಶಿಯಾಗಿ ನೇಮಕಗೊಂಡರು. ಈ ವೇಳೆ ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಮಚಾದೊ ಹಾಗೂ ಕರ್ನಾಟಕದ 15 ಧರ್ಮಾಧ್ಯಕ್ಷರು ಉಪಸ್ಥಿತರಿದ್ದರು.
ಕರ್ನಾಟಕ ಕ್ಯಾಥೋಲಿಕ್ ಚಿಂತಕರ ಚಾವಡಿಯು ಕಾನೂನು, ನಾಗರಿಕ ಸೇವೆಗಳು, ಶಿಕ್ಷಣ, ಮಾಧ್ಯಮ, ಮತ್ತು ಆರೋಗ್ಯ ಸೇವೆಗಳು ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳ ವೃತ್ತಿಪರರನ್ನು ಒಗ್ಗೂಡಿಸಿ, ಈ ಮೂಲಕ ಕರ್ನಾಟಕದ ಕ್ಯಾಥೊಲಿಕ್ ಧರ್ಮಸಭೆಗೆ ಅಗತ್ಯ ಪರಿಣತ ಬೆಂಬಲ ಹಾಗೂ ತಾಂತ್ರಿಕ ಸಲಹೆ ನೀಡುತ್ತದೆ.
New Leadership Elected at Karnataka Catholic Think Tank’s Strategic Meeting
Bengaluru, 25 September 2024:The Karnataka Catholic Think Tank, a collective of professionals from various sectors, held elections during its annual meeting at Subodhana, KROSS, Bangalore, aimed at strengthening its role in addressing societal challenges in the Karnataka. Mr. Roy Castelino was unanimously elected as the President of the think tank, with Mr. Jacob Crasta and Mr. Antony Mendonsa chosen as Vice Presidents. Mrs. Clara Fernandes, serving as the Regional Secretary for Laity, will also assume the role of Secretary, while Mrs. Nirmala was appointed Joint Secretary.
The Karnataka Catholic Think Tank brings together professionals from diverse fields such as law, civil services, education, media, and healthcare to provide expert counsel and support to the Church in Karnataka.
ಶ್ರೀನಿವಾಸಪುರ : ಪಟ್ಟಣದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು-ಪುರಸಭಾಧ್ಯಕ್ಷ ಬಿ.ಎಸ್.ಭಾಸ್ಕರ್
ಶ್ರೀನಿವಾಸಪುರ : ಪಟ್ಟಣದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮನೆ ನಿರ್ಮಾಣಕ್ಕೆ ಅಗತ್ಯವಾದ ಜಮೀನು ಗುರುತಿಸಲಾಗಿದ್ದು, ಆದಷ್ಟು ಬೇಗ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪುರಸಭಾಧ್ಯಕ್ಷ ಬಿ.ಎಸ್.ಭಾಸ್ಕರ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುವ ಪೌರಕಾರ್ಮಿಕರು ನಿಜವಾಗಿಯೂ ಪಟ್ಟಣದ ಪ್ರಥಮ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು.
ಪೌರಕಾರ್ಮಿಕರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಗುವುದು. ಅವರಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಲಾಗುವುದು. ಏನಾದರೂ ಸಮಸ್ಯೆ ಎದುರಾದಲ್ಲಿ ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ನನಗೆ ತಿಳಿಸಿ, ಸಾಧ್ಯವಾದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದು.
ಪಟ್ಟಣವನ್ನು ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸಲು ಕೈಗೊಂಡ ಕ್ರಮ ಫಲ ನೀಡಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆಯಲ್ಲಿ ಶೇ.೭೫ ರಷ್ಟು ಇಳಿಕೆಯಾಗಿದೆ. ನಾಗರಿಕರು ಹಾಗೂ ಪತ್ರಕರ್ತರು ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕರಿಸಬೇಕು. ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತಿತರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಪುರಸಭೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪೌರಕಾರ್ಮಿಕರು ಹಾಗೂ ಕಚೇರಿ ಸಿಬ್ಬಂದಿಯನ್ನು ಸನ್ಮಾನಿಸಿ ನೆನಪಿನ ಕಾಣಿಕೆ ಹಾಗೂ ಉಡುಗೊರೆ ನೀಡಲಾಯಿತು. ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಪೌರಕಾರ್ಮಿಕರಿಗೆ ಪಾರಿತೋಷಕ ಹಾಗೂ ಬಹುಮಾನ ವಿತರಿಸಲಾಯಿತು.
ಪೌರಕಾರ್ಮಿಕರ ಕಲಾ ಮಂಡಳಿ ಕಲಾವಿದರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪುರಸಭೆಯ ಉಪಾಧ್ಯಕ್ಷೆ ಕೆ.ಎಸ್.ಸುನಿತಾ, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಹಿರಿಯ ಆರೋಗ್ಯಾಧಿಕಾರಿ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ನಾಗೇಶ್, ಸಂತೋಷ್, ಸುರೇಶ್, ಶಿವಪ್ರಸಾದ್, ಗೌತಮ್, ಚೆಂದು, ಮಂಜುನಾಥ್, ವೆಂಕಟೇಶಯ್ಯ, ಶಾರದ, ಭಾಗ್ಯಮ್ಮ, ಬೈರೆಡ್ಡಿ, ಸೀತಾರಾಮರೆಡ್ಡಿ, ವೇದಾಂತ್ ಶಾಸ್ತಿ ಮತ್ತು ಸದಸ್ಯರಿದ್ದರು.
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ ಮಿಲಾಗ್ರೆಸ್ ಮೀಡಿಯಾ ಕ್ಲಬ್ & IQAC ಮಾಧ್ಯಮ ತರಬೇತಿ ಕಾರ್ಯಾಗಾರ / Milagres College, Kallianpur nMilagres Media Club & IQAC Media Training Workshop
ಉಡುಪಿ, ಸೆಪ್ಟೆಂಬರ್ 23, 2024: ವ್ಯಕ್ತಿಗಳ ಮೇಲೆ ಮಾರುಕಟ್ಟೆಯ ಪ್ರಭಾವವು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಮೇಲೆ ಅವಲಂಬಿತವಾಗಿದೆ ಎಂದು ಸ್ವತಂತ್ರ ಕಾರ್ಪೊರೇಟ್ ವಿಷಯ ರಚನೆಕಾರ, ಮಾಧ್ಯಮ ತಜ್ಞ ಮತ್ತು ತರಬೇತುದಾರ ಶ್ರೀ ರಾನ್ಸನ್ ಲೂಯಿಸ್ ಹೇಳಿದರು. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾಧ್ಯಮ ತಂಡವನ್ನುದ್ದೇಶಿಸಿ ಅವರು ಮಾತನಾಡಿದರು. ಜನಮನದಲ್ಲಿರುವುದು ಮತ್ತು ಜನಪ್ರಿಯತೆ ಈ ದಿನಗಳಲ್ಲಿ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವ ಅವರು ಸಂವಹನ ಕೌಶಲ್ಯ ಮತ್ತು ಮಾಧ್ಯಮ ಸಂಬಂಧಿತ ಅಂಶಗಳಲ್ಲಿ ವಿದ್ಯಾರ್ಥಿಗಳ ಉಪಕ್ರಮವನ್ನು ಶ್ಲಾಘಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ನವೀಕರಣಗೊಳ್ಳುವುದು ಇಂದಿನ ಅಗತ್ಯ ಎಂದು ಒತ್ತಿ ಹೇಳಿದರು.
ಉಪಪ್ರಾಂಶುಪಾಲರಾದ ಪ್ರೊ.ಸೋಫಿಯಾ ಡಯಾಸ್, ವಾಣಿಜ್ಯ ವಿಭಾಗದ ಎಚ್ಒಡಿ ಶ್ರೀಮತಿ ಶಾಲೆಟ್ ಮಥಿಯಾಸ್ ಮತ್ತು ಐಕ್ಯೂಎಸಿ ಸಂಯೋಜಕಿ, ಇಂಗ್ಲಿಷ್ ವಿಭಾಗದ ಪ್ರತಿಮಾ ಮತ್ತು ಮಿಲಾಗ್ರೆಸ್ ಮೀಡಿಯಾ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.
ಮಿಲಾಗ್ರೆಸ್ ಮೀಡಿಯಾ ಕ್ಲಬ್ ಕಾಲೇಜು ವಿದ್ಯಾರ್ಥಿಗಳು ತಮಗೆ ಮತ್ತು ಕಾಲೇಜಿಗೆ ಸಹಾಯ ಮಾಡಲು ಮಾಧ್ಯಮ ಸಂಬಂಧಿತ ಅಂಶಗಳಲ್ಲಿ ತರಬೇತಿ ಪಡೆಯಲು ಒಂದು ಉಪಕ್ರಮವಾಗಿದೆ.
ಆರಂಭದಲ್ಲಿ ಶ್ರೀಮತಿ ವೈಷ್ಣವಿ ಮತ್ತು ತಂಡದವರು ಪ್ರಾರ್ಥನಾ ಗೀತೆ ಪ್ರಸ್ತುತಪಡಿಸಿದರು. III BCA ಯ ಶ್ರೀ ಉಮ್ಮರ್ ಫಾರೂಕ್ ಸಭೆಯನ್ನು ಸ್ವಾಗತಿಸಿದರು ಮತ್ತು ಅಂತಿಮ BCA ಯ ಶ್ರೀ ವಿನ್ಸ್ಟನ್ ಲೂಯಿಸ್ ಧನ್ಯವಾದವನ್ನು ನೀಡಿದರು. .
Milagres College, Kallianpur nMilagres Media Club & IQAC Media Training Workshop
Udupi, September 23, 2024: Influence of the market on individuals is largely dependent on the social media said Mr Ronson Lewis, a freelance corporate content creator, media expert and trainer. He was addressing the media team of the college in a workshop organised for the students. Being in the limelight and popularity is a requirement these days he added.
Dr Vincent Alva the Principal appreciated the initiative of the students in communication skills and media related aspects. Getting updated constantly in the field of media is the need of the day he stressed.
Prof. Sophia Dias, Vice Principal, Mrs Shalet Mathias, HOD of commerce department and IQAC coordinator, Ms Pratima from the English department and memebers of the Milagres Media Club were present.
Milagres Media Club is an initiative of the college students to get trained in media related aspects to help themselves and the college.
In the beginning Ms Vaishnavi and team presented a prayer song. Mr Ummar Farooq from III BCA welcomed the gathering and Mr Winston Lewis from the final BCA delivered a vote of thanks.
ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ NSS ಘಟಕದಿಂದ ಐತಿಹಾಸಿಕ ಕವಲೇದುರ್ಗ ಕೋಟೆಗೆ ಟ್ರೆಕ್ಕಿಂಗ್ ದಂಡಯಾತ್ರೆ /Trekking expedition to historic Kavaledurga Fort from NSS unit of Milagres College, Kalyanpur
ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ NSS ಘಟಕವು ಸೆಪ್ಟೆಂಬರ್ 22, 2024 ರಂದು ಐತಿಹಾಸಿಕ ಕವಲೇದುರ್ಗ ಕೋಟೆಗೆ ತನ್ನ ವಾರ್ಷಿಕ ಟ್ರೆಕ್ಕಿಂಗ್ ದಂಡಯಾತ್ರೆಯನ್ನು ಆಯೋಜಿಸಿದೆ. ಒಟ್ಟು 63 ಉತ್ಸಾಹಿ ಸ್ವಯಂಸೇವಕರು, ಇಬ್ಬರು ಅಧ್ಯಾಪಕರೊಂದಿಗೆ, ಶ್ರೀ ಗಣೇಶ್ ನಾಯಕ್ ಮತ್ತು ನೇತೃತ್ವದಲ್ಲಿ ಈ ಸಾಹಸವನ್ನು ಕೈಗೊಂಡರು. ಶ್ರೀಮತಿ ಶುಭಲತಾ, ಎನ್ ಎಸ್ ಎಸ್ ಅಧಿಕಾರಿಗಳು.
ವಿಶೇಷವೆಂದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಅವರು ಚಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ವಿದ್ಯಾರ್ಥಿಗಳಲ್ಲಿ ಸಾಂಘಿಕ ಮತ್ತು ಸೌಹಾರ್ದತೆಯ ಮನೋಭಾವವನ್ನು ಬೆಳೆಸುವ ಬದ್ಧತೆಯನ್ನು ಪ್ರದರ್ಶಿಸಿದರು. ಈ ಚಾರಣವು ಕವಲೇದುರ್ಗ ಕೋಟೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸುವಾಗ ಸ್ವಯಂಸೇವಕರಿಗೆ ತಮ್ಮ ದೈಹಿಕ ಸಹಿಷ್ಣುತೆ, ತಂಡದ ಕೆಲಸ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸಿತು.
ಪಾದಯಾತ್ರೆಯ ನಂತರ, ತಂಡವು ಪೂಜ್ಯ ರಾಷ್ಟ್ರಕವಿ ಕುವೆಂಪು ಮನೆಗೆ ಭೇಟಿ ನೀಡಿ, ಕನ್ನಡದ ಖ್ಯಾತ ಕವಿ ಮತ್ತು ಬರಹಗಾರರಿಗೆ ಗೌರವ ಸಲ್ಲಿಸಿತು. ಈ ಭೇಟಿಯು ಭಾಗವಹಿಸುವವರಲ್ಲಿ ಸಾಂಸ್ಕೃತಿಕ ಮೆಚ್ಚುಗೆ ಮತ್ತು ಸಾಹಿತ್ಯದ ಅರಿವಿನ ಭಾವವನ್ನು ಮೂಡಿಸುವ ಗುರಿಯನ್ನು ಹೊಂದಿದೆ
Trekking expedition to historic Kavaledurga Fort from NSS unit of Milagres College, Kalyanpur
The NSS unit of Milagres College, Kallianpur, organized its annual trekking expedition to the historic Kavaledurga Fort on September 22, 2024. A total of 63 enthusiastic volunteers, accompanied by two faculty members, embarked on this adventure, led by Mr. Ganesh Nayak and Mrs. Shubhalatha, NSS officers.
Notably, Dr. Vincent Alva, Principal of the college, actively participated in the trek, demonstrating his commitment to fostering a spirit of teamwork and camaraderie among students. The trek provided an opportunity for the volunteers to develop their physical endurance, teamwork, and leadership skills while exploring the rich cultural heritage and natural beauty of Kavaledurga Fort.
Following the trek, the team visited the revered Rashtrakavi Kuvempu House, paying tribute to the renowned Kannada poet and writer. This visit aimed to instill a sense of cultural appreciation and literary awareness among the participants.
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗರಿಗೆ ಸನ್ಮಾನ
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಇವರಿಗೆ ಸನ್ಮಾನ ಕಾರ್ಯಕ್ರಮ ನೆಡೆಯಿತು.
“ಎಂಜಿನಿಯರಿಂಗ್, ಮೆಡಿಕಲ್ ಅಥವಾ ಇನ್ಯಾವುದೇ ವಾಣಿಜ್ಯ, ತಾಂತ್ರಿಕ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರೂ ಕೂಡ ಸೈನ್ಯವನ್ನು ಸೇರಿ ಸೇವೆ ಸಲ್ಲಿಸಬಹುದು. ಆಗ ಅದು ಶ್ರೇಷ್ಠವಾದ ದೇಶಸೇವೆಯಾಗುವುದೇ ಹೊರತು ವ್ಯಕ್ತಿಗತವಾದ ಹುದ್ದೆಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ನನ್ನ ಏಳಿಗೆಗೆ ಕಾರಣವಾದ ಆರ್.ಎನ್.ಎಸ್ ಪಿ.ಯು.ಕಾಲೇಜಿಗೆ ಕೃತಜ್ಞನಾಗಿದ್ದೇನೆ ” ಎಂದು ಭಾರತೀಯ ಭೂಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಾತಿ ಹೊಂದಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಭರತ್ ಬಾಬು ದೇವಾಡಿಗ ರವರು ಕಾಲೇಜಿನ ವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು, ಅತ್ಯಂತ ಕಠಿಣವಾದ ಭಾರತೀಯ ಸೇನಾ ಹುದ್ದೆಯಲ್ಲಿ ಭರತ್ ಬಾಬುರವರು ತಮ್ಮ ಪರಿಶ್ರಮ ಮತ್ತು ದಕ್ಷತೆಯಿಂದ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ದೀಪ್ತಿ ಕೆ ಇವರು ಅತಿಥಿಗಳನ್ನು ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಯವರು ಅತಿಥಿ ಪರಿಚಯ ನೀಡಿದರು. ಕಾಲೇಜಿನ ಉಪನ್ಯಾಸಕಿಯರು ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ರವರಿಗೆ ಆರತಿ ಬೆಳಗಿ ಶುಭ ಹಾರೈಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ರವರು ಧನ್ಯವಾದ ಸಲ್ಲಿಸಿದರು. ಇಂಗ್ಲೀಷ್ ವಿಬಾಗದ ಮುಖ್ಯಸ್ಥೆ ವನಿತಾ. ಜೆ. ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು.