ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಗಾಂಧೀ ಜಯಂತಿ ಹಾಗೂ ಸ್ವಚ್ಛತಾ ಇ-ಸೇವೆಯ ಅಭಿಯಾನದ ಅಂಗವಾಗಿ ಪಟ್ಟಣದ ಸರ್ಕಾರಿ ಶಾಲೆಗಳ ಮಕ್ಕಳಿಂದ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಕಲಾಕೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕಚೇರಿ ವ್ಯವಸ್ಥಾಪಕ ಜಿ.ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜು, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಬಿಐಆರ್ಟಿಇ ಅಧಿಕಾರಿ ಜಿ.ವಿ.ಚಂದ್ರಪ್ಪ, ಪುರಸಭೆ ಕಚೇರಿಯ ಸಿಬ್ಬಂದಿ ಹಾಗೂ ಸರ್ಕಾರಿ ಶಾಲೆಗಳ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
HOLY ROSARY CHURCH, KUNDAPUR – 450 th JUBILEE SOUVENIR 2021
ಸಿ.ಎಂ. ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಿ ಆ ಮೂಲಕ ರಾಜಕಾರಣಿಗಳಿಗೆ ಮಾದರಿಯಾಗಬೇಕು-ವೈ.ಎ. ನಾರಾಯಣಸ್ವಾಮಿ
ಶ್ರೀನಿವಾಸಪುರ : ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸಿ,ಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಆ ಮೂಲಕ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾದ ರಾಜಕಾರಣ ನಡೆಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಗ್ರಹಿಸಿದರು.
ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ. ರಾಜಕೀಯ ಜೀವನದ ಕೊನೆಯಲ್ಲಿ ಗೌರವವನ್ನು ಇಟ್ಟುಕೊಂಡು ರಾಜೀನಾಮೆ ಕೊಡಬೇಕು ಎನ್ನುವುದು ನಮ್ಮ ಆಸೆ .ಸಿದ್ದರಾಮಯ್ಯ ನವರು ತನಿಖೆ ಆಗುವವರೆಗೂ ನಾನು ಈ ಸೀಟಿನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರೆ ಅವರಿಗೆ ಸಿಗುವ ಗೌರವ ಯಾರಿಗೂ ಸಿಗುವುದಿಲ್ಲ ರಾಜಕೀಯದಲ್ಲಿ ನೈತಿಕತೆ ಬಹಳ ಮುಖ್ಯ. ರಾಮಕೃಷ್ಣ ಹೆಗ್ಗಡೆ ಕಾಲದಿಂದ ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬರಬೇಕು ಎಂದು ಹೇಳಿ ಸಮಾಜವಾದದ ವ್ಯವಸ್ಥೆಯಿಂದ ಆಚೆ ಬಂದಿರುವವರು. ಅಂತಹ ಸಿದ್ದರಾಮಯ್ಯ ಸ್ವಜನ ಪಕ್ಷಪಾತಕ್ಕೆ ಬಲಿಯಾಗಿ ಭ್ರಷ್ಟಾಚಾರದ ಕೂಪದಲ್ಲಿ ಕೂಡಿರುವುದು ದುರಂತವೇ ಸರಿ! ಹೈಕೋರ್ಟ್ ತನಿಖೆಗೆ ಒಳಪಡಿಸಿದಾಗ ಸಿದ್ದರಾಮಯ್ಯನವರು ಯಾಕೇ ರಾಜೀನಾಮೆ ಕೊಟ್ಟಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ? ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು , ರಾಮಕೃಷ್ಣ ಹೆಗ್ಗಡೆ ರವರ ಗರಡಿಯಲ್ಲಿ ಬೆಳದಿರುವ ಸಿದ್ದರಾಮಯ್ಯ ನವರು ರಾಜೀನಾಮೆ ನೀಡದೆ ಏಕೆ ಈ ಮುಂಡುತನವನ್ನ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕರ್ಮಕಾಂಡದ ಪರಮವಾದಿ ಎದ್ದು ಕಾಣುತ್ತಿದೆ. ಅವರ ಆಪ್ತವಲಯವೇ ದಾರಿತಪ್ಪಿಸುತ್ತಿದೆ. ಇದು ಆಪ್ತವಲಯಕ್ಕೂ ಸಹ ಗೊತ್ತಿದೆ. ಸಿದ್ದರಾಮಯ್ಯನವರನ್ನು ಆ ಬ್ರಹ್ಮಬಂದರೂ ಸಹ ಈ ಕೇಸ್ನಲ್ಲಿ ಬಚಾವ್ ಮಾಡಲು ಸಾಧ್ಯವಿಲ್ಲ ಎಂದು ನುಡಿದರು. ಅಪ್ತವಲಯವು ಮುಖ್ಯಮಂತ್ರಿಗಳಿಗೆ ಬಹುಪರಾಕ್ ಮಾಡುವುದರ ಜೊತೆಗೆ ಅವರ ಗೌರವವನ್ನ ಇನ್ನು ಕಡಿಮೆ ಮಾಡುತ್ತಿದ್ದಾರೆ. ಎಂದು ಹೀಯಾಲಿಸಿ , ಇದೆನ್ನೆಲ್ಲಾ ಬದಿಗೊತ್ತಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಶನಿವಾರ ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡು ಬಣದಲ್ಲಿ ನಡೆದ ಜಗಳವು ತಾರಕ್ಕಕ್ಕೆ ಏರಿ, ಕೈ ಕೈ ಮಿಸಲಾಯಿಸಿಕೊಳ್ಳವ ಪರಿಸ್ಥಿತಿಯ ಕಂಡು ಬಂದಿದ್ದು, ಈ ಘಟನೆಯು ದುಖಃಖಾರವಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಸಂಸ್ಕøತಿ ತಿಳಿಸುತ್ತದೆ. ಕಳೆದ 6 ವರ್ಷಗಳಿಗಂದಲೂ ಪಕ್ಷದ ಒಳ ಜಗಳವು ಪಕ್ಷದ ಮನೆಯು ಒಡೆದು ಭಾಗಗಳಾಗಿವೆ. ದಿಕ್ಕು ದಿಶೆಯಲ್ಲದೆ, ಅವರ ಅವರೇ ಜಗಳಾಗಿ ಎರಡು ಗುಂಪುಗಳಾಗಿ ಬೇರ್ಪಟ್ಟಿದೆ. ಮುಂದೆ ಯಾವ ರೀತಿಯಲ್ಲಿ ಹೋಗುತ್ತದೆ ನೀವೆ ಕಾದುನೋಡಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಅಂತರಿಕ ಒಳಜಗಳ ಜಾಸ್ತಿ ಆಗಿದೆ. ಸ್ವಂತ ಬಾರದಿಂದ ಕುಸಿಯುವುದು ಈ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ಜನತೆ ದುಸ್ಥಿರವಾಗಿದ್ದಾರೆ. ಜನರು ಬದುಕು ಬರುಡಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರವರು ಎತ್ತಿನಹೊಳೆ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಾ ಮೊದಲ ಹಂತಕ್ಕೆ ನಾವು ನೀರು ಜನತೆ ನೀರು ಕೊಡುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರಕ್ಕೆ ನೀರು ಯಾವಾಗ ಹರಿಸುತ್ತಾರೆ ಎಂಬ ಪ್ರಶ್ನೆ ನನ್ನನ್ನು ಹಾಗೂ ಈ ಭಾಗದ ಜನರಲ್ಲಿ ಕಾಡುತ್ತಿದೆ ಎಂದರು.
ಈ ಸಮಯದಲ್ಲಿ ತೂಪಲ್ಲಿ ಮಧು, ಗುಂಡಮನತ್ತ ಶ್ರೀಧರ್ ಇನ್ನೀತರರು ಉಪಸ್ಥಿತರಿದ್ದರು.
ಸೇವಾ ಅವಧಿಯಲ್ಲಿ ಮಾದ ಕೆಲಸಗಳನ್ನು ಮಾಡಿದರೆ ಜನರು ನೆನಸುತ್ತಾರೆ, ಅಂತಹವರ ಸಾಲಿನಲ್ಲಿ ಎನ್. ನಾರಾಯಣಸ್ವಾಮಿ ನಿಲ್ಲುತ್ತಾರೆ – ಎಇ ಶ್ರಾವಣಿ.ಎಸ್
ಶ್ರೀನಿವಾಸಪುರ : ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನಸುತ್ತಾರೆ. ಅಂತಹವರ ಸಾಲಿನಲ್ಲಿ ಎನ್. ನಾರಾಯಣಸ್ವಾಮಿ ರವರು ನಿಲ್ಲುತ್ತಾರೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಶ್ರಾವಣಿ.ಎಸ್ ಹೇಳಿದರು.
ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎನ್. ನಾರಾಯಣಸ್ವಾಮಿ ರವರಿಗೆ ಬೀಳ್ಕೋೀಡಿಗೆ ಸನ್ಮಾನ ಮಾಡಿ ಮಾತನಾಡಿದ ಎಇ ಸರ್ಕಾರದ ಸೇವೆಯನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ನಿವೃತ್ತಿ ಎಂಬುದು ಸಹಜ ಇದರ ಮಧ್ಯದಲ್ಲಿ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ಜನ ನೆನಸಿಕೊಳ್ಳುತ್ತಾರೆ. ನಾನು ಈ ಕಛೇರಿಗೆ ಬಂದು 5-6 ತಿಂಗಳು ಆಯಿತು ಆಗಿನಿಂದ ನಮ್ಮ ಎಇಇ ರವರನ್ನು ನೋಡುತ್ತಿದ್ದೇವೆ. ಕೆಲಸದಲ್ಲಿ ಯಾವುದೇ ಅಡತಡೆಗಳು ಬಂದರೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರೂ ಅವರ ಮಾರ್ಗದರ್ಶನ ನಮಗೆ ತುಂಬಾ ಉಪಯುಕ್ತವಾಗಿದೆ ಇಂದು ನಿವೃತ್ತಿ ಹೊಂದುತ್ತಿರುವ ಇವರಿಗೆ ದೇವರು ಆಯಾರೋಗ್ಯ ಭಾಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಸಹಾಯಕ ಅಭಿಯಂತರ ಇಲಾಖೆಯ ರಸಾಯನಿಕ ತಜ್ಞ ಶುಭ ಮಾತನಾಡಿ ನಾರಾಯಣಸ್ವಾಮಿರವರು ಇಲಾಖೆಯಲ್ಲಿ ಉತ್ತಮ ರೀತಿಯ ಸೇವೆಯನ್ನು ಮಾಡಿಕೊಂಡು ಇವರು ನಿವೃತ್ತಿ ಹೊಂದುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅವರು ಸಲ್ಲಿಸಿದ ಕಾಲಾವಧಿಯಲ್ಲಿ ಒಳ್ಳೆಯ ಮಾರ್ಗದರ್ಶರಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಕೆಲಸದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ತಿದ್ದಿ ಈ ರೀತಿ ಕೆಲಸವನ್ನು ಮಾಡಬೇಕೆಂದು ಹೇಳುತ್ತಿದ್ದರು. ಅವರ ಸೇವಾವಧಿಯಲ್ಲಿ ನಮಗೆ ತುಂಬಾ ಸಹಕಾರವನ್ನು ನೀಡುತ್ತಿದ್ದರು ಎಂದು ಕೊಂಡಾಡಿದರು.
ಎ.ವಿ ಸಂತೋಷ್ ಕುಮಾರ್ ಮಾತನಾಡಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬಾವಿಸಿ ಕರ್ತವ್ಯದಲ್ಲಿ ಪ್ರಾಮಾಣಿಕತೆಯೊಂದಿಗೆ ಇಲಾಖೆಯ ಬಳಗದ ಜೊತೆಗೆ ಹೊಂದಾಣಿಕೆ ಪ್ರೀತಿ ವಿಶ್ವಾಸ ಉತ್ತಮ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿದ ಅವರ ಇತರರಿಗೆ ಮಾದರಿಯಾಗಿದ್ದಾರೆ ಪರಿಪೂರ್ಣ ಕರ್ತವ್ಯ ನಿರ್ವಹಿಸಿದ ಅವರ ಸತತ ಪರಿಶ್ರಮದ ಸೇವೆ ಶ್ಲಾಘನೀಯವಾಗಿದೆ ಅಲ್ಲದೆ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಎನ್. ನಾರಾಯಣಸ್ವಾಮಿ ಇಲಾಖೆಯಲ್ಲಿ ಕೆಲಸದ ಒತ್ತಡದಲ್ಲಿ ನಾನು ಏನಾದರೂ ದುಬಾರಿಯಿಂದ ಮಾತನಾಡಿ ನಿಮ್ಮ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮಿಸಿ ನಾನು ಸರ್ಕಾರಿ ಸೇವೆಯಲ್ಲ 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸವನ್ನು ಮಾಡಿಕೊಂಡು ಹೋಗಿದ್ದೇನೆ. ಎಲ್ಲಾ ಗುತ್ತಿಗೆದಾರರ ಮತ್ತು ನಮ್ಮ ಸಿಬ್ಬಂದಿ ಸಹಕಾರದಿಂದ ನಾನು ಉತ್ಸಾಹದಿಂದ ಕೆಲಸ ಮಾಡಲು ಸಹಕಾರಿಯಾಗಿದೆ. ನನ್ನ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆಂಬ ಆತ್ಮ ಸಾಕ್ಷಿ ನನಗಿದೆ ಎಲ್ಲರೂ ಸಹಕಾರ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ತಿಳಿಸಿದರು.
ಈ ಸಮಯದಲ್ಲಿ ಎ ಇ ಟಿ.ಎಂ. ನವೀನ್ ಕುಮಾರ್, ಜೆಜೆಎಂ ಅಧಿಕಾರಿ ಶಿವಕುಮಾರ್, ಡಿಇಓ ಕೆ.ಎನ್. ಶ್ರೀನಾಥ್, ಗಣೇಶ್, ಶಶಿ, ಕಛೇರಿಯ ಸಹಾಯಕ ರೆಡ್ಡೆಪ್ಪ, ಗುತ್ತಿಗೆದಾರರಾದ ಅಂಕಿರೆಡ್ಡಿ, ಬಿ.ವಿ. ಕೃಷ್ಣಾರೆಡ್ಡಿ, ಡಿ.ಆರ್.ಮಂಜುನಾಥರೆಡ್ಡಿ, ಅರಮಾಕಲಹಳ್ಳಿ ಎನ್.ವಿ. ವೆಂಕಟರಾಮರೆಡ್ಡಿ, ಶೀಗಹಳ್ಳಿ ಗೋವಿಂದರೆಡ್ಡಿ, ನಿವೃತ್ತ ಅಧಿಕಾರಿಗಳಾದ ಕೆ.ಎಸ್ ರಾಮಲಿಂಗಾರೆಡ್ಡಿ, ಬಿ. ಸುಬ್ಬರೆಡ್ಡಿ, ಅಪ್ಪಿರೆಡ್ಡಿ, ಚಿಂತಾಮಣಿ ಕೋನಪ್ಪರೆಡ್ಡಿ, ಇನ್ನೀತರರು ಉಪಸ್ಥಿತರಿದ್ದರು.
ಶ್ರೀನಿವಾಸಪುರ : ಗೌನಿಪಲ್ಲಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಸುಸೂತ್ರವಾಗಿ ನಡೆಯಿತು
ಶ್ರೀನಿವಾಸಪುರ : ಗೌನಿಪಲ್ಲಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಸಿ. ಈರಪ್ಪರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗೌನಿಪಲ್ಲಿಯ ದೊಡ್ಡ ಪ್ರಮಾಣದ ವ್ಯವಸಾಯ ಸೇವ ಸಹಕಾರ ಸಂಘಕ್ಕೆ ಸಂಬಂದಿಸಿದ ಬಿ.ಕೊತ್ತಕೋಟ ರಸ್ತೆಯಲ್ಲಿರುವ 24 ವಾಣಿಜ್ಯ ಮಳಿಗೆಗಳ ಹರಾಜು ಪಕ್ರಿಯೆ ಸುಸೂತ್ರವಾಗಿ ನಡೆಯಿತು. ಹರಾಜಿನಲ್ಲಿ ಅಂಗಡಿ ಮಳಿಗೆಯನ್ನು ಹರಾಜಿಗೆ ಪಡೆದವರು ಸಂಘದ ಷರತ್ತು / ಸೂಚನೆಗಳಿಗೆ ಬದ್ದರಾಗಿ ನಡೆದುಕೊಳ್ಳತಕ್ಕದ್ದು. ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 34 ಜನ ಬಿಡ್ದಾರರು ಭಾಗವಹಿಸಿ, ಐವತ್ತು ಸಾವಿರ ಠೇವಣಿ ಕಟ್ಟಿ ಹರಾಜು ಪಕ್ರಿಯೆಯಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಮಳಿಗೆಯ 7 ನಂಬರ್ನ ಮಳಿಗೆಯನ್ನ ರಘುನಂದನ್ರವರು 3ಲಕ್ಷ ರೂಗೆ ಅತಿ ಹೆಚ್ಚು ಹರಾಜುನ್ನು ಕೂಗಿ 3 ವರ್ಷಕ್ಕೆ ಮಳಿಗೆಯನ್ನ ತಮ್ಮದಾಗಿಸಿಕೊಂಡರು.
24 ಅಂಗಡಿಗಳ ನೆಲ ಮಹಡಿ ಪ್ರತಿ ತಿಂಗಳು ಆರುಸಾವಿರ, 1 ನೇ ಮಹಡಿ ನಾಲ್ಕು ಸಾವಿರ ಬಾಡಿಗೆ ನಿಗದಿಪಡಿಸಲಾಗಿದ್ದು, ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನ ಸಂಬಂದಪಟ್ಟ ಅಂಗಡಿ ಮಾಲೀಕರೆ ಪಾವತಿಸತಕ್ಕದ್ದು ಎಂದು ತಿಳಿಸಿದರು. ಒಟ್ಟು 24 ವಾಣಿಜ್ಯ ಮಳಿಗೆಗೆಳ ಪೈಕಿ 12 ಮಳಿಗೆಗೆಳು ಬಿಡ್ದಾರರು ಹರಾಜಿನಲ್ಲಿ ಪಡೆದುಕೊಂಡರು ಉಳಿದ 12 ಅಂಗಡಿಗಳ ಬಿಡ್ದಾರರು ಹರಾಜಿನಲ್ಲಿ ಕೂಗದೆ ಹಾಗಯೇ ಉಳಿದಿದೆ ಎಂದು ಮಾಹಿತಿ ನೀಡಿದರು.
ಈ ಸಮಯದಲ್ಲಿ ನೋಡಲ್ ಅಧಿಕಾರಿ ಅಬೀದ್ಹುಸೇನ್, ಗೌನಿಪಲ್ಲಿ ಎಲ್ಎಸ್ಸಿಎಸ್ನ ಸಂಘದ ಅಧ್ಯಕ್ಷ ಶಂಕರ್ಪ್ರಸಾದ್, ನಿರ್ದೇಶಕರಾದ ಜಿ.ಆರ್.ಸತ್ಯನಾರಾಯಣ, ಕೋಡಿಪಲ್ಲಿ ಕೆ.ವಿ.ಸುಬ್ಬಿರೆಡ್ಡಿ, ಕೆ.ಆರ್.ಮೋಹನ್ಕುಮಾರ್, ಹೆಚ್.ರಹಮತ್ತುಲ್ಲಾ, ರತ್ನಪ್ಪ, ಪೂಜಾರಿ ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯ ಬಕ್ಷುಸಾಬ್, ಶ್ರೀನಿವಾಸಪು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಹಾಗೂ ಬಿಡ್ದಾರರು ಹಾಜರಿದ್ದರು.
ಕುಂದಾಪ್ರ ಕನ್ನಡ ಹಾಡುಗಾರಿಕೆ : ಬಹುಮಾನ ವಿತರಣೆಭಾಷೆ, ಸಂಸ್ಕøತಿ ಅಧ್ಯಯನಕ್ಕೂ ಆದ್ಯತೆ ನೀಡಿ – ಕೆ. ಆರ್. ನಾಯ್ಕ
“ವಿದ್ಯಾರ್ಥಿಗಳಿಂದು ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಒತ್ತಡ ಬಹಳ ಇರುತ್ತದೆ. ಆದರೆ ಪಾಠದ ಅಧ್ಯಯನದೊಂದಿಗೆ ಪಾಠೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆ. ನಮ್ಮ ಭಾಷೆ, ಸಂಸ್ಕøತಿ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದರೊಂದಿಗೆ ಆದಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನುಭವದ ವಿಕಾಸ ಮಾಡಿಕೊಳ್ಳಬೇಕು. ಕುಂದಾಪ್ರ ಕನ್ನಡದಲ್ಲಿ ಕವನ ಬರೆದ ಹಾಗೂ ಹಾಡುಗಳನ್ನು ಹಾಡಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.” ಎಂದು ಖ್ಯಾತ ಸಾಮಾಜಿಕ ಧುರೀಣ, ಸುಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರಾದ ಕಾ. ಆರ್. ನಾಯ್ಕ ಹೇಳಿದರು.
ಭಂಡಾರ್ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಹಾಗೂ ‘ಕುಂದಪ್ರಭ’ ಸಂಸ್ಥೆ ಆಯೋಜಿಸಿದ ಕುಂದಾಪ್ರ ಕನ್ನಡ ಸ್ವರಚಿತ ಕವನ ವಾಚನ, ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಪದವಿ, ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಬಹುಮಾನ ವಿತರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಶ್ವಸ್ಥರಾದ ರಾಜೇಂದ್ರ ತೋಳಾರ್ ಸ್ಫೂರ್ತಿ ತುಂಬಿದರು. ಭಂಡಾರ್ಕಾರ್ಸ್ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ, ‘ಭಾರತದ ಉತ್ತಮ ಸಾಧಕರಾಗಲು ವಿದ್ಯಾರ್ಥಿಗಳು ಜ್ಞಾನ ವೃದ್ಧಿ ಮಾಡಿಕೊಳ್ಳುವುದು, ತಮ್ಮ ಪ್ರತಿಭೆಗಳನ್ನು ಬೆಳಗಿಸಲು ಇತರರೊಂದಿಗೆ ಬೆರೆತು ಅರಿತುಕೊಳ್ಳುವುದು ಬಹಳ ಮುಖ್ಯ.’ ಎಂದು ಹೇಳಿದರು.
‘ಕುಂದಪ್ರಭ’ ಸಂಸ್ಥೆಯ ಯು. ಎಸ್. ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಮಲತಾ ಉಪಸ್ಥಿತರಿದ್ದರು. ರೇಡಿಯೋ ಕುಂದಾಪ್ರ 89.6 ಸಂಯೋಜಕಿ ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು. ಯುಕ್ತಾ ಹೊಳ್ಳ ಕುಂದಾಪ್ರ ಕನ್ನಡ ಹಾಡು ಹಾಡಿದರು. ಹಂದಕುಂದ ಸೋಮಶೇಖರ ಶೆಟ್ಟಿ ವಂದಿಸಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷರವರಿಂದ ಕೋಲಾರ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಕುರಿತು ಆಯ್ಕೆ ಸಮಿತಿ ಸಭೆ
ಕೋಲಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ 2024-25ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಗಳಡಿಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಆಯ್ಕೆ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷರವರು ನಡೆಸಿದರು.
ಈ ಸಂದರ್ಭದಲ್ಲಿ ಕೆ.ಜಿ.ಎಫ್ ಆರಕ್ಷಕ ಅಧೀಕ್ಷಕರು, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳಿ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಶಿರೀನ್ ತಾಜ್ , ನೂರ್ ಆಯೇಶಾ , ಸಲೀಂ ಬಾಬು, ಆರ್ ಟಿ ಓ ಅಧಿಕಾರಿ , ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಕರ್ನಾಟಕ ಗೋವಾ ಪ್ರಾಂತ್ಯದ ಹೋಲಿ ಟ್ರಿನಿಟಿಯ ಸಹೋದರ ಗ್ರೆಗೊರಿ ಮೆನೆಜೆಸ್ ದೈವಾಧಿನಾದರು / Brother Gregory Menezes of the Holy Trinity – Karnataka Goa Province passes away
ಮಂಗಳೂರು, ಅಕ್ಟೋಬರ್ 1,2024: ಗೋವಾ, ಮಂಗಳೂರು ಮತ್ತು ಮೈಸೂರು ಮಠಗಳಲ್ಲಿ ಹಿರಿಯ ಸಹೋದರ ಪಯೋನಿಯರ್, ಸಹೋದರ ಗ್ರೆಗೊರಿ
ಕರ್ನಾಟಕ ಗೋವಾ ಪ್ರಾಂತ್ಯದ ಹೋಲಿ ಟ್ರಿನಿಟಿ ಪ್ರಾಂತ್ಯದ ಮೆನೆಜೆಸ್ ಸೆಪ್ಟೆಂಬರ್ 29ರಂದು ನಿಧನರಾದರು. ಅಕ್ಟೋಬರ್ 1ರಂದು ಮಂಗಳೂರಿನ ಶಿಶು ಜೀಸಸ್ ದೇವಾಲಯದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರು ತಮ್ಮ ವಿನಮ್ರ, ಸರಳ ಮತ್ತು ಸಂತ ಜೀವನಕ್ಕೆ ಹೆಸರುವಾಸಿಯಾಗಿದ್ದರು.
ಮಂಗಳೂರಿನ ಕುಲಶೇಖರ ಮೂಲದ ಸಹೋದರ ಗ್ರೆಗೊರಿ ಮೆನೆಜೆಸ್ ಅವರು “ಗಿಗಾ ಬ್ರದರ್” ಎಂದು ಪ್ರಸಿದ್ಧರಾಗಿದ್ದರು. ಅವರ ರಚನೆಯ ನಂತರ, ಅವರು ಗೋವಾ, ಮೈಸೂರು ಮತ್ತು ಮಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಅವರು ಕರ್ನಾಟಕ ಗೋವಾ ಪ್ರಾಂತ್ಯದ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ನ ಪ್ರವರ್ತಕರಲ್ಲಿ ಒಬ್ಬರಾಗಿದ್ದರು. ಅವರು ಮಠಗಳ ಸುತ್ತಲಿನ ವಿಶಾಲವಾದ ಕೃಷಿ ಭೂಮಿಯನ್ನು ರೂಪಿಸುವಲ್ಲಿ ತಮ್ಮ ಹಸಿರು ಹಸ್ತಕ್ಕೆ ಹೆಸರುವಾಸಿಯಾಗಿದ್ದರು. ಅವರ ಸರಳ ಜೀವನ ಮತ್ತು ಸಮರ್ಪಿತ ಸೇವೆ ಗಮನಾರ್ಹವಾಗಿವೆ. ಕರ್ನಾಟಕ ಗೋವಾ ಪ್ರಾಂತ್ಯದ ಕಾರ್ಮೈಟ್ ಫಾದರ್ಸ್ ಮತ್ತು ಬ್ರದರ್ಸ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಬುದ್ಧಿವಂತಿಕೆ ಮತ್ತು ಶ್ರೀಮಂತ ಅನುಭವದ ವ್ಯಕ್ತಿಯಾಗಿದ್ದರು. ಗೋವಾದಲ್ಲಿ ಬೆಲ್ಜಿಯಂ ಸಮುದಾಯದಲ್ಲಿ ಸೇವೆ ಸಲ್ಲಿಸಿದ ನಂತರ ಅವರು ಕರ್ನಾಟಕ ಗೋವಾ ಪ್ರಾಂತ್ಯದ ಆಕಾರವನ್ನು ಕಂಡರು.
ಅವರ ಕೊನೆಯ ದಿನಗಳನ್ನು ಶಿಶು ಜೀಸಸ್ ದೇವಾಲಯದಲ್ಲಿ ಕಳೆದರು. ಆತ ತನ್ನ ನೋವು ಮತ್ತು ಯಾತನೆಗಳ ಬಗ್ಗೆ ಎಂದಿಗೂ ದೂರು ನೀಡಲಿಲ್ಲ. ಅವರು ಪ್ರಾರ್ಥನೆ ಮತ್ತು ತಪಸ್ಸಿನ ಸಂತ ಜೀವನವನ್ನು ನಡೆಸಿದರು. ಸೆಪ್ಟೆಂಬರ್ 29ರಂದು ಪ್ರಧಾನ ದೇವದೂತರ ಹಬ್ಬದಂದು ಅವರು ಕೊನೆಯುಸಿರೆಳೆದರು. ಇಂದು ಲಿಸಿಯಕ್ಸ್ನ ಸೇಂಟ್ ಥೆರೆಸೆಯ ಹಬ್ಬದಂದು ಅವರಿಗೆ ಅಂತ್ಯಕ್ರಿಯೆ ನಡೆಯಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
Brother Gregory Menezes of the Holy Trinity – Karnataka Goa Province passes away
Mangaluru, Oct 1, 2024 : Senior most Brother Pioneer in Goa, Mangalore and Mysore Monasteries, Brother Gregory Menezes of the Holy Trinity Province, Karnataka Goa Province passed away on 29 September. He will be laid to rest on 1st October at Infant Jesus Shrine, Mangalore. He was 95 years old. He was known for his humble, simple and saintly life.
Brother Gregory Menezes hailing from Kulshekar, Mangalore was well known as “Giga Brother.” After his formation, he served in Goa, Mysore and Mangalore. He was one of the pioneers of the Karnataka Goa Province of the Discalced Carmelites. He was well known for his green hand in shaping the vast farm lands surrounding the monasteries. His simple living and dedicated service are noteworthy. He was much loved by the Carmeite Fathers and Brothers of the Karnataka Goa Province. He was a man of wisdom and rich experience. Having served in the Belgian community in Goa he saw the shaping of the Karnataka Goa Province.
His last days were spent at the Infant Jesus Shrine. He never complained of his pain and suffering. He lived a saintly life of prayer and austerity. He breathed his last on the feast of Archangels on 29th September. He will be laid to rest today, on the feast of St Therese of Lisieux. May his soul rest in peace.
ಐಸಿವೈಎಂ ಉಡುಪಿಯ ಧರ್ಮಪ್ರಾಂತ್ಯದ ವತಿಯಿಂದ ಉದ್ಯಾವರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನಲ್ಲಿ ‘ಯುವ ದಬಾಜೊ 2024’ / ‘Yuva Dabajo 2024’ at St. Francis Xavier Church, Udyavara by ICYM Udupi Diocese
ಉಡುಪಿ, 29ನೇ ಸೆಪ್ಟೆಂಬರ್ 2024 – ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (ICYM), ಉಡುಪಿಯ ಧರ್ಮಪ್ರಾಂತ್ಯದ ವತಿಯಿಂದ ಉದ್ಯಾವರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನಲ್ಲಿ ‘ಯುವ ದಬಾಜೊ 2024’ ಎಂಬ ಯುವ ಸಮಾವೇಶವು ಅತ್ಯಂತ ಯಶಸ್ವಿಯಾಯಿತು. ಈ ವಾರ್ಷಿಕ ಕಾರ್ಯಕ್ರಮವು ಧರ್ಮಪ್ರಾಂತ್ಯದ ವಿವಿಧ ಧರ್ಮಕೇಂದ್ರದ ಯುವಕರನ್ನು ಒಂದು ದಿನದ ಪ್ರತಿಭಾ ಪ್ರದರ್ಶನಕ್ಕಾಗಿ ಮತ್ತು ಯುವಕರಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಲು ಒಟ್ಟುಗೂಡಿಸಿತು .
ಉಡುಪಿ ವಲಯದ ಪ್ರಧಾನ ಧರ್ಮಗುರು ಅ।ವಂ।ಫಾ.ಚಾರ್ಲ್ಸ್ ಮೆನೇಜಸ್ ಅವರು ಬಲಿದಾನಾವನ್ನು ಅರ್ಪಿಸಿ ಉದ್ಘಾಟನೆಗೆ ಚಾಲನೆ ನೀಡಿದರು. . ಅವರ ಧರ್ಮೋಪದೇಶದಲ್ಲಿ, ಅವರು ತಮ್ಮ ಸಮುದಾಯಗಳಲ್ಲಿ ನಂಬಿಕೆ ಮತ್ತು ನಾಯಕತ್ವದ ಆಧಾರ ಸ್ತಂಭಗಳಾಗಿರಲು ಯುವಕರನ್ನು ಪ್ರೋತ್ಸಾಹಿಸಿದರು. ಅವರ ಮಾತುಗಳು ದಿನದ ಆಧ್ಯಾತ್ಮಿಕ ಸ್ವರವನ್ನು ಹೊಂದಿತ್ತು, ಧರ್ಮಕೇಂದ್ರದಲ್ಲಿ ಯುವಕರ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಬಲಿದಾನದ ನಂತರ, ಅತ್ಯಾಕರ್ಷಕ ಘಟಕ ಮಟ್ಟದ ಸ್ಪರ್ಧೆಗಳ ಸರಣಿ ನಡೆಯಿತು. ಈ ಸ್ಪರ್ಧೆಗಳನ್ನು ಸೃಜನಶೀಲತೆ ಮತ್ತು ಟೀಮ್ವರ್ಕ್ ಅನ್ನು ಹೈಲೈಟ್ ಮಾಡಲು ವಿನ್ಯಾಸಗೊಳಿಸಲಾಗಿತ್ತು, ಈ ಕೆಳಗಿನ ಈವೆಂಟ್ಗಳನ್ನು ಬೆಳಿಗ್ಗೆ ಪೂರ್ತಿ ಆಯೋಜಿಸಲಾಗಿದೆ: ಕ್ರಿಯೇಟಿವ್ ವಾಕ್, ಫ್ಯೂಚರಿಸ್ಟಿಕ್ ಆರ್ಟ್, ಫ್ಲವರ್ ಕಾರ್ಪೆಟ್ ಮತ್ತು ಬ್ರೈನ್ ವೇವ್.
ಮಧ್ಯಾಹ್ನ ಬಹು ನಿರೀಕ್ಷಿತ ಬ್ಯಾಟಲ್ ಆಫ್ ಬ್ಯಾಂಡ್ ಪ್ರಮುಖ ಹಂತವನ್ನು ಪಡೆದುಕೊಂಡಿತು. ವಿವಿಧ ವಲಯಗಳಿಂದ ಹೆಚ್ಚಿನ ಪ್ರಭಲ ಪ್ರದರ್ಶನಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದವು, ಡಯಾಸಿಸ್ನೊಳಗಿನ ಅಸಾಧಾರಣ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದವು.
ತೀವ್ರ ಪೈಪೋಟಿಯ ನಂತರ ಕಣಜಾರ್ ಘಟಕವು ಬಹುವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪೆರಂಪಳ್ಳಿ ಘಟಕವು ಘಟಕವಾರು ಸ್ಪರ್ಧೆಗಳಲ್ಲಿ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ಬ್ಯಾಟಲ್ ಆಫ್ ಬ್ಯಾಂಡ್ಸ್ನ ಅಗ್ರ ಗೌರವಗಳು ಕಲ್ಯಾಣಪುರದ ಡೀನರಿ – ಪ್ರಥಮ ಸ್ಥಾನ, ಉಡುಪಿ ಡೀನರಿ – ದ್ವಿತೀಯ ಸ್ಥಾನ ಮತ್ತು ಕಾರ್ಕಳ ಡನರಿ – ತೃತೀಯ ಸ್ಥಾನ.
ಸಮಾರಂಭದ ಅಧ್ಯಕ್ಷರಾಗಿ ಉದ್ಯಾವರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಪ್ಯಾರಿಷ್ ಅರ್ಚಕರಾದ ವಂದನೀಯ ಫಾದರ್ ಅನಿಲ್ ಡಿಸೋಜ, ಮುಖ್ಯ ಅತಿಥಿಗಳಾಗಿ ಅಡ್ವ ರಾಯನ್ ಫೆರ್ನಾಂಡಿಸ್ ಮತ್ತು ಇತರ ಗಣ್ಯರಾದ ರೆ.ಫಾ. ಚಾರ್ಲ್ಸ್ ಮೆನೇಜಸ್, ಉಡುಪಿ ಡೀನ್ ಡೀನ್, ಐಸಿವೈಎಂ ಕರ್ನಾಟಕ ವಲಯದ ಅಧ್ಯಕ್ಷೆ ವಿಲೀನಾ ಗೊನ್ಸಾಲ್ವಿಸ್, ಪ್ಯಾರಿಷ್ ಕೌನ್ಸಿಲ್ ಉಪಾಧ್ಯಕ್ಷೆ ಶ್ರೀ ಲಾರೆನ್ಸ್ ಡಿಸಾ, ಉಡುಪಿ ಧರ್ಮಪ್ರಾಂತ್ಯದ ಯುವ ಸಮನ್ವಯಾಧಿಕಾರಿ ಶ್ರೀಮತಿ ಪ್ರಿಯಾ ಫುರ್ಟಾಡೊ, ರೆ.ಫಾ. ಸ್ಟೀವನ್ ಫೆರ್ನಾಂಡಿಸ್ ಐಸಿವೈಎಂ ಉಡುಪಿ ಧರ್ಮಾಧ್ಯಕ್ಷ ಮಸ್ಕಾರ್ ಗೋಡ್ಸ್, ಅಧ್ಯಕ್ಷರು. , ಉಡುಪಿ ಧರ್ಮಪ್ರಾಂತ್ಯ. ICYM ಕರ್ನಾಟಕ ಪ್ರದೇಶದ ಅಧ್ಯಕ್ಷೆ ವಿಲೀನಾ ಗೊನ್ಸಾಲ್ವಿಸ್ ಕೆಲವು ಸ್ಪೂರ್ತಿದಾಯಕ ಆಲೋಚನೆಗಳನ್ನು ಮುಂದಿಟ್ಟರು.
ಮೌಲ್ಯಾಧಾರಿತ ಕಾರ್ಯಕ್ರಮದ ಸಂದರ್ಭದಲ್ಲಿ ಯುವ ಉಪಕ್ರಮಗಳನ್ನು ಮತ್ತಷ್ಟು ಬೆಂಬಲಿಸಲು ಗಣ್ಯರಿಂದ ಯುವ ಆಯೋಗದ ಈವೆಂಟ್ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಅಡ್ವಕೇಟ್ ರಾಯನ್ ಫೆರ್ನಾಂಡಿಸ್ ಅವರು ಸ್ಪೂರ್ತಿದಾಯಕ ಭಾಷಣ ಮಾಡಿದರು, ಯುವಕರು ಚರ್ಚ್ ಮತ್ತು ಸಮಾಜದಲ್ಲಿ ಸಕ್ರಿಯ ಪಾತ್ರಗಳನ್ನು ವಹಿಸುವ ಮಹತ್ವವನ್ನು ಎತ್ತಿ ತೋರಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ರೆ.ಫಾ. ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂನ ನಿರ್ದೇಶಕರಾದ ಫಾ.ಸ್ಟೀವನ್ ಅವರು ಬಹುಮಾನ ವಿತರಣಾ ಸಮಾರಂಭದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಗೌರವಿಸಲಾಯಿತು. ಏಕತೆ ಮತ್ತು ಆತ್ಮದ ಸಂಕೇತವಾದ ಡಯೋಸಿಸನ್ ಐಸಿವೈಎಂ ಗೀತೆಯ ಉನ್ನತ ಟಿಪ್ಪಣಿಯಲ್ಲಿ ದಿನವು ಕೊನೆಗೊಂಡಿತು.
ಯುವ ದಬಾಜೊ 2024 ಒಂದು ಅದ್ಭುತ ಯಶಸ್ಸನ್ನು ಕಂಡಿತು, ನಂಬಿಕೆ, ಸಹಭಾಗಿತ್ವ ಮತ್ತು ವಿನೋದದಿಂದ ತುಂಬಿದ ದಿನಕ್ಕಾಗಿ ಉಡುಪಿ ಡಯಾಸಿಸ್ನ ರೋಮಾಂಚಕ ಯುವಕರನ್ನು ಒಟ್ಟುಗೂಡಿಸಿತು. ಈ ಘಟನೆಯು ಉಡುಪಿಯ ಯುವ ಚರ್ಚ್ನ ಚೈತನ್ಯ ಮತ್ತು ಶಕ್ತಿಗೆ ನಿಜವಾದ ಸಾಕ್ಷಿಯಾಗಿದೆ.
‘Yuva Dabajo 2024’ at St. Francis Xavier Church, Udyavara by ICYM Udupi Diocese
Udupi, 29th September 2024 – Indian Catholic Youth Movement (ICYM), Diocese of Udupi held a highly successful Diocesan Youth Convention, ‘Yuva Dabazo 2024’, at St. Francis Xavier Church, Udyavara. This annual event brought together youth from various parishes across the diocese for a day of talent showcases and have a great bond among youths.
The day began with a solemn Inaugural Mass, celebrated by Rev. Fr Charles Menezes, Dean of Udupi Deanery. In his homily, he encouraged the youth to be pillars of faith and leadership within their communities. His words set the spiritual tone for the day, underscoring the importance of youth engagement in the church’s mission.
Following the Mass, a series of exciting unit-level competitions took place. These contests were designed to highlight creativity and teamwork, with the following events hosted throughout the morning: Creative Walk, Futuristic Art, Flower Carpet and Brain Wave.
In the afternoon, the much-anticipated Battle of Bands took centre stage. The high-energy performances from various deaneries created a festive atmosphere, showcasing the exceptional musical talent within the diocese.
After intense competition, Kanajar Unit emerged as the overall champions, having excelled across multiple categories, while Perampalli Unit secured runner-up position in unit-wise competitions. The top honours for Battle of Bands were Kallianpur Deanery – First Place, Udupi Deanery – Second Place and Karkala Deanery – Third Place.
The day winded up with Valedictory Program which was graced by Rev. Fr Anil D’souza, Parish Priest of St. Francis Xavier Church Udyavara as the President of the event, Adv Rayan Fernandes who was the Chief Guest along with other dignitaries Rev. Fr Charles Menezes, Dean of Udupi Deanery, ICYM Karnataka Region President Ms Vileena Gonsalves, Parish Council Vice President Mr Lawerence Dsa, Youth Coordinator of Diocese of Udupi Mrs Priya Furtado, Rev. Fr Steven Fernandes ICYM Director Diocese of Udupi and Mr Godwin Mascarenhas, President, Diocese of Udupi. ICYM Karnataka Region President Ms Vileena Gonsalves enlightened us with a few inspiring thoughts.
During Valedictory Program Youth Commission Event Calendar was launched by the dignitaries to further support youth initiatives. Adv Rayan Fernandes delivered an inspiring speech, highlighting the importance of youth taking active roles in both church and society.
In his presidential address, Rev. Fr Anil D’souza commended the youth for their enthusiasm and participation, encouraging them to continue being beacons of hope. The event concluded with a prize distribution ceremony, officiated by Fr Steven, Director of ICYM, Diocese of Udupi, where the winners of various competitions were honored. The day ended on a high note of the Diocesan ICYM Anthem, a symbol of unity and spirit.
Yuva Dabazo 2024 was a resounding success, bringing together the vibrant youth of Diocese of Udupi for a day filled with faith, fellowship, and fun. The event was a true testament to the vitality and energy of the young church in Udupi.
Report by : Peter Archibald Futardo
ಭಂಡಾರ್ಕಾರ್ಸ್ ಪದವಿ ಕಾಲೇಜ್ – ಭಾರತೀಯ ಸೇನೆಗೆ ಲೆಪ್ಟಿನೆಂಟ್ ಆಗಿ ಆಯ್ಕೆಗೊಂಡ ಭಾರತ್ ಬಾಬು ದೇವಾಡಿಗರಿಗೆ ಸನ್ಮಾನ
ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಭಾರತೀಯ ಸೇನೆಗೆ ಲೆಪ್ಟಿನೆಂಟ್ ಆಗಿ ಆಯ್ಕೆಗೊಂಡ ಭಾರತ್ ಬಾಬು ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಭರತ್ ಬಾಬು ದೇವಾಡಿಗ ಅವರು ಎನ್.ಸಿ.ಸಿ ವಿಶೇಷ ಆಯ್ಕೆ ಪರೀಕ್ಷೆ ಮೂಲಕ ಭಾರತೀಯ ಸೇನೆಗೆ ಲೆಪ್ಟಿನೆಂಟ್ ಆಗಿ ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯ. ಅವರು ಈ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ, ಕಾಲೇಜಿನ ಎನ್. ಸಿ.ಸಿ. ಆರ್ಮಿ ಕ್ಯಾಪ್ಟನ್ ಅಂಜನ್ ಕುಮಾರ್ ಎ.ಎಲ್. ನೇವಿ ವಿಭಾಗದ ಸಬ್.ಲೆಫ್ಟಿನೆಂಟ್ ಶರಣ್ ಎಸ್.ಜೆ. ಉಪಸ್ಥಿತರಿದ್ದರು.