HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತ್ ಜೋಡೋ ಮಾಡೋ ಮೊದಲು ಕೋಲಾರದಲ್ಲಿ
ಕಾಂಗ್ರೆಸ್ ಜೋಡೋ ಮಾಡಲಿ-ಡಾ.ವೈಎಎನ್ ವ್ಯಂಗ್ಯ

ಕೋಲಾರ:- ಭಾರತ್ ಜೋಡೋ ಬದಲಿಗೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಜೋಡೋ ಮೊದಲು ಮಾಡಬೇಕಾಗಿತ್ತು ಎಂದು ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಲೇವಡಿ ಮಾಡಿದರು.
ಅವರೇ ಹೇಳಿಕೊಂಡಿರುವಂತೆ 4 ತಲೆಮಾರುಗಳಿಗೆ ದುಡ್ಡು ಮಾಡಿಕೊಂಡಿರುವ ಮಹಾ ಜ್ಞಾನಿಗಳು ಕೋಲಾರ ಜಿಲ್ಲೆಯ ಕಾಂಗ್ರೆಸ್‍ನಲ್ಲಿದ್ದಾರೆ ಅವರು ಮೊದಲು ಅವರ ಪಕ್ಷ ಸರಿಪಡಿಸಿಕೊಂಡರೆ ಭಾರತ್ ಜೋಡೋ ಆಮೇಲೆ ಎಂದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಭಿನ್ನಮತದಿಂದ ನಗೆಪಾಟಲಿಗೀಡಾಗಿದೆ ಇದನ್ನು ಸರಿಪಡಿಸದೇ ಇವರು ಮಾಡೋ ಭಾರತ್ ಜೋಡೋ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಡಿಕೆಶಿ-ಸಿದ್ದರಾಮಯ್ಯರನ್ನು ಜೋಡೋ ಮಾಡುವ ಕೆಲಸ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರದವರೆಗೆ ಜೋಡೋ ಯಾತ್ರೆ ಆಯೋಜಿಸಿದ್ದಾರೆ. ಅದರೆ ರಾಜ್ಯದ ಪ್ರವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಒಟ್ಟಾಗಿ ಜೋಡಿಯಾಗಿ ಎಲ್ಲೂ ಕಾಣಿಸಲೇ ಇಲ್ಲಾ. ಇವರಿಬ್ಬರ ಮಧ್ಯೇ ರಾಹುಲ್ ಗಾಂಧಿ ಇರುತ್ತಿದ್ದರು ಎಂದರು.


ಸಂಸ್ಕಾರವಿಲ್ಲದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವ ಇದೆ ಅದರೆ ಅವರಿಗೆ ಇತ್ತೀಚೆಗೆ ಏಕವಚನ ಮತ್ತು ಬಹುವಚನದ ಬಗ್ಗೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ, ಸಂಸ್ಕಾರ ಮೊದಲು ಕಲಿಯಬೇಕು, ಅವರು ಮೈಸೂರಿನ ಕಡೆಯವರಾಗಿದ್ದು ಸ್ವಚ್ಚವಾದ ಕನ್ನಡದ ಪಂಡಿತ್ಯ ಹೊಂದಿದವರೆಂದು ನಾವು ಭಾವಿಸಿದ್ದನ್ನು ಸುಳ್ಳು ಮಾಡಿದ್ದಾರೆ ಎಂದು ವ್ಯಂಗವಾಡಿದರು.
ಪ್ರಶ್ನೆಯೊಂದಕ್ಕೆ ಬಿಜೆಪಿ ಪಕ್ಷದಲ್ಲಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಚುನಾವಣಾ ಆಕಾಂಕ್ಷಿಗಳ ನಡುವೇ ಪೈಪೋಟಿ ಇದೆ ನಿಜ. ಅದರೆ ಅದನ್ನು ಭಿನ್ನಾಭಿಪ್ರಾಯ ಎನ್ನಲಾಗದು, ಬಿ.ಜೆ.ಪಿ. ಪಕ್ಷವು ರಾಜ್ಯದಲ್ಲಿ ಬಲಾಢ್ಯವಾಗಿದೆ. ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರು ಸಭೆಯೊಂದರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗ ಬೇಕೆಂಬ ಆಸೆ ಪಡುವುದರಲ್ಲಿ ನಾನು ಮೊದಲಿಗನಾಗಿದ್ದೆನೆ ಎಂದು ಹೇಳಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಬಂದಿರುವ ಸುದ್ದಿ ಸುಳ್ಳು ಎಂದು ಈಗಾಗಲೇ ಅವರೇ ಸ್ಪಷ್ಟನೆ ನೀಡಿದ್ದಾರೆ, ಅವರು ಎಂದಿಗೂ ಬಿಜೆಪಿಯಿಂದ ದೂರವಾಗುವುದಿಲ್ಲ ಎಂದರು.

ನ.11 ರಂದು ಪ್ರಧಾನಿಗಳಿಂದ ನಾಡಪ್ರಭುವಿನ 108 ಅಡಿ ಪುತ್ಥಳಿ ಲೋಕಾರ್ಪಣೆ ಹಿನ್ನಲೆ – ಕೋಲಾರದಲ್ಲಿ ಅ.27 ಕೆಂಪೇಗೌಡರ ರಥಯಾತ್ರೆಗೆ ಚಾಲನೆ- ಡಾ.ವೈ.ಎ. ನಾರಾಯಣಸ್ವಾಮಿ

ಕೋಲಾರ:- ಪ್ರಧಾನಿ ನರೇಂದ್ರ ಮೋದಿಯವರಿಂದ ನ.11 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಹಿನ್ನಲೆಯಲ್ಲಿ ಕೈಗೊಂಡಿರುವ ಕೆಂಪೇಗೌಡ ಪ್ರಗತಿಯ ರಥಯಾತ್ರೆಗೆ ಅ.27 ರಂದು ಬೆಳಗ್ಗೆ 10-30 ಗಂಟೆಗೆ ನಗರದ ಟೇಕಲ್ ರಸ್ತೆಯ ಬ್ರಿಡ್ಜ್ ಸಮೀಪ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಈ ಸಂಬಂಧ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿ ನಡೆಸಿದ ಅವರು, ನ.11 ರಂದು ಪ್ರಧಾನಿ ನರೇಂದ್ರಮೋದಿಯವರು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಹಾಗೂ ಕೆಂಪೇಗೌಡರ 108 ಅಡಿಗಳ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಿರುವ ಹಿನ್ನಲೆಯಲ್ಲಿ ಕೆಂಪೇಗೌಡರ ವಿಚಾರಧಾರೆಗಳನ್ನು ಪಸರಿಸಲು ಈ ರಥಯಾತ್ರೆಯನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಜಿಲ್ಲೆಯ ಪವಿತ್ರ ಕ್ಷೇತ್ರಗಳ ಮೃತ್ತಿಕೆ ಸಂಗ್ರಹಿಸಲಾಗುವುದು ಎಂದರು.
ಬಿಜೆಪಿ ಸರ್ಕಾರದ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ಕೆಂಪೇಗೌಡರ ಅಭಿವೃದ್ದಿ ಪ್ರಾಧಿಕಾರಕ್ಕೆ 100 ಕೋಟಿ ಮಂಜೂರಾತಿ ಆಗಿದ್ದು. ಇದರಲ್ಲಿ 64 ಕೋಟಿರೂ ವೆಚ್ಚದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿಯನ್ನು 100 ಟನ್ ಕಂಚು ಹಾಗೂ 120 ಟನ್ ಸ್ಟಿಲ್ ಬಳಸಿ ನಿರ್ಮಿಸಿದ್ದು, ಗುಜರಾತ್‍ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿ ನಿರ್ಮಿಸಿದ ಶಿಲ್ಪಿ ರಾಮ್‍ಸುತಾರ್ ಇದನ್ನು ನಿರ್ಮಿಸಿದ್ದು, ಅದ್ಬುತವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
545 ವರ್ಷಗಳ ಹಿಂದೆ ಅಭೂತಪೂರ್ವ ಕಲ್ಪನೆಯೊಂದಿಗೆ ಬೆಂಗಳೂರು ನಗರ ಕಟ್ಟಿದ, ಸುಮಾರು 40 ಸಮುದಾಯಗಳಿಗೆ ಒಂದೊಂದು ಪೇಟೆ ನಿರ್ಮಿಸಿ ಸಮಾನತೆ ಮೆರೆದ ಕೆಂಪೇಗೌಡರ ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಮತ್ತು ಮುಂದಿನ ಪೀಳಿಗೆಯೂ ಮರೆಯದಂತೆ ಮಾಡಲು ಪ್ರತಿಮೆ ಇರುವ 23 ಎಕರೆ ಜಾಗದಲ್ಲಿ 25 ಕೋಟಿ ರೂ ವೆಚ್ಚದಿಂದ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಒಟ್ಟಾರೆ ರಾಜ್ಯದ ಬಿಜೆಪಿ ಸರ್ಕಾರ ಇದಕ್ಕಾಗಿ 110 ಕೋಟಿ ರೂ ಖರ್ಚು ಮಾಡಿದೆ ಎಂದು ತಿಳಿಸಿದರು.
12ನೇ ಶತಮಾನದ ಶ್ರೀ ಬಸವೇಶ್ವರ ಅವರ ಅನುಭವ ಮಂಟಪ, ಸಮಾನತೆ ಮಾರ್ಗದರ್ಶನಗಳನ್ನು ಅನುಸರಿಸಿರುವ ಕೆಂಪೇಗೌಡರು ವಿಜಯನಗರದ ಮಹಾರಾಜರಾಗಿದ್ದ ಶ್ರೀಕೃಷ್ಣದೇವಾರಾಯ ಆಡಳಿತ ಸಂಸ್ಥಾನಕ್ಕೆ ಸೇರಿದವರಾಗಿದ್ದು ಅವರ ಮಾರ್ಗದರ್ಶನದಲ್ಲಿ ಆಡಳಿತವನ್ನು ನಡೆಸುವ ಮೂಲಕ ಸಮಾಜಸುಧಾರಣೆಗೆ ಸಾಕ್ಷಿಯಾಗಿ ಅವರ ದೂರದೃಷ್ಟಿಯಿಂದಾಗಿ ಇಂದು ಬೆಂಗಳೂರು ಐಟಿ, ಬಿಟಿ ತಂತ್ರಜ್ಞಾನದೊಂದಿಗೆ ವಿಶ್ವದ 5ನೇ ಮಹಾನಗರವಾಗಿದೆ ಎಂದರು.


ರಾಜ್ಯಾದ್ಯಂತ ರಥಯಾತ್ರೆ ಸಂಚಾರ


ರಾಜ್ಯದ 20 ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಂಡಿದ್ದು, ದೇವಾಲಯ,ಕಲ್ಯಾಣಿಗಳು,ಆದರ್ಶ ವ್ಯಕ್ತಿಗಳು ಇರುವಂತ ಪ್ರದೇಶಗಳಿಂದ ಮೃತ್ತಿಕೆಗಳನ್ನು ಸಂಗ್ರಹಿಸಲಾಗುವುದು ಎಂದ ಅವರು ಈ ರಥಯಾತ್ರೆಗೆ ವಿಧಾನಸೌಧದ ಮುಂಭಾಗ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಅ.27 ರಂದು ಕಂದಾಯ ಸಚಿವ ಅಶೋಕ್ ಅವರು ಚಾಲನೆ ನೀಡಲಿದ್ದಾರೆ ಎಂದರು.
ರಥಯಾತ್ರೆ ಅ.27 ರಿಂದ ನ.8 ರವರೆಗೂ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಸಂಚರಿಸಲಿದ್ದು, ಗ್ರಾಮ ಪಂಚಾಯಿತಿ ಕೇಂದ್ರಗಳಿಗೂ ಭೇಟಿ ನೀಡಿ ಕೆಂಪೇಗೌಡರ ಆದರ್ಶವನ್ನು ಪ್ರಚಾರಪಡಿಸಲಿದೆ ಮತ್ತು ಇದು ಸರ್ಕಾರದ ಕಾರ್ಯಕ್ರಮವಾಗಿದ್ದು,ಎಲ್ಲಾ ಜಾತಿ,ಧರ್ಮ,ಪಕ್ಷಬೇಧ ಮರೆತು, ಎಲ್ಲಾ ಸಂಘ ಸಂಸ್ಥೆಗಳೂ ಭಾಗವಹಿಸುವಂತೆ ಕೋರಿದರು.
ರಥಯಾತ್ರೆ ಯಶಸ್ವಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಸಂಚಾಲಕರನ್ನು ನೇಮಿಸಿದ್ದು, ಕೋಲಾರ ತಾಲ್ಲೂಕಿನಲ್ಲಿ ಸರ್ಕಾರಿ ಅಭಿಯೋಜಕ ಮಾಗೇರಿ ನಾರಾಯಣಸ್ವಾಮಿ ಮತ್ತು ಬೆಗ್ಲಿ ಪ್ರಕಾಶ್,ಶ್ರೀನಿವಾಸಪುರತಾಲ್ಲೂಕಿಗೆ ಚಂದ್ರಶೇಖರ್ ನಾಗದೇನಹಳ್ಳಿ, ಮಾಲೂರಿಗೆ ಪ್ರಭಾಕರ್, ವೆಂಕಟೇಶಗೌಡ, ಹರೀಶ್‍ಗೌಡರನ್ನು, ಬಂಗಾರಪೇಟೆ ತಾಲ್ಲೂಕಿಗೆ ಹನುಮಯ್ಯ, ಕೆ.ಚಂದ್ರಾರೆಡ್ಡಿ, ಶ್ರೀನಿವಾಸಗೌಡರನ್ನು, ಮುಳಬಾಗಿಲು ತಾಲ್ಲೂಕಿಗೆ ವೆಂಕಟರಮಣ ಹಾಗೂ ನಾಗಾರ್ಜುನ್ ಹಾಗೂ ಕೆಜಿಎಫ್ ತಾಲ್ಲೂಕಿಗೆ ವೆಂಕಟಪತಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದರು.
ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ಜಿಲ್ಲಾಡಳಿತ ಸಹಕಾರದಿಂದ ಎಲ್ಲಾ ಗ್ರಾಮಪಂಚಾಯಿತಿಗೆ ಭೇಟಿ ನೀಡಲಾಗುವುದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು,ಮಾಜಿ ಶಾಸಕರು. ವಿವಿಧ ಪಕ್ಷಗಳ ಮುಖಂಡರುಗಳು ಸಾಮೂಹಿಕವಾಗಿ ಭಾಗವಹಿಸುವ ಮೂಲಕ ಸಾಮರಸ್ಯಕ್ಕೆ ನಾಂದಿಯಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರಥಯಾತ್ರೆ ಜಿಲ್ಲಾ ಸಹಸಂಚಾಲಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಮಾಜಿ ಅಧ್ಯಕ್ಷ ಕೃಷ್ಣರೆಡ್ಡಿ, ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿಚಲಪತಿ, ಜಿಲ್ಲಾ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜ್ಯಕಾರ್ಯದರ್ಶಿ ಕೃಷ್ಣಮೂರ್ತಿ,ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್ ಸಿಂಗ್, ಸತ್ಯನಾರಾಯಣರಾವ್, ಮಂಜುನಾಥ್, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

ಆದಿತ್ಯವಾರ – ಫಿಟ್ ಇಂಡಿಯಾ ರನ್ (1 km) ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ

ದಿನಾಂಕ 30-10-2022, ಆದಿತ್ಯವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ, ಮಂಗಳೂರಿನ ಯಾನೆಪೋಯ ವಿಶ್ವವಿದ್ಯಾನಿಲಯದ ಏನ್ ಏಸ್ ಎಸ್ ಘಟಕ, ಭoಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ ಹಾಗೂ ನಾವುoದ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ರನ್ (1 km) ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುoದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಲಿದೆ. ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ

“ಗೌರವದಿಂದ ಬೆಳಕಿನಡೆ ನಡೆಯಬೇಕು, ಸಹಿಷ್ಣತೆಯಿಂದಲ್ಲ”- ದೀಪಾವಳಿ ಸಂಭ್ರಮದಲ್ಲಿ : ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ

Report: Fr Anil Fernandes, CCC Pics by Stanly Bantwal, Editor:Bernarad Dcosta

ಅ.24: “ಅಂತರ್ಧರ್ಮ ಹಿನ್ನೆಲೆಯಲ್ಲಿ ಬದುಕುವ ಸಾಮರ್ಥ್ಯ. ಒಗ್ಗಟ್ಟು, ಏಕತೆ ಮತ್ತು ಸೌಹಾರ್ದತೆಯನ್ನು ತರುವ ಪ್ರಯತ್ನ ನಡೆಯಬೇಕು. ವೈವಿಧ್ಯತೆಗಳು ಮತ್ತು ಗೌರವ, ಪ್ರೀತಿ ಮತ್ತು ವಿಶ್ವಾಸದ ಮನೋಭಾವದಲ್ಲಿ ವ್ಯತ್ಯಾಸಗಳು ಇಂದು ಹೆಚ್ಚು ಅಗತ್ಯವಿದೆ. ಆದರೆ ಇಂದು ನಾವು ಒಬ್ಬರನ್ನೊಬ್ಬರು ಸಹಿಸುವುದಿಲ್ಲ. ನಾವು ಪರಸ್ಪರ ಗೌರವಿಸಬೇಕು. ಗೌರವ, ಸಹಿಷ್ಣುತೆಗಿಂತ ಮುಖ್ಯವಾದುದು. ದೀಪಾವಳಿಯ ಆಚರಣೆಯು ಪ್ರತಿಯೊಬ್ಬರಿಗೂ ಅವಕಾಶ ಸೃಷ್ಟಿಸುತ್ತದೆ. ನಾವು ಇತರರ ಬಗ್ಗೆ ಗೌರವದಿಂದ ಇರಬೇಕೆಂದು ಕರೆ ನೀಡುತ್ತದೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಸಂದೇಶ ನೀಡಿದರು.

     ಅವರು ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು, ಸಂದೇಶ ಕಲಾಕೇಂದ್ರದಲ್ಲಿ ಸೋಮವಾರ, ಅಕ್ಟೋಬರ್ 24, 2022 ರಂದು ಆಯೋಜಿಸಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ  ಉದ್ಘಾಟನಾ ಸಂದೇಶದಲ್ಲಿ ಹೇಳಿದರು. ಸಂಜೆ ಹೊತ್ತು ನಡೆದ ಕಾರ್ಯಕ್ರಮದಲ್ಲಿ ಅವರು “ನಾವು ಸುತ್ತಮುತ್ತಲಿನ ಎಲ್ಲ ಜನರನ್ನು ನಮ್ಮ ಸಹೋದರ ಸಹೋದರಿಯರೆಂದು ಗುರುತಿಸಿ  ಗೌರವದಿಂದ ಕಂಡಾಗ ನಾವು ಪ್ರಪಂಚದ ನಿಜವಾದ ಬೆಳಕಾಗುತ್ತೇವೆ. ನಾವು ಒಂದು ಕುಟುಂಬಕ್ಕೆ ಸೇರಿದವರು. ಅವನು/ಅವಳು ಅಥವಾ ಅವರು ಯಾರು ಎಂದು ಪ್ರಶ್ನಿಸುವ ಬದಲು, ನಾವು ಅವಳು/ಅವನು ಅವರು ನಮ್ಮವರು, ಅವರು ನಮ್ಮ ಕುಟುಂಬ, ನಮ್ಮ ಸಂಬಂಧಿಕರು, ನಮ್ಮ ಸ್ನೇಹಿತರು ಎಂದು ಉತ್ತರಿಸುವಂತಿರಬೇಕು. “ನಾವು” ಎಂಬ ಸಂಸ್ಕೃತಿ ಅಳವಡಿಸಿಕೊಂಡರೆ, ನಮ್ಮ ದೀಪಾವಳಿ ಆಚರಣೆ ನಿಜವಾದ ಆಚರಣೆಯಾಗುತ್ತದೆ ಮತ್ತು ಅರ್ಥಪೂರ್ಣವಾಗಿಸುತ್ತದೆ.” “ಬೆಳಕಿನ ಹಾದಿಯಲ್ಲಿ ನಡೆಯುವ ಜನರ ಜೀವನ ಕಲೆ ನಮ್ಮದಾಗಬೇಕು. ಬೆಳಕಿನಲ್ಲಿ

 “ಬೆಳಕಿನಲ್ಲಿ ನಡೆಯುವ ಜನರ ಜೀವನ ಕಲೆ,  ಕತ್ತಲಲ್ಲಿ ನಡೆಯುವ ಜೀವನ ಕಲೆಕಿಂತ ಮೀರಿಸುತ್ತದೆ, ಅದು ನಮ್ಮ ಸಂಸ್ಕೃತಿ, ಧರ್ಮದ ಶ್ರೇಷ್ಠತೆಯನ್ನು ತೋರಿಸುತ್ತದೆ. ಹಾಗೂ ಇತರರೊಂದಿಗೆ,  ಭಾವೈಕತೆ, ಒಗ್ಗಟ್ಟು, ಶಾಂತಿಯುತ ಮತ್ತು ಸಾಮರಸ್ಯದ ಜೀವನಕ್ಕೆ ಹಾಗೂ ಮತ್ತು ಮಾನವೀಯತೆಗೆ ಸಹಾಯ ಮಾಡುವುದು” ” ಎಂದು ಬಿಷಪ್ ಪೀಟರ್ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ಅಂತರ್ಗತವಾಗಿ ದೇವರ ಬೆಳಕಿನ ಕಿರಣವನ್ನು ಹೊಂದಿದ್ದು ಅದು ದೇವರ ಬೆಳಕಿನಲ್ಲಿ ನಡೆಯಲು ಕೊಡುಗೆ ನೀಡುತ್ತದೆ. ಜನರ ಸಾಮಾನ್ಯ ಒಳಿತಿಗಾಗಿ ನಾವು ಇತರರನ್ನು ಆತ್ಮವಿಶ್ವಾಸದಿಂದ ಪ್ರೀತಿಸಿದಾಗ ಅದು ಬೆಳಕಿನಂತೆ ಪ್ರಜ್ವಲಿಸುತ್ತದೆ, ಇತರ ಧರ್ಮಗಳ ಮೇಲಿನ ಸಂಕೋಚತನ, ಬಿಟ್ಟು ಬಾಳಿದರೆ ಕತ್ತಲೆಯಲ್ಲಿ ಬೆಳಕು ಬೆಳಗುತ್ತದೆ” ಎಂದು ಬಿಷಪ್ ಪೀಟರ್ ಹೇಳಿದರು.

     ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ  “ಹಂಚಿಕೊಳ್ಳುವಿಕೆ, ಇತರ ಧರ್ಮಗಳ ಕಡೆಗೆ ಮ್ರದು ಮನಸ್ಸು, ಹೃದಯ ಮುಕ್ತತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ, ಪ್ರೀತಿ ಮತ್ತು ಒಗ್ಗಟ್ಟಿನ ಸಂಸ್ಕೃತಿ, ದೀಪಾವಳಿ ಆಚರಣೆಯ ಮೂಲವಾಗಿದೆ’ ಎಂದು ಹೇಳಿದರು. ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ವರದಿಗಾರ ಮೊಹಮ್ಮದ್ ಆರೀಫ್ ಮಾತನಾಡಿ, ‘ಬೆಳಕಿನ ಹಬ್ಬವನ್ನು ಅನ್ಯ ಧರ್ಮದವರೊಂದಿಗೆ ಆಚರಿಸಿದಾಗ ಬೆಳಕಿನ ಶಕ್ತಿ ಹೆಚ್ಚುತ್ತದೆ, ಅಸೂಯೆ, ಕ್ರೋಧ, ಬಡತನ ಕತ್ತಲೆಯ ಪ್ರತೀಕವಾದರೆ, ಪ್ರೀತಿ, ಪರಸ್ಪರ ಸಹಕಾರ ಬೆಳಕಿನ ಪ್ರತೀಕ ಎಂದರು.

   ಸಾಮರಸ್ಯ ಸಂಸ್ಥೆ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್ ಮಾತನಾಡಿ ’ಎಲ್ಲ ಧರ್ಮದವರ ಹಬ್ಬ ಹರಿದಿನಗಳನ್ನು ಆಚರಿಸುವ ಸಂಪ್ರದಾಯ, ಸಂಸ್ಕೃತಿ ಇದೆ. ಎಲ್ಲಾ ಜನರು ಶಾಂತಿ ಮತ್ತು ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲು ಮುಂದಾಗಾಬೇಕು’ ಎಂದು ಹೇಳಿದರು.

    ಈ ವಿಶೇಷ ಸಂದರ್ಭದಲ್ಲಿ ಸಂತ ಮದರ್ ಥೆರೇಸಾ ವಿಚಾರ ವೇದಿಕೆ, ಮಂಗಳೂರು ಇವರು ಮೇಣದ ಬತ್ತಿ (ಗೂಡುದೀಪ) ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮವನ್ನು ಸ್ವರಾಂಜಲಿ, ಸಂಗೀತ ಶಾಲೆ-ಯೆಕ್ಕೂರು ಮತ್ತು ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಿಜೈ; ಸರಿಗಮ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿತ್ತು

    ರೆ.ಫಾ.ಸುದೀಪ್ ಪೌಲ್, ಎಂಎಸ್ಎಫ್ಎಸ್, ನಿರ್ದೇಶಕ ಸಂದೇಶ, ಶ್ರೀ ಸ್ಟ್ಯಾನಿ ಲೋಬೋ, ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು, ಸರಿಗಮ ಟ್ರಸ್ಟಿಗಳಾದ ಶ್ರೀ ಸ್ಟ್ಯಾನಿ ಆಲ್ವಾರಿಸ್, ಶ್ರೀ ವಿಜಯ್ ಆಲ್ಫ್ರೆಡ್,  ಶ್ರೀ ಥಾಮಸ್ ಪ್ರಸಾದ್, ಕಾರ್ಯದರ್ಶಿ, ಲಯನ್ಸ್ ಕ್ಲಬ್, ಬಿಜೈ, ಕೆ ಅಶ್ರಫ್ ಮಾಜಿ ಮೇಯರ್ , ಎಂಸಿಸಿ. ಇತರರು ಉಪಸ್ಥಿತರಿದ್ದರು.

      ಸಂತ ಮದರ್ ಥೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ತಲಿನೋ ಸ್ವಾಗತಿಸಿದರು.  ಉಪಾಧ್ಯಕ್ಷೆ  ಫ್ಲಾವಿ ಡಿಸೋಜಾ ವಂದಿಸಿದರು. ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

     ಔಪಚಾರಿಕ ಕಾರ್ಯಕ್ರಮದ ನಂತರ ಸ್ವರಾಂಜಲಿ ಸಂಗೀತ ಶಾಲೆ-ಯೆಕ್ಕೂರು, ಫಾ| ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಗಾಯನ ಪಂಗಡ, ಮಂಗಳೂರು. ಮತ್ತು ಕಲಾ ಸರಸ್ವತಿ ನಾಟ್ಯಾಲಯದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಡಾನ್ ಬಾಸ್ಕೋ ಸಭಾಂಗಣದಲ್ಲಿ ಸಂಗೀತ ಸಂಭ್ರಮ – 5 ನೇ ಮೈಕ್ ಸೈಮನ್ ನೈಟ್

ಮಂಗಳೂರು: ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಮತ್ತು ಲೈಟಿ ಅಪೋಸ್ಟೋಲೇಟ್ ಕಮಿಷನ್, ಏಂಜೆಲೋರ್ ಪ್ರಸ್ತುತಪಡಿಸಿ ಮೈಲುಗಲ್ಲಾದ ‘5ನೇ ಮೈಕ್ ಸೈಮನ್ ನೈಟ್’ ಕಾರ್ಯಕ್ರಮದಲ್ಲಿ ಕೊಂಕಣಿ ಸಂಗೀತದ ಹಿರಿಯ ಗಾಯಕ ಮೈಕ್ ಸೈಮನ್ ಅವರ ಜನಪ್ರಿಯ ಹಾಡುಗಳು ಪ್ರತಿಧ್ವನಿಸಿದಾಗ ನಗರದ ಡಾನ್ ಬಾಸ್ಕೊ ಸಭಾಂಗಣ ಕೊಂಕಣಿ ಸಂಗೀತ ಪ್ರೇಮಿಗಳು ಮತ್ತು ಅಭಿಮಾನಿಗಳಿಂದ ತುಂಬಿ ತುಳುಕುತೊಡಗಿತು.

    ಈ ಸಂಗೀತ ಕಛೇರಿಯನ್ನು HFF ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿವಂಗತ ಶರೋನ್ ಆಳ್ವಾ ಅವರಿಗೆ ಸಮರ್ಪಿಸಲಾಯಿತು. ಸ್ಥಳದಲ್ಲಿದ್ದ ಕಿಕ್ಕಿರಿದ ಪ್ರೇಕ್ಷಕರಿಗೆ ಮೈಕ್ ಸೈಮನ್ ಅವರೇ ರಚಿಸಿದ ಮತ್ತು ಬರೆದ ಜನಪ್ರಿಯ ಮಧುರ ಗೀತೆಗಳಿಗೆ ಹಾಡಲಾಯಿತು. ಸಂಗೀತದ ಸಂಭ್ರಮದ ಹೊರತಾಗಿ, ಅದ್ಭುತವಾದ ನೃತ್ಯಗಳು ಮತ್ತು ನಕ್ಕು ನಗಿಸುವ ಹಾಸ್ಯಮಯ ಸಂಜೆಯಾಗಿ ಮಾರ್ಪಟ್ಟಿತು. Fr ವಿಲಿಯಂ ಮೆನೇಜೆಸ್.

     ಔಪಚಾರಿಕ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಂಜಲೂರು ಚರ್ಚಿನ ಧರ್ಮಗುರುಗಳಾದ  ವಂ| ವಿಲಿಯಮ್ ಮಿನೆಜೆಸ್ ವಹಿಸಿದ್ದು, ಡೇವಿಡ್ ಡಿಸೋಜಾ ಪ್ರೊಪ್ರೈಟರ್, ಡಿಸಿಒಎನ್ಎಸ್ ಗ್ರೂಪ್, ಪ್ರವೀಣ್ ತೌರೊ, ಮಾರ್ಕೆಟಿಂಗ್ ಮ್ಯಾನೇಜರ್, ಡೈಜಿವರ್ಲ್ಡ್ ಮೀಡಿಯಾ, ಎಲಿಯಾಸ್ ಫೆರ್ನಾಂಡಿಸ್, ನಿರ್ದೇಶಕರು, ಫೋರ್ವಿಂಡ್ಸ್, ಮಂಗಳೂರು, ಸಂತೋಷ್ ಸಿಕ್ವೇರಾ, ಮಾಲೀಕ ಸಂತೋಷ್ ಅರೇಂಜರ್ಸ್, ರಿಚರ್ಡ್ ಮೊರಾಸ್, ಕೊಂಕಣಿ ಲೇಖಕರ ಸಂಘದ ಸಂಯೋಜಕ, ಸ್ಟಾನ್‌ಪ್ರಿ, ಸ್ಟಾನ್ಲಿ ಛಾಯಾಗ್ರಹಣ ಮತ್ತು ಅನ್ಸಿತಾ ವೀಡಿಯೋಗ್ರಫಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

     ಮೈಕ್ ಸೈಮನ್ ಜೊತೆಗೆ ಕೊಂಕಣಿಯ ಖ್ಯಾತ ಗಾಯಕರಾದ ಕ್ಲೌಡ್ ಡಿಸೋಜಾ, ಐವಾನ್ ಸಿಕ್ವೇರಾ,  ಝೀನಾ ಪೆರೀರಾ, ಜೋಸೆಫ್ ಪಿಂಟೋ, ಪ್ರೆಸಿಲ್ಲಾ ಸಿಕ್ವೇರಾ,  ಮೆಲಿಂಡಾ ಪೆರೀರಾ, ರಾಜೇಶ್ ಮಿಸ್ಕಿತ್, ಬಿಂದು ಕುಟಿನ್ಹಾ, ಒಲಿಂಡಾ ಲೋಬೋ , ದಿಶಾ ಮೊರಾಸ್, ರಿಯಾ ಇವರು ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಪುಳಕಗೊಳಿಸಿದರು.

    ಜನಪ್ರಿಯ ವಿಜೆಗಳಾದ ಜೂಡ್ ನೊರೊನ್ಹಾ ಮತ್ತು ಫ್ಲಾಯ್ಡ್ ಡಿ’ಮೆಲ್ಲೋ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿದರು. ಜೋಸೆಫ್ ಪಿಂಟೋ ನೇತೃತ್ವದ ಹಾಸ್ಯ ತಂಡವು ಹಾಡುಗಳ ನಡುವೆ ನಗೆಯ ಕ್ಷಣಗಳನ್ನು ಸೃಷ್ಟಿಸಿತು ಮತ್ತು ಪ್ರೇಕ್ಷಕರು ಅವುಗಳನ್ನು ಚೆನ್ನಾಗಿ ಆನಂದಿಸಿದರು. ಪಪ್ಪನ್ ಮತ್ತು ಜೋಸ್ವಿನ್ ಕಾರ್ಯಕ್ರಮಕ್ಕೆ ಸಂಗೀತ ನೀಡಿದರು. ರಾಜೇಶ್ ಮಿಸ್ಕ್ವಿತ್ ಗಣ್ಯರನ್ನು ಸ್ವಾಗತಿಸಿ, ನೋಯೆಲ್ ಪಿಂಟೋ ವಂದಿಸಿದರು.

ರೇಷ್ಮೆ ಇಲಾಖೆ ವಿಲೀನದ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಕೈಬಿಡಲು ಆಗ್ರಹ
ರೈತರ ಬದುಕಿನ ಜತೆ ಚೆಲ್ಲಾಟಬೇಡ,ಇಲಾಖೆ ಬಲಪಡಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಬಯಲುಸೀಮೆಯ ರೈತರ ಜೀವನಾಡಿಯಾಗಿರುವ ರೇಷ್ಮೆಕೃಷಿಯನ್ನು ಇತರೆ ಇಲಾಖೆಗಳೊಂದಿಗೆ ವಿಲೀನ ಮಾಡುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದ್ದು, ಅನ್ನದಾತನ ಬದುಕಿನೊಂದಿಗೆ ಚೆಲ್ಲಾಟವಾಡುವ ಪ್ರಯತ್ನ ಕೈಬಿಟ್ಟು ಇಲಾಖೆಯ ಬಲವರ್ಧನೆಗೆ ಕ್ರಮವಹಿಸುವಂತೆ ಸರ್ಕಾರವನ್ನು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರೇಷ್ಮೆ ಇಲಾಖೆಯಲ್ಲಿನ 2346 ಹುದ್ದೆಗಳ ರದ್ದತಿ ಜತೆಗೆ ಇಲಾಖೆಯನ್ನು ಮತ್ತೊಂದು ಇಲಾಖೆ ಜತೆ ವಿಲೀನ ಮಾಡುವ ನಿರ್ಧಾರ ಕೈಬಿಡಿ ಎಂದು ಆಗ್ರಹಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕರೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಸ್ವಾವಲಂಬನೆಯ ಬದುಕು ನೀಡಿರುವ ಉದ್ಯಮವನ್ನು ವಿನಾಶದೆಡೆಗೆ ತರುತ್ತಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದಿದ್ದಾರೆ.
ಅತಿವೃಷ್ಟಿ,ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದಾಗ ಕಾಪಾಡಿದ್ದೇ ರೇಷ್ಮೆ ಮತ್ತು ಹಾಲು ಎಂಬುದನ್ನು ಸರ್ಕಾರ ಮರೆತಂತಿದೆ, ಬಯಲುಸೀಮೆಯ ಅನ್ನದಾತರನ್ನು ಆತ್ಮಹತ್ಯೆಯತ್ತ ಆಲೋಚನೆಯೂ ಮಾಡದಂತೆ ಆತ್ಮಸ್ಥೈರ್ಯ ತುಂಬಿದ ರೇಷ್ಮೆ ಉದ್ಯಮವನ್ನು ಉಳಿಸಿ ಅಭಿವೃದ್ದಿಪಡಿಸಬೇಕಾದ ಸಂದರ್ಭದಲ್ಲಿ ಸರ್ಕಾರ ಕತ್ತುಹಿಚುಕುವ ಕೃತ್ಯಕ್ಕೆ ಕೈಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಅರಸರ ಕಾಲದಲ್ಲಿಯೇ ಆರಂಭವಾಗಿ 108 ವರ್ಷಗಳ ಇತಿಹಾಸ ಹೊಂದಿರುವ ಇಲಾಖೆ ಮುಚ್ಚುವ ಹುನ್ನಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಬಯಲು ಸೀಮೆಯ ರೈತರ ಬದುಕು ಕಷ್ಟಕ್ಕೆ ಸಿಲುಕಲಿದೆ, ಚೀನಾ ರೇಷ್ಮೆ ಪೈಪೊಟಿಗೆ ಅನುಗುಣವಾಗಿ ಇದೀಗ ರೈತರು ಬೈವೋಲ್ಟೈನ್ ರೇಷ್ಮೆ ಉತ್ಪಾದನೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡುವ ಬದಲಿಗೆ ಇಲಾಖೆ ಮುಚ್ಚುವ ಪ್ರಯತ್ನ ಸರಿಯೇ ಎಂದು ಪ್ರಶ್ನಿಸಿದ್ದಾರೆ.

ದೇಶದ ರೇಷ್ಮೆಯಲ್ಲಿ ಕೋಲಾರ ಸಿಂಹಪಾಲು


ದೇಶದಲ್ಲೇ ಅತಿಹೆಚ್ಚು ರೇಷ್ಮೆ ಉತ್ಪಾದಿಸುವ ಮೂಲಕ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದ್ದರೆ, ರಾಜ್ಯದಲ್ಲಿ ಕೋಲಾರ ಜಿಲ್ಲೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ರೇಷ್ಮೆಕೃಷಿಯನ್ನು ರಾಜ್ಯದ 1.35 ಲಕ್ಷ ಕುಟುಂಬಗಳು ಹಾಗೂ 7059 ನೂಲು ಬಿಚ್ಚಾಣಿಕೆದಾರರ ಕುಟುಂಬಗಳು ನಂಬಿಕೊಂಡಿವೆ ಎಂದು ತಿಳಿಸಿದ್ದಾರೆ.
2346 ಹುದ್ದೆಗಳ ರದ್ದತಿ ಹಾಗೂ ಇಲಾಖೆ ವಿಲೀನಕ್ಕೆ ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿರುವುದು ಆಘಾತಕಾರಿ ವಿಷಯವಾಗಿದ್ದು, ಅಧಿಕಾರಿಗಳ ಮಾತು ಕೇಳಿ ಸರ್ಕಾರ ಈ ಕೆಲಸಕ್ಕೆ ಮುಂದಾದರೆ ರೈತರ ತೀವ್ರ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ರಾಜ್ಯದ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯ ಮಾಡಲಾಗುತ್ತಿದೆ, ವಾರ್ಷಿಕ 12 ಕೋಟಿ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ 12 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಗೂಡು ಹಾಗೂ 8 ಸಾವಿರ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದಿಸಲಾಗುತ್ತಿದ್ದು, ಇಷ್ಟೊಂದು ವಿಸ್ತಾರವಾಗಿ ಹರಡಿರುವ ರೇಷ್ಮೆ ಉದ್ಯಮವನ್ನು ಉಳಿಸಿ ಬೆಳೆಸುವ ಮೂಲಕ ರೈತರಿಗೆ ನೆರವಾಗುವಂತೆ ಒತ್ತಾಯಿಸಿದ್ದಾರೆ.
ರೇಷ್ಮೆ ಮೊಟ್ಟೆ,ಚಾಕಿ ಹುಳು ನೀಡಿಕೆಯಲ್ಲಿ ಖಾಸಗಿಯವರ ದರ್ಬಾರು ಕಡಿಮೆ ಮಾಡಿ ಸರ್ಕಾರವೇ ಇಲಾಖೆ ಮೂಲಕ ರೈತರಿಗೆ ಅಗತ್ಯವಾದ ಪ್ರಮಾಣದಲ್ಲಿ ಮೊಟ್ಟೆ, ಚಾಕಿಹುಳು ನೀಡುವ ಕೆಲಸ ಮಾಡಬೇಕು, ಕೃಷಿ,ತೋಟಗಾರಿಕಾ ಉತ್ಪನ್ನಗಳಿಗೆ ಬೆಲೆ ಸಿಗದೇ ಕೈಕೊಟ್ಟ ಸಂದರ್ಭದಲ್ಲೂ ಬಯಲುಸೀಮೆಯ ಜಿಲ್ಲೆಯ ರೈತರನ್ನು ಕಾಪಾಡಿದ್ದು ರೇಷ್ಮೆ ಮತ್ತು ಹಾಲು ಎಂಬ ಸತ್ಯದ ಅರಿವು ಈ ಭಾಗದಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳಿಗೆ ಇರಬೇಕು, ಅನ್ನದಾತರ ಕೈಹಿಡಿದಿರುವ ಈ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಶಾಸಕರು ಪಕ್ಷಬೇಧ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ರೇಷ್ಮೆ ಮಾರುಕಟ್ಟೆಗಳಲ್ಲಿ ವಾರ್ಷಿಕವಾಗಿ 2500 ರಿಂದ 3 ಸಾವಿರ ಕೋಟಿ ರೂಗಳ ಮೌಲ್ಯದ ರೇಷ್ಮೆ ಗೂಡು ವಹಿವಾಟು ನಡೆಸುತ್ತಿದ್ದು ಸರ್ಕಾರಕ್ಕೆ ಆದಾಯವೂ ಇದೆ, ವಿದೇಶಿ ವಿನಿಮಯಕ್ಕೂ ನೆರವಾಗಿದೆ, ವಿಶ್ವಬ್ಯಾಂಕಿನಿಂದ ನೂರಾರು ಕೋಟಿ ಸಾಲ ತಂದು ಇಲಾಖೆಯನ್ನು ಅಭಿವೃದ್ದಿಪಡಿಸಲಾಗಿದೆ.
ಈಗ ಏಕಾಏಕಿ ಮುಚ್ಚುವ ನಿರ್ಧಾರ ಸರಿಯಲ್ಲ ಎಂದ ಅವರು, ಈ ಹಿಂದೆ ರೇಷ್ಮೆ ಗೂಡು ಬೆಲೆ ಕಳೆದುಕೊಂಡಾಗ ಅಂದು ರೇಷ್ಮೆ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಪ್ರತಿ ಕೆಜಿಗೆ 10 ರೂ ಪ್ರೊತ್ಸಾಹಧನ ಕೊಟ್ಟು ಕೈಹಿಡಿದಿದ್ದನ್ನು ಸ್ಮರಿಸಿದ್ದಾರೆ.
2024-25ರ ವೇಳೆಗೆ 1.25 ಲಕ್ಷ ಹೆಕ್ಟೇರ್ ಹಿಪ್ಪುನೇರಳೆ ತೋಟ ನಿರ್ಮಾಣ ಹಾಗೂ 1.05 ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆ ಹಾಗೂ 0.15 ಲಕ್ಷ ಮೆಟ್ರಿಕ್ ಟನ್ ಕಚ್ಚಾರೇಷ್ಮೆ ಉತ್ಪಾದನೆ ಗುರಿ ಸಾಧನೆಗೆ ಇಲಾಖೆ ಉಳಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್

ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಮರು ಆಯ್ಕೆಯಲ್ಲಿ ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ ಇವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಭಾರತೀಯ ಮೂಲದ ರಿಷಿ ಸುನಕ್ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ಭರವಸೆ ನೀಡಿದ್ದಾರೆ.

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಮತದಾನದ ಮೂಲಕ ಲಿಜ್ ಟ್ರಸ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಿನ್ನಡೆ ಅನುಭವಿಸಿದ್ದರು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 45 ದಿನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.

    ಈ ಪೈಪೋಟಿಯಲ್ಲಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಸುನಕ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬೊರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್‌ನಿಂದ ಹಿಂದೆ ಸರಿದ ಕಾರಣ ಸುನಕ್ ಹಾದಿ ಸುಗಮಗೊಂಡಿತು. ಸುನಕ್ ವಿರುದ್ಧ, ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್‌ ಸ್ಪರ್ಧಿಸಿದ್ದರು. ಪೆನ್ನಿ ಮೋರ್ಡೆಂಟ್‌ ಕೇವಲ 26 ನಾಯರ ಬೆಂಬಲ ಪಡೆದರು. ಹೀಗಾಗಿ ಕಣದಿಂದ ಹೊರಬಿದ್ದರು. ಇದರೊಂದಿಗೆ ಭಾರಿ ಬಹುಮತದೊಂದಿದೆ ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬೊರಿಸ್ ಜಾನ್ಸನ್ ಆಡಳಿತದಲ್ಲಿ ರಿಷಿ ಸುನಕ್ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಸಮಯದಲ್ಲಿ ಜಾನ್ಸನ್ ಜನಪ್ರಿಯತೆ ಪಾತಾಳಕ್ಕೆ ಕುಸಿದರೆ, ರಿಷಿ ಸುನಕ್ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಜನಪ್ರಿಯರಾದರು. ಬ್ರಿಟನ್ ಉದ್ಯಮ ಕ್ಷೇತ್ರಕ್ಕೆ ನೆರವು ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅಕ್ಟೋಬರ್ 28ರಂದು ಪದಗ್ರಹಣ ಮಾಡಲಿದ್ದಾರೆ

ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು.

ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿಯವರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್”


ಕುಂದಾಪುರ, ಅ.24: ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಇವರಿಗೆ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬಿನಿಂದ “ನೇಶನಲ್ ಬ್ಯುಲ್ಡ್ ಎವಾರ್ಡ್” ಲಭಿಸಿದೆ.
ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ವಲಯ 3 ಮತ್ತು 4ರ ಆತಿಥ್ಯದಲ್ಲಿ ಆಯೋಜಿಸಿದ ಮಾಧವಕೃಷ್ಣ ಸಭಾಭವನ, ಹೋಟೆಲ್ ಕಿದಿಯೂರು, ಉಡುಪಿಯಲ್ಲಿ ನಡೆದ 20ನೇ ಅಕ್ಟೋಬರ್ ರಂದು “ಜ್ಞಾನ ಪೂರ್ಣ” ರೋಟರಿ ಜಿಲ್ಲಾ ಸಾಕ್ಷರತಾ ಕಾರ್ಯಾಗಾರ ಹೊಸ ಶಿಕ್ಷಣ ನೀತಿ ಎಂಬ ಕಾರ್ಯಕ್ರಮದಲ್ಲಿ ಆಯ್ದ ಶಿಕ್ಷಕರಿಗೆ ನೇಷನ್ ರೋಟರಿ ಇಂಡಿಯಾ ಮಿಷನ್ ವತಿಯಿಂದ ಶೈಕ್ಷಣಿಕ ಕ್ಷೇತ್ರದ ವಿಶೇಷ ಸಾಧನೆಗಾಗಿ ನೀಡುವ ಆಯ್ದ ಶಿಕ್ಷರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನೀಡಲಾಯಿತು, ಅವರಲ್ಲಿ ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಒರ್ವರಾಗಿದ್ದಾರೆ.


ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಎಚ್. ಭಾ.ಸೇ.ಆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲೆ ಉದ್ಘಾಟಕರಾಗಿದ್ದು, ಅಧ್ಯಕ್ಷತೆಯನ್ನು ರೊ. ಡಾ. ಜಯ್‍ಗೌರಿ, ಜಿಲ್ಲಾ ರೋಟರಿ ಗವರ್ನರ್, 3182 ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಿವರಾಜ್ ಎನ್. ಕೆ.ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ, ರೊ. ಅಭಿನಂದನ ಶೆಟ್ಟಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ತರಬೇತುದಾರರು, ರೊ. ಡಿ.ಎಸ್. ರವಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ಸಲಹೆಗಾರರು ರೊ. ಎಚ್. ಎಲ್. ರವಿ ಜಿಲ್ಲಾ ಮಾಜಿ ಗವರ್ನರ್ ಮತ್ತು ಜಿಲ್ಲಾ ವೃತ್ತಿ ಸೇವಾ ನಿರ್ದೇಶಕರು ರೊ. ಬಿ. ಸಿ. ಗೀತಾ, ಜಿಲ್ಲಾ ಗವರ್ನರ್ 2023-24 ರೊ. 03 ದೇವಾನಂದ್, ಜಿಲ್ಲಾ ಗವರ್ನರ್ 2024-25 ಯಾಗಿದ್ದು, ಸಂಪನ್ಮೂಲ ಅತಿಥಿಗಳಾಗಿ ಪ್ರೊ. ಕರುಣಾಕರ ಕೋಟೆಕಾರ್ ನಿರ್ದೇಶಕರು, ಅಂತರಾಷ್ಟೀಯ ಶೈಕ್ಷಣಿಕ ಸಂಯೋಜಕರು, ಮಾಹೆ, ಮಣಿಪಾಲ ಡಾ. ಅಶೋಕ ಸಾಮ್ಯ ಉಪ. ಪ್ರಾಂಶುಪಾಲ, ಡಯಟ್, ಉಡುಪಿ ಶ್ರೀ ಒ.ಆರ್. ಪ್ರಕಾಶ್, ಉಪನ್ಯಾಸಕರು, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಶ್ರೀ ವಿಠಲ ನಾಯಕ್, ಶಾಲಾ ಶಿಕ್ಷಕರು, ಕಲ್ಲಡ್ಕ, ಬಂಟ್ವಾಳ ಇವರಿದ್ದ ಕಾರ್ಯಕ್ರಮದಲ್ಲಿ ಚಂದ್ರ ಶೇಖರ ಬೀಜಾಡಿಯವ
ರಿಗೆ “ನೇಶನಲ್ ಬ್ಯುಲ್ಡ್ ಎವಾರ್ಡ್” ನ್ನು ಕೊಡಮಾಡಲಾಯಿತು.

ಈ ಮೊದಲು ಕೂಡ ಚಂದ್ರ ಶೇಖರ ಬೀಜಾಡಿಯವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ತಾಲೂಕು, ಜಿಲ್ಲಾ ಮಟ್ಟದ ಕ್ರೀಡೋತ್ವವಗಳಲ್ಲಿ ಅತ್ಯುತ್ತಮ ನಿರೂಪರಾಗಿದ್ದು, ರಾಜ್ಯ ಮಟ್ಟದ ಕೂಡ ಅತ್ಯುತ್ತಮ ಕಾರ್ಯ ನಿರೂಪಕರೆಂದು ಹೆಸರು ಗಳಿಸಿದ್ದಾರೆ.

ಉಡುಪಿ ಸೈಂಟ್ ಮೇರೀಸ್ ಆ.ಮಾ. ಶಾಲಾ ಕ್ರೀಡಾಕೂಟ – “ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜೀವನ ಕೌಶಲ್ಯ ವೃದ್ಧಿ”: ಗೌತಮ್ ಶೆಟ್ಟಿ ಟೊರ್ಪೆಡೋಸ್

ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ” ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.

ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಶಾಲಾ ಹಳೆ ವಿದ್ಯಾರ್ಥಿನಿ ಅಶ್ಮಿತಾ ರೆಬೆಲ್ಲೊ ಮುಖ್ಯ ಅತಿಥಿಗಳಾಗಿದ್ದರು.