HOLY ROSARY CHURCH, KUNDAPUR – 450 th JUBILEE SOUVENIR 2021

ಆಲೂಗಡ್ಡೆಗೆ ಅಂಗಮಾರಿ, ಬುಡ ರೋಗಕ್ಕೆ ಉಚಿತ ಔಷಧಿ ನೀಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರಕ್ಕೆ ರೈತಸಂಘ ಒತ್ತಾಯ

ಕೋಲಾರ: ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಹಾಗೂ ಬುಡ ರೋಗ ನಿಯಂತ್ರಣಕ್ಕೆ ಉಚಿತ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗ ಬೆಳೆ ಸಮೇತ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಲಕ್ಷಾಂತರ ರೂಪಾಯಿ ಸಾಲದ ಜೊತೆಗೆ ಮನೆಯ ಹೆಂಡತಿ ಒಡವೆಯನ್ನು ಅಡ ಇಟ್ಟು ಬೆಳೆದಿರುವ 2 ಎಕರೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ರೋಗಕ್ಕೆ ಬಲಿಯಾಗಿದೆ. ಲಕ್ಷ ಲಕ್ಷ ಹಣ ನೀಡಿ ಖರೀದಿ ಮಾಡಿ ಔಷಧಿಯಿಂದ ಕನಿಷ್ಠಪಕ್ಷ ಶೇ.10ರಷ್ಟೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕುಸಿದಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳೊಂದಿಗೆ ಕೈಜೋಡಿಸಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆಂದು ರೈತಸಂಘದ ಮಾಲೂರು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಕೃಷಿ ಕ್ಷೇತ್ರದ ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ವ್ಯವಸಾಯವೆಂಬ ಜೂಜಾಟದಲ್ಲಿ ದಿನೇದಿನೇ ರೈತ ಖಾಸಗಿ ಸಾಲಕ್ಕೆ ಸಿಲುಕುತ್ತಿದ್ದಾನೆ. 2 ವರ್ಷ ಕೊರೊನಾ ಕಾಟ 3 ವರ್ಷದಿಂದ ಬೆಳೆದ ಟೊಮೇಟೊ, ಕ್ಯಾಪ್ಸಿಕಂಗಳಿಗೆ ನುಸಿ, ರೋಸ್, ಜಾಂಡೀಸ್, ಊಜಿ ರೋಗ ನಿಯಂತ್ರಣಕ್ಕೆ ಬಾರದೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರೂ ತೋಟದಲ್ಲಿ ಬೆಳೆ ಇಲ್ಲದೆ ಹಾಕಿದ ಬಂಡವಾಳವು ಕೈಗೆ ಸಿಗದೆ ಕಟ್ಟಿದ ಬೆಳೆ ವಿಮೆ ಹಾಗೂ ಸರ್ಕಾರದ ಪರಿಹಾರ ಹಣಕ್ಕೆ ಜಾತಕ ಪಕ್ಷಿಗಳಂತೆ ರೈತರು ಕಾಯಬೇಕಾದ ಪರಿಸ್ಥಿತಿ ಇದ್ದರೂ ಸ್ಪಂದಿಸಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿರುವ ಜೊತೆಗೆ ಅಧಿಕಾರಿಗಳು ಕಚೇರಿ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಉತ್ತಮ ಮುಂಗಾರು ಮಳೆಯಿಂದ ಹರ್ಷವಾಗಿರುವ ರೈತ 5 ವರ್ಷಗಳಿಂದ ನಷ್ಟವಾಗಿದ್ದರೂ ಛಲ ಬಿಡದೆ ಈ ವರ್ಷ ಆಲೂಗಡ್ಡೆ ಬಿತ್ತನೆ ಮಾಡಲು ಮುಂದಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ.
100 ರಿಂದ 120 ಮೂಟೆ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇವಲ 20 ಮೂಟೆ ಫಸಲು ಬಂದು ಹಾಕಿದ ಬಂಡವಾಳ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಗೆ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳೆಯನ್ನು ಬುಡದಲ್ಲಿ ಕಾಂಡ ತಿನ್ನುವ ಹುಳುಗಳ ಕಾಟದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕಣ್ಣ ಮುಂದೆಯೇ ಬೆಳೆ ನಾಶವಾಗುತ್ತಿರುವುದಕ್ಕೆ ದಿಕ್ಕು ತೋಚದೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲದ ಶೂಲಕ್ಕೆ ಸಿಲುಕಿ ಸಾಲ ತೀರಿಸಲಾಗದೆ ಸ್ವಾಭಿಮಾನಕ್ಕೆ ಅಂಜಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಎಕರೆ ಆಲೂಗಡ್ಡೆ ಬೆಳೆಯಬೇಕಾದರೆ ಗೊಬ್ಬರ, ಔಷಧಿ, ಬಿತ್ತನೆಗಡ್ಡೆ ಕೂಲಿ ಸೇರಿ 2 ಲಕ್ಷ ಖರ್ಚು ಬರುತ್ತದೆ. ರೋಗದಿಂದ ಕನಿಷ್ಠ ಕೂಲಿ ಸಹ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕಚೇರಿಯಲ್ಲೇ ಕುಳಿತು ಪತ್ರಿಕಾ ಹೇಳಿಕೆ ನೀಡಿ ಜಡಿ ಮಳೆಯಿಂದ ಬೆಳೆಯನ್ನು ಔಷಧಿ ಸಿಂಪಡಣೆ ಮಾಡಿ ಬೆಚ್ಚಗಿಡಿ ಎಂದು ಕೈತೊಳೆದುಕೊಳ್ಳುತ್ತಾರೆ. ಕನಿಷ್ಠ ಪಕ್ಷ ತೋಟಕ್ಕೂ ಸಹ ಭೇಟಿ ನೀಡುವುದಿಲ್ಲ.
ಇನ್ನು ವಿಮಾ ಕಂಪನಿಗಳಿಗೆ ಅನುಕೂಲವಾಗಲೆಂದು ಕಡ್ಡಾಯವಾಗಿ ರೈತರು ವಿಮೆ ಮಾಡಿಸಿ ವಿಮಾ ಕಂಪನಿಗಳನ್ನು ಉದ್ಧಾರ ಮಾಡಿ ಎಂದು ಹೇಳುತ್ತಾರೆ ಹೊರತು ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾದ ವಿಮಾ ಕಂಪನಿಗಳು ನಾಪತ್ತೆಯಾಗಿದ್ದಾವೆ ಎಂದು ಆರೋಪಿಸಿದರು.
ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಕಾಂಡ ರೋಗಕ್ಕೆ ಉಚಿತ ಔಷಧಿಯನ್ನು ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ರೈತರಿಗೆ ಸ್ಪಂದಿಸುವಂತೆ ಆದೇಶ ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿ.ಪ್ರ.ಕಾ. ಕೋಟೆ ಶ್ರೀನಿವಾಸ್, ಶ್ರೀನಿವಾಸಪುರ ತಾ.ಅ. ತೆರ್ನಹಳ್ಳಿ ಆಂಜಿನಪ್ಪ, ರಾ.ಪ್ರ.ಕಾ. ಫಾರೂಖ್ ಪಾಷ, ಹರೀಶ್, ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುಳಾ ಮುಂತಾದವರಿದ್ದರು.

‘ಮುಲ್ಲರ್‍ರನ್ನ್’ – ಮ್ಯಾರಥಾನ್ ಓಟ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಿಂದ

ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ವಿಭಾಗ ಮತ್ತು ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದಿನಾಂಕ 13.11.2022 ರಂದು ‘ಮುಲ್ಲರ್‍ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.
ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಮ್ಯಾರಥನ್‍ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಾಗವಹಿಸುವವರಿಗೆ ‘ನಡೆಯಿರಿ, ಆರೋಗ್ಯಕರವಾಗಿ ತಿನ್ನಿರಿ, ಅರೋಗ್ಯಕರವಾಗಿ ಯೋಚಿಸಿರಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಓಡಿರಿ’ ಎಂಬ ನಾಲ್ಕು ತಂತ್ರಗಳನ್ನು ಅನುಸರಿಸಲು ಪೆÇ್ರೀತ್ಸಾಹಿಸಿದರು. ಅಧ್ಯಕ್ಷರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಮಧುಮೇಹದ ಬಗ್ಗೆ ಜಾಗರೂಕರಾಗಬೇಕಾದ ಪ್ರಸ್ತುತ ಯುಗದಲ್ಲಿ ಈ ಮ್ಯಾರಥಾನ್ ಓಟವನ್ನು ಅಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದೆ ಬಂದ ಕಾಲೇಜಿನ ಆಯೋಜನಾ ತಂಡವನ್ನು ಶ್ಲಾಘಿಸಿದರು. ಇದರೊಂದಿಗೆ ಬೆಳಿಗ್ಗೆ 6.30 ಗಂಟೆಗೆ ಮುಖ್ಯ ಅತಿಥಿಗಳು 15 ಕಿ.ಮೀ ಓಟಕ್ಕೆ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ವಂದನೀಯ ಅಜಿತ್ ಮಿನೇಜಸ್ ರವರು 7.15 ಗಂಟೆಗೆ 5 ಕಿ.ಮೀ ಓಟಕ್ಕೆ ಚಾಲನೆ ನೀಡಿದರು.
15 ಕಿ.ಮೀ ಪುರುಷರ ವಿಭಾಗದಲ್ಲಿ ಶ್ರೀ ಅನಿಲ್ ಕುಮಾರ್‍ರವರು 43ನಿಮಿಷ 28ಸೆಕೆಂಡ್ ಗಳಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಚೈತ್ರಾ ದೇವಾಡಿಗ 58 ನಿಮಿಷ 30ಸೆಕೆಂಡ್‍ಗಳಲ್ಲಿ ಪೂರೈಸುವ ಮೂಲಕ ಮೊದಲನೆ ಸ್ಥಾನವನ್ನು ಗಳಿಸಿದರು. ಪುರುಷರ 5 ಕಿ.ಮೀ ವಿಭಾಗದಲ್ಲಿ ಶೀ ಗೋವಿಂದರಾಜ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಧನುಷಾ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದರು.
15 ಕಿ.ಮೀ ವಿಭಾಗದಲ್ಲಿ 71 ವರ್ಷದ ಶ್ರೀಮತಿ ಸುಲತಾ ಕಾಮತ್ ಹಾಗೂ 64 ವರ್ಷದ ಶ್ರೀ ವಿಠ್ಟಲ್ ಶೆಟ್ಟಿಗಾರ್ ಮತ್ತು ಅತೀ ಕಿರಿಯ ವಯಸ್ಸಿನ ಮಾಸ್ಟರ್ ಸ್ವಯಂ ರವರ ಭಾಗವಹಿಸುವಿಕೆಯು ಈ ಮ್ಯಾರಥಾನ್‍ನ ವಿಶೇಷತೆಯಾಗಿದ್ದು ಅವರನ್ನು ವಿಶೇಷ ಬಹುಮಾನಗಳೊಂದಿಗೆ ಗೌರವಿಸಲಾಯಿತು.
ಒಟ್ಟಾಗಿ ವಿಜೇತರಿಗೆ ನಗದು ಬಹುಮಾನ, ಆರೋಗ್ಯ ತಪಾಸಣೆ ವೌಚರ್ ಹಾಗೂ ಗಿಫ್ಟ್ ಹ್ಯಾಂಪರ್‍ಗಳನ್ನೊಳಗೊಂಡ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಯಿತು. ಹಾಗೂ ಎಲ್ಲಾ ಮ್ಯಾರಥಾನ್ ಫಿನಿಶರ್‍ಗಳಿಗೆ ಅವರ ಭಾಗವಹಿಸುವಿಕೆಗಾಗಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತ, ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಾ ರೆಬೆಲ್ಲೊ, ಕಾರ್ಯಕ್ರಮ ಸಂಯೋಜಕರಾದ ಡಾ. ಸೂರಜ್ ಕೆ.ವಿ., ರಾಘ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ದೀರಜ್ ಫೆರ್ನಾಂಡಿಸ್, ಮಾದ್ಯಮ ಸಂಯೋಜಕರಾದ ಡಾ. ಅನುಷಾ ಜಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಚೆನ್ನಕೇಶವ ಎಮ್.ಜಿ. ಯವರು ಉಪಸ್ಥಿತರಿದ್ದರು.

ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ದಿನ ಜೀವನದ “ಜೀವನದ ಎಲ್ಲಾ ಋತುಗಳಲ್ಲಿ ಬಾಲ್ಯದ ಜೀವನವು ಅತ್ಯಂತ ಸುಂದರವಾಗಿದೆ”

ಮಂಗಳೂರು: 14ನೇ ನವೆಂಬರ್ 2022 ರಂದು ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ದಿನವನ್ನು ಉತ್ಸಾಹ ಮತ್ತು ಹುರುಪಿನಿಂದ ಆಚರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಮೋಜಿನ ದಿನವಾಗಿತ್ತು. ವರ್ಣರಂಜಿತ ಉಡುಗೆಯಲ್ಲಿ ಶಾಲೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಆನಂದ ಅನುಭವಿಸಲು ಹಾಗೆ ಮಕ್ಕಳಲ್ಲಿ ವಿಶೇಷ ಭಾವನೆ ಮೂಡಿಸಲು ಶಿಕ್ಷಕರಿಂದ ವಿಶೇಷ ಸಭೆ ಆಯೋಜಿಸಲಾಗಿತ್ತು. ಶಿಕ್ಷಕರಿಂದ ದೇವರ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲರಾದ ಫಾದರ್ ಜೋಸೆಫ್ ಉದಯ್ ಫೆರ್ನಾಂಡಿಸ್ ಮಕ್ಕಳ ದಿನಾಚರಣೆಯ ಮಹತ್ವವನ್ನು ಕೇಂದ್ರೀಕರಿಸಿ ಭಾಷಣ ಮಾಡಿ “ಜೀವನದ ಎಲ್ಲಾ ಋತುಗಳಲ್ಲಿ ಬಾಲ್ಯದ ಜೀವನವು ಅತ್ಯಂತ ಸುಂದರವಾಗಿದೆ” ಎಂದು ತಿಳಿಸಿದರು. ಶಿಕ್ಷಕರು ಮಕ್ಕಳಿಗೆ ಸುಂದರವಾದ ಶುಭಾಶಯ ಗೀತೆಯನ್ನು ಅರ್ಪಿಸಿದರು. ಮಕ್ಕಳು ಅಸೆಂಬ್ಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ದಿನವನ್ನು ಸ್ಮರಣೀಯವಾಗಿಸಿಕೊಂಡರು. ವರ್ಗವಾರು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಹೋಲಿ ರೆಡೀಮರ್ ಶಾಲೆಯು ರಾಜ್ಯ ಮಟ್ಟದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಪದಕಗಳನ್ನು ತನ್ನದಾಗಿಸಿಕೊಂಡಿದೆ





ಬೆಳ್ತಂಗಡಿ: ಹೋಲಿ ರೆಡೀಮರ್ ಶಾಲೆ, ಬೆಳ್ತಂಗಡಿಯು ವೈಟ್ ಬೆಲ್ಟ್ ವಿಭಾಗದಲ್ಲಿ, ಬಂಟ್ವಾಳದ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನವೆಂಬರ್ 12 ರಂದು ಯೊಮೊಟೊ ಶೋಟೊಕಾನ್ ಕರಾಟೆ ಅಸೋಸಿಯೇಶನ್ ಟ್ರಸ್ಟ್ (ಆರ್) ಆಯೋಜಿಸಿದ ರಾಜ್ಯ ಮಟ್ಟದ 2022 ರ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ

    ಕುಮಿಟೆ ಶೈಲಿಯಲ್ಲಿ 8ನೇ ತರಗತಿಯ ಸುಮಿತ್ ಸೆರಾವೊ ದ್ವಿತೀಯ ಸ್ಥಾನ ಪಡೆದರು.7ನೇ ತರಗತಿಯ ಕುಶಿ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದರು.6ನೇ ತರಗತಿಯ ಮಾನ್ವಿ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾ ಶೈಲಿಯಲ್ಲಿ ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಆನ್ ಮರಿಯಾ ಕುಮಿಟೆ ಶೈಲಿಯಲ್ಲಿ ತೃತೀಯ ಹಾಗೂ ಕಾಟಾದಲ್ಲಿ ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಭುವಿ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. 6ನೇ ತರಗತಿಯ ಶಮಂತ್ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು. 5ನೇ ತರಗತಿಯ ಅಂಜು ಮರಿಯಾ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು.5ನೇ ತರಗತಿಯ ಅಯಾನ್ ಕುಮಿಟೆಯಲ್ಲಿ ತೃತೀಯ ಹಾಗೂ ಕಾಟಾದಲ್ಲಿ ಪ್ರಥಮ ಸ್ಥಾನ ಪಡೆದರು. 5ನೇ ತರಗತಿಯ ಸೋನಲ್ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. 4ನೇ ತರಗತಿಯ ಪ್ರಗತಿ ಕುಮಿಟೆಯಲ್ಲಿ ಪ್ರಥಮ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. ಕಟಾದಲ್ಲಿ 4ನೇ ತರಗತಿಯ ಪ್ರಜ್ವಲ್ ತೃತೀಯ ಸ್ಥಾನ ಪಡೆದರು. 4ನೇ ತರಗತಿಯ ಮಾನ್ವಿಕ್ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು. 3ನೇ ತರಗತಿಯ ವಿಹಾನ್ ಕಟಾದಲ್ಲಿ ತೃತೀಯ ಸ್ಥಾನ ಪಡೆದರು.

    ಈ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರ ಶ್ರೀ ಅಶೋಕ್ ಆಚಾರ್ಯ  ತರಬೇತಿ ನೀಡಿದ್ದರು.

ಭಂಡಾರ್ಕಾರ್ಸ್: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಇದರ ಸಹಯೋಗದಲ್ಲಿ ಆವಿಷ್ಕಾರ: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಹೈಯರ್ ಎಜುಕೇಷನ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ್ ಭಟ್ ಮಾತನಾಡಿ ನಾವು ಸಂಸ್ಥೆಗೆ ಋಣಿಯಾಗಿರಬೇಕು. ಸಂಸ್ಥೆ ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ದಾರಿ ಮೂಲಕ ನಮ್ಮನ್ನು ಬೆಳೆಸುತ್ತದೆ. ಹಾಗೆ ದೊರಕುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮಣಿಪಾಲ ಹೈಯರ್ ಎಜುಕೇಷನ್ ನಾ ಎರೊನಾಟಿಕಲ್ ಮತ್ತು ಆಟೊಮೊಬೈಲ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಮಹಮ್ಮದ್ ಜುಬೇರ್ ಮಾತನಾಡಿ ಸೃಜನಶೀಲ ಆವಿಷ್ಕಾರ ಗಳ ಮೂಲಕ ದೇಶವನ್ನು ಕಟ್ಟೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ನ ಸಂಯೋಜಕರಾದ ಡಾ. ಲಲಿತಾದೇವಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಯಜುಷಾ ಸ್ವಾಗತಿಸಿ, ಅಂಜನಾದೇವಿ ಪರಿಚಯಿಸಿ, ಅನಾಜ್ ವಂದಿಸಿದರು.

ಕುಂ. ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ, ರೋಟರಿ ಕ್ಲಬ್ ಕುಂದಾಪುರ ದ. ವತಿಯಿಂದ ಶ್ರೀ ಕೃಷ್ಣ ಸೇವಾ ಕೇಂದ್ರಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರ

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಅಶಕ್ತರಿಗೆ ಆರೈಕೆ ನೀಡುವ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಶಾಂತರಾಮ ಪ್ರಭು, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ರೋ. ಸುರೇಖಾ ಪುರಾಣಿಕ, ಹಾಗೂ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರದ ಡಾ. ಭಾರ್ಗವಿ ಐತಾಳ ಉಪಸ್ಥಿತರಿದ್ದರು.

ಬೈಬಲ್ ಆಟಗಳೊಂದಿಗೆ ಒಂದು ದಿನ ಮಕ್ಕಳ ದಿನಾಚರಣೆ – ವಿನೂತನ ಬೈಬಲ್ ಹೌಸಿ ಹೌಸಿ

ಮಂಗಳೂರು: ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್‌ನ ಮಕ್ಕಳು  ನವೆಂಬರ್ 11  ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿ ಮಕ್ಕಳೆಲ್ಲಒಗ್ಗೂಡ ಸಂತೋಷದಿಂದ ಸಮಯ ಕಳೆದರು.  6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಕಾರ್ಯಕ್ರಮವನ್ನು ಸೃಜನಾತ್ಮಕ ಮತ್ತು ವಿನೂತನ ರೀತಿಯಲ್ಲಿ ಆಯೋಜಿಸಲಾಗಿತ್ತು.

   ಚರ್ಚಿನ ಎಲ್ಲಾ ಮಕ್ಕಳಿಗಾಗಿ  ಬೈಬಲ್ ಆಟಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು. ಚಟುವಟಿಕೆಗಳು ಮತ್ತು ಆಟಗಳ ಮೂಲಕ ಮಕ್ಕಳಿಗೆ ಬೈಬಲ್ ಜ್ನಾನವನ್ನು  ಕಲಿಸಲು,  ಒಂದು ನವೀನ ಮತ್ತು ಪ್ರಾಯೋಗಿಕ ವಿಧಾನದ.

ಬೈಬಲ್ ಹೌಸಿ ಹೌಸಿ (ಫಾ| ಮ್ಯಾಕ್ಸಿಮ್ ಡಿಸೋಜಾ ಅವರ ನಾವೀನ್ಯತೆ), ಬೈಬಲ್ ರಸಪ್ರಶ್ನೆ ಮತ್ತು ಇತರ ಅನೇಕ ಬೈಬಲ್ ಆಟಗಳನ್ನು ಒಳಗೊಂಡಿದ್ದವು.. ಬ್ರದರ್ಸ್ಗಳು ನಡೆಸಿದ ಬೈಬಲ್ ಗೇಮ್ಸ್‌ನಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದನ್ನು ನೋಡುವುದು ಅದ್ಭುತ ಅನುಭವ ಆಗಿದ್ದು, ಬ್ರ. ಲೋಹಿತ್ ಅಜಯ್ ಮಸ್ಕರೇನಸ್, ಬ್ರ. ಗ್ಲಾಡ್ವಿನ್ ಫೆರ್ನಾಂಡಿಸ್ ಮತ್ತು ಶ್ರೀ ರಾಬಿನ್ ವಾಸ್, ಬೈಬಲ್ ಆಟಗಳನ್ನು ಬಹಳ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ಈ ಉದ್ದೇಶಕ್ಕಾಗಿ 35 ಬೈಬಲ್ನ ಆಟಗಳನ್ನು ರಚಿಸಲಾಗಿದೆ.  ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ರುಚಿಕರವಾದ ಊಟವನ್ನು ತಯಾರಿಸಿದ್ದರು. ಚರ್ಚಿನ ಜನತೆ ಇದಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಈ ರೀತಿಯ ಮಕ್ಕಳ ದಿನಾಚರಣೆಯನ್ನು ಮಕ್ಕಳಿಗೆ ಸ್ಮರಣೀಯವನ್ನಾಗಿಸಿತು. ಈ ಸಭೆಯ ಉದ್ದೇಶವು ಮಕ್ಕಳ ದಿನಾಚರಣೆಯನ್ನು ಆಚರಿಸುವುದು ಮಾತ್ರವಲ್ಲದೆ ಮಕ್ಕಳಿಗೆ ಬೈಬಲ್‌ನೊಂದಿಗೆ ಹೆಚ್ಚು ಪರಿಚಿತರಾಗುವಂತೆ ಮಾಡುವುದು ಮತ್ತು ಸೃಜನಶೀಲ ಮತ್ತು ಪರಿಣಾಮಕಾರಿ ರೀತಿಯಲ್ಲಿ ಬೈಬಲ್‌ನ ಮೌಲ್ಯಗಳನ್ನು ಅವರಲ್ಲಿ ಅಳವಡಿಸುವುದು ಉದ್ದೇಶವಾಗಿದ್ದು, ಒಂದು ದಿನದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಚರ್ಚಿನ ಯಾಜಕರು.  ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ಮತ್ತು ಪಾಲನ ಮಂಡಳಿ ಆಯೋಜಿಸಿತ್ತು.

ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರ ಆಚರಣೆ

ಬಸ್ರೂರು: ನ.13:  ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು.  ಪರಮಪ್ರಸಾದಕ್ಕೆ ಭವ್ಯ ಮೆರವಣಿಗೆಯ ಮೂಲಕ ಗೌರವವನ್ನು ಸೂಚಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ.ಫಾ. ಕೆನ್ಯುಟ್‌ ಬಾರ್ಬೋಜ ದಿವ್ಯ ಬಲಿಪೂಜೆ ಅರ್ಪಿಸಿದರು, ಅತಿಥಿ ಧರ್ಮಗುರುಗಳಾಗಿ ವಂ.ಫಾ. ರೋಶನ್‌ ಮಾಬೆನ್‌ ಹಾಗು ಚರ್ಚಿನ ಗುರುಗಳಾದ ವಂ.ಫಾ . ಚಾರ್ಲ್ಸ್‌ ನೊರೊನ್ಹಾ,  ವಂ.ಫಾ. ಚಾರ್ಲ್ಸ್‌ ಲೂಯಿಸ್‌ ಉಪಸ್ಥಿತರಿದ್ದರು.

ಬಸ್ರೂರು: ನ.13:  ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು. ಪರಮಪ್ರಸಾದಕ್ಕೆ ಭವ್ಯ ಮೆರವಣಿಗೆಯ ಮೂಲಕ ಗೌರವವನ್ನು ಸೂಚಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ.ಫಾ. ಕೆನ್ಯುಟ್‌ ಬಾರ್ಬೋಜ ದಿವ್ಯ ಬಲಿಪೂಜೆ ಅರ್ಪಿಸಿದರು, ಅತಿಥಿ ಧರ್ಮಗುರುಗಳಾಗಿ ವಂ.ಫಾ. ರೋಶನ್‌ ಮಾಬೆನ್‌ ಹಾಗು ಚರ್ಚಿನ ಗುರುಗಳಾದ ವಂ.ಫಾ . ಚಾರ್ಲ್ಸ್‌ ನೊರೊನ್ಹಾ,  ವಂ.ಫಾ. ಚಾರ್ಲ್ಸ್‌ ಲೂಯಿಸ್‌ ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಸರಕಾರಿ ಅರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ

ಕುಂದಾಪುರ, ನ.13: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಮಾಡಿದ ಆರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ ನ.13 ರಂದು  ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದ್ದರು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊಇವರಿಗೆಆರೋಗ್ಯ ಕಾರ್ಡನ್ನು ಹಸ್ತಾಂತರಿಸುವ ಮೂಲಕ ಕಾರ್ಡ್ ವಿತರಣಯನ್ನು ಮಾಡಿದರು. ಸುಮಾರು ಇನ್ನೂರು ಜನರಿಗೆ  ಆಯುಶ್ಮಾನ್ ,ಅಭಾ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ,ಖಚಾಂಚಿ ಪ್ರೇಮಾ ಡಿಕುನ್ಹಾ ಮುಂತಾದ ಪದಾಧಿಕಾರಿಗಳು, ಸದಸ್ಯರುಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಉಪಸ್ಥಿತರಿದ್ದರು.ಒನ್ ಲೈನಿನ ಮೂಲಕಕಾರ್ಡುಗಳನ್ನು ನೊಂದಾಯಿಸಲು ಸಹಕರಿಸಿದವರನ್ನು ಗೌರವಿಸಲಾಯಿತು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು.