HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ತೆರಾಲಿಯ ಸಂಭ್ರಮ –ದೇವರ ವಾಕ್ಯ ಆಲಿಸಿ ಪಾಲಿಸಿದವರು ಎಂದಿಗೂ ಸಂತೋಷ ಭರಿತರಾಗುತ್ತಾರೆ – ಫಾ|ವಿನ್ಸೆಂಟ್ ಕುವೆಲ್ಲೊ

ಕುಂದಾಪುರ,.23: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು 22 ದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು.  ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ  
ಈ ಪೂಜಾ ವಿಧಿಯನ್ನು ಬೈಂದೂರು ಇಗರ್ಜಿಯ ವಂ|ಫಾ| ವಿನ್ಸೆಂಟ್ ಕುವೆಲ್ಲೊ ನಡೆಸಿಕೊಟ್ಟು  ಉತ್ತಮ ಮತ್ತು ಸಂತೋಷಭರಿತ ಜೀವನಕ್ಕೆ ದೇವರ ವಾಕ್ಯದ ಪ್ರೇರಣೆ ಅಗತ್ಯಎಂಬ ಧ್ಯೇಯ ವಾಕ್ಯದೊಂದಿಗೆ, ದೇವರ ವಾಕ್ಯಗಳ ಸಂಭ್ರಮ ನಡೆಯಿತು. ಪುಸ್ತಕಗಳಲ್ಲಿ ಅತೀ ಉತ್ತಮ ,ಜ್ನಾನ ಮತ್ತು ಸಂತೋಷ ನೀಡುವ ಪುಸ್ತಕ ಅಂದರೆ  ದೇವರ ವಾಕ್ಯಗಳು ತುಂಬಿರುವ ಬೈಬಲ್ ಪುಸ್ತಕ. ಮೇರಿ ಮಾತೆ ಯೇಸುವಿನ ವಾಕ್ಯಗಳನ್ನು ಕೇಳಲು ಅವರ ಪಾದ ಥಳದಲ್ಲಿ ಇರುತಿದ್ದಳು, ಅದರಿಂದ ಅವಳು ಸಂತೋಷಭರಿತಳಾಗಿದ್ದಳು. ಮೇರಿ ಮಾತೆಯ ಹಾಗೆ ನಡೆದು, ನಾವು ಸಂತೋಷ ಭರಿತರಾಗೋಣಬೈಬಲನಲ್ಲಿ ನಮಗೆ ನಮ್ಮ ಜೀವಿತದಲ್ಲಿ  ಅಗತ್ಯವಿರುವ ಎಲ್ಲಾ ಸಂಗತಿಗಳು ಇವೆ ಉತ್ತಮ ಸಂದೇಶಗಳಿವೆ, ಬೈಬಲ್ ಪುಸ್ತಕ ಜ್ನಾದ ಭಂಡಾರಬೈಬಲಿನ ಎರಡು ಕವರ್ ಪುಟಗಳ ನಡುವೆ ಇರುವ ಪುಟಗಳಲ್ಲಿ ಇಡೀ ವಿಶ್ವಕ್ಕೆ ವಿಮುಕ್ತಿಗೊಳಿಸುವ ಶಕ್ತಿಯಿದೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೇಳಿದ್ದಾರೆ, ಅತ್ಯಂತ ಕೆಟ್ಟ ಜನರು ಕೂಡ ದೇವರ ವಾಕ್ಯಗಳಿಂದ ಪ್ರೇರಣೆ ಪಡೆದು ಪರಿವರ್ತನೆಗೊಂಡಿದ್ದಾರೆ. ಅಗರ್ಭ ಶ್ರೀಮಂತರು ತಮ್ಮ ಆಸ್ತಿ ಪಾಸ್ತಿ ದಾನ ಮಾಡಿ, ತ್ಯಜಿಸಿ ಯೇಸು ಕ್ರಿಸ್ತರನ್ನು ಹಿಂಬಾಲಿಸಿ ಸಂತರಾಗಿದ್ದಾರೆ, ಹರಿಯುವ ನೀರಿನ ಸಮೀಪ ಇರುವ ಮರಗಳು, ಹಸಿರಾಗಿದ್ದು ಅವು ಎಂದಿಗೂ ಬಾಡುವುದಿಲ್ಲ, ಹಾಗೆ  ದೇವರ ವಾಕ್ಯ ಆಲಿಸಿ ಪಾಲಿಸುವರು ಎಂದಿಗೂ ಬಾಡದೆ, ಅವರು ಸಂತೋಷ ಭರಿತರಾಗುತ್ತಾರೆಎಂದು ಅವರು ಸಂದೇಶ ನೀಡಿದರು.

    ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ, ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್. ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಭಾವೈಕತೆ ಮೆರೆದರು.

Establishment Day – The Apostolic Carmel Congregation in India

The tiny sapling planted by Venerable Mother Veronica, the founder of the Apostolic Carmel Congregation in the year 1870 has grown as a mighty tree. She was ever attentive and attuned to the will of God and fulfilled her desires with heroic faith, generosity and a spirt of joyful surrender. St Agnes PU College conducted various activities from 13November 2022 to 19 November 2022 to remember and celebrate the life of Venerable Mother Veronica.

To help students get a deeper understanding of her saintly life, Mother Veronica ‘photos and videos on her life was displayed on the television projector. A digital painting competition, poetry writing competition and quiz on Mother Veronica was held for all the students. Students decorated the notice boards creatively with Venerable Mother Veronica’s gems and life.

Students formed a human chain displaying the number 200to mark the opening year of Bicentennial Celebration of the Birth of Mother Veronica (1823-2023).

To mark the 116th death anniversary of Venerable Mother Veronica, on 19th November. Holy Mass was celebrated and Mother Veronica’ s portrait was adorned with a garland with much devotion and reverence. A sapling was planted by the Principal, Vice Principal ,staff and students and a documentary ‘Life in Letters’ on her life was shown to the students.

The varied activities conducted helped students to understand and imbibe the values and virtues of Venerable Mother Veronica.

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಪ್ರಯುಕ್ತ ವಿಶೇಷ ಪೂಜೆ

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯ್ಕೆಯಾಗಿ ಜೆಡಿಎಸ್‍ನ ಮಂಜುಳಮ್ಮ ಚುನಾಯಿತರಾಗಿದ್ದಾರೆ

ಶ್ರೀನಿವಾಸಪುರ: ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯ್ಕೆಯಾಗಿ ಜೆಡಿಎಸ್‍ನ ಮಂಜುಳಮ್ಮ ಚುನಾಯಿತರಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಕ್ರಿಷ್ಣಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ಮಂಜುಳಮ್ಮ 11 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರತ್ನಮ್ಮ 6 ಮತ ಪಡೆದು ಪರಾಭವ ಅನುಭವಿಸಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಶಿವಕುಮಾರ್, ಪಿಡಿಒ ಎಸ್.ವಿನೋದ ಇದ್ದರು.
ವಿಜಯೋತ್ಸವ: ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ರೆಡ್ಡಿ, ಮುಖಂಡರಾದ ಸಿ.ಆರ್.ಟಿ.ವೆಂಕಟರಾಮರೆಡ್ಡಿ, ಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ಚಂದ್ರಶೇಖರ್, ಶ್ರೀರಾಮರೆಡ್ಡಿ, ರಾಮಕೃಷ್ಣಾರೆಡ್ಡಿ, ಸುರೇಶ್ ಬಾಬು, ಬಚ್ಚಿರೆಡ್ಡಿ, ನಾಗರಾಜ್ ಮತ್ತಿತರರು ಇದ್ದರು.

ಶ್ರೀನಿವಾಸಪುರ: ಡಾ|ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಸಮಂಜರಿ ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟನೆ

ಶ್ರೀನಿವಾಸಪುರ: ಇಲ್ಲಿ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ರಾತ್ರಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟಿಸಿದರು.
ತುಮಕೂರು ಕಲಾವಿದರು ಹಾಗೂ ಜಿಜಿ ವೇಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಚಳಿಯನ್ನು ಲೆಕ್ಕಿಸದೆ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪುನೀತ್ ರಾಜ್ ಕುಮಾರ್ ಚಿತ್ರಗಳ ಹಾಡುಗಳು ಹಾಗೂ ಮಿಮಿಕ್ರಿ ಮೂಲಕ ಕಲಾವಿದರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಈ ಸಂದರ್ಭದಲ್ಲಿ ಸಾಹಿತಿ, ಕವಿ, ಕಲಾವಿದರು ಹಾಗೂ ಗಣ್ಯ ವ್ಯಕ್ತಿಳನ್ನು ಸನ್ಮಾನಿಸಿ, ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಮುಖಂಡರಾದ ಎಂ.ಎಲ್.ಸತೀಶ್, ಎಂ.ಮುನಿರೆಡ್ಡಿ, ಡಾ. ಜಿ.ಎಸ್.ಶ್ರೀನಿವಾಸ್, ಡಾ. ಉಮಾಶಂಕರ್, ಬಳಗದ ಪಧಾಧಿಕಾರಿಗಳಾದ ಎಸ್.ವಿ.ಚಂದ್ರಶೇಖರ್, ಶ್ರವಣ್, ಪಿ.ಶ್ರೀನಿವಾಸಲು, ಡಿ.ಎಸ್.ಕಾರ್ತಿಕರ್, ಎನ್.ಮುನಿರಾಜು, ವಿ.ಮಂಜುನಾಥ್, ಎಸ್.ವೇದಾಂತ್, ಎಸ್.ಬಾಬು, ಮದನ್ ಮೋಹನ್, ನಾರಾಯನಮೂರ್ತಿ, ಯಾಹ್ಯಾಖಾನ್, ಶ್ರೀನಿವಾಸ, ಹೈದರವಲ್ಲಿ, ಹರೀಶ್, ಕೆ.ರಾಮಣ್ಣ, ಜಿ.ಆರ್.ರೆಡ್ಡಪ್ಪ, ಬಿ.ಎಂ.ಪ್ರವೀಣ್ ಕುಮಾರ್, ಎಸ್.ವಿ.ಕಾರ್ತಿಕ್ ಇದ್ದರು.

ಪರಿಸರ ಸ್ನೇಹಿ ವಸ್ತು ಪ್ರದರ್ಶನ ಉದ್ಘಾಟನೆ

ಕುಂದಾಪುರ: ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇದ್ದಾಗ ಮಾತ್ರ ಪರಿಸರ ಸ್ನೇಹಿ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದೆ. ಮೊದಲು ನಾವು ಬದಲಾಗಬೇಕು. ಪರಿಸರ ಪೂರಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದೆ ಎಂದು ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಹೇಳಿದರು.
ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಿಬಿಎ ವಿದ್ಯಾಥಿ೯ಗಳಿಂದ ಕಾಲೇಜಿನ ಸಭಾಭವನದಲ್ಲಿ ಜರುಗಿದ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪರಿಸರವನ್ನು ಮಾಲಿನ್ಯ ಮತ್ತು ನಾಶಪಡಿಸುವಂತಹ ಕೆಲಸಗಳು ನಡೆಯುತ್ತಿವೆ. ಪ್ರಕೃತಿ ದತ್ತವಾದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಮತ್ತು ನೈಸಗಿ೯ಕ ವಸ್ತುಗಳನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆ ಎನ್ನುವುದು ಕೇವಲ ಪ್ರಮಾಣ ಪತ್ರಗಳನ್ನು ಉತ್ಪಾದಿಸುವ ಪ್ಯಾಕ್ಟರಿಯಾಗಬಾರದು. ವಿದ್ಯಾಥಿ೯ಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬಿತ್ತಿಸಲು ಹಾಗೂ ಪ್ರೇರಣೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪರಿಸರ ಸ್ನೇಹಿ ಆಟಿಕೆ ಸಾಮಾಗ್ರಿಗಳಾದ ಚೆನ್ನೆಮಣೆ, ಮಕ್ಕಳ ಮರದ ಆಟಿಕೆಗಳು, ನಗುಗೊಂಬೆ, ಅಲಂಕಾರಿಕ ವಸ್ತುಗಳಾದ ಹಾಸುಕಲ್ಲಿನ ದೀಪ, ಬಿದಿರುಕಟ್ಟಿಗೆಯ ಉತ್ಪನಗಳಾದ ಕಳಸಿಗೆ, ಹೂಬುಟ್ಟಿ, ಕಡಗೋಲು, ಮರದ ಚಮಚ, ಬಟ್ಟೆ ಚೀಲ, ಗಾಜಿನ ಲೋಟ ಸೇರಿದಂತೆ ದಿನೋಪಯೋಗಿ ವಸ್ತುಗಳು, ಸಿರಿಧಾನ್ಯ ಉತ್ಪನ್ನಗಳು, ಮಣ್ಣಿನ ಮಡಿಕೆ, ಲೋಟ, ತಟ್ಟೆ, ಪೇಪರ್ ಕಪ್, ಹಲಸಿನ ಕೊಟ್ಟೆ, ಪೇಪರ್ ಪೆನ್ ಸ್ಟ್ಯಾಂಡ್ ಹೀಗೆ ಪರಿಸರ ಸ್ನೇಹಿ ಜೀವನ ಶೈಲಿಯನ್ನು ತಿಳಿಸುವ ವಸ್ತು ಪ್ರದರ್ಶನ ಗಮನ ಸೆಳೆಯಿತು. ವಿದ್ಯುತ್ ಬೈಕ್ ಮತ್ತು ಸೈಕಲ್ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಅರಿವು ಮೂಡಿಸಿದ ವಿದ್ಯಾಥಿ೯ಗಳ ಶ್ರಮ ಮತ್ತು ಹುಮ್ಮಸ್ಸು ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಡಾ.ಉಷಾದೇವಿ ಜೆ.ಎಸ್, ಉಪನ್ಯಾಸಕರಾದ ಶ್ರೀಧರ್, ವನಮಾಲ, ಧನ್ಯ, ಗಣೇಶ್ ಪೈ, ರಾಮರಾಯ ಆಚಾರ್ಯ, ನಾಗರಾಜ್, ವೆಂಕಟರಾಮ್ ಭಟ್, ರೋಹಿಣಿ, ಸುಚಿತ್ರ, ಮುನಿರತ್ನ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಮುಖ್ಯಸ್ಥೆ ಚೇತನ ಎಂ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.