HOLY ROSARY CHURCH, KUNDAPUR – 450 th JUBILEE SOUVENIR 2021

ಕೋಲಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 : 25 ನಾಮಪತ್ರಗಳ ಸಲ್ಲಿಕೆ-ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ

ಕರ್ನಾಟಕ ಸರ್ಕಾರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣ, ಕೋಲಾರ-563101.
ದೂರವಾಣಿ: 08152-222077
E-Mail ID – vaarthailakhekolar@gmail.com

                                                           ದಿನಾಂಕ: 04-04-2024

ಪತ್ರಿಕಾ ಪ್ರಕಟಣೆ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 : 25 ನಾಮಪತ್ರಗಳ ಸಲ್ಲಿಕೆ
ಕೋಲಾರ, ಏಪ್ರಿಲ್ 04 (ಕರ್ನಾಟಕ ವಾರ್ತೆ): ನಂ.14-14
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ (04-04-2024) ಇಲ್ಲಿಯವರೆಗೆ 25 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ.
28-ಕೋಲಾರ (ಪ.ಜಾ) ಲೋಕಸಭಾ ಕ್ಷೇತ್ರದಿಂದ 2024ರ ಸಾರ್ವತ್ರಿಕ ಚುನಾವಣೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೌತಮ್ ಕೆ.ವಿ. ಅವರು ಮೂರು ನಾಮಪತ್ರಗಳು ಹಾಗೂ ಜನತಾದಳ (ಜಾತ್ಯತೀತ) ಅಭ್ಯರ್ಥಿಯಾಗಿ ಎಂ. ಮಲ್ಲೇಶ ಬಾಬು ಅವರು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಆರ್. ರಂಜಿತ್ ಕುಮಾರ್, ಎಂ. ವೆಂಕಟಸ್ವಾಮಿ, ಸುಮನ್ ಹೆಚ್.ಎನ್, ಬಿ.ಇ. ವಿಶ್ವನಾಥ್, ಕೆ.ಎಚ್. ಮಧುಸೂದನ್, ಎಂ. ಮುನಿಗಂಗಪ್ಪ, ಆರ್. ರಾಜೇಂದ್ರ, ಶ್ರೀನಿವಾಸ ಪಿ., ಎ.ಟಿ. ಕ್ರಿಷ್ಣನ್, ಎಸ್.ಎನ್ ನಾರಾಯಣಸ್ವಾಮಿ. ವಿ., ಕ್ರಿಷ್ಣಯ್ಯ ಎನ್., ಚಂದ್ರಶೇಖರ ಎಂ., ಜಿ. ಲಲಿತಾ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ- ಮಹೇಶ್. ಎ.ವಿ, ಉತ್ತಮ ಪ್ರಜಾಕೀಯ ಪಾರ್ಟಿ- ದೇವರಾಜ. ಎ., ಸೊಷ್ಯಲಿಸ್ಟ್ ಪಾರ್ಟಿ (ಇಂಡಿಯಾ)- ಡಿ. ಗೋಪಾಲಕೃಷ್ಣ, ಬಹುಜನ ಸಮಾಜ ಪಾರ್ಟಿ-ಸುರೇಶ್. ಎಸ್.ಬಿ, ಎನ್.ಎಂ.ಕೆ ಪಕ್ಷದ ಅಭ್ಯರ್ಥಿ ಎಲ್. ಬಾಬು, ಆರ್.ಪಿ.ಐ ಪಕ್ಷ- ಎನ್.ಜೆ. ನರಸಿಂಹಮೂರ್ತಿ, ಲೋಕಶಕ್ತಿ ಪಕ್ಷ- ಎಂ.ಎಸ್. ಬದರಿನಾರಯಣ, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- (ಕರ್ನಾಟಕ) ಪಕ್ಷದ ತಿಮ್ಮರಾಯಪ್ಪ, ದಿಲ್ಲಿ ಜನತಾ ಪಾರ್ಟಿ- ಕೆ.ಆರ್. ದೇವರಾಜ, ವಿ.ಸಿ.ಕೆ (ವಿಡುದಲೈ ಚಿರತೆಗಳ್ ಕಚ್ಚಿ)- ಎಂ. ವೇಣುಗೋಪಾಲ ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟಾರೆ ಇದುವರೆಗೆ 25 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ https://affidavit.eci.gov.in ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ ಮತ್ತು ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ನಾಮಪತ್ರದ ನಕಲು ಪ್ರತಿ ಮತ್ತು ಅಫಿಡವಿಟ್‍ನ್ನು ಪ್ರಚುರ ಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ. ನಾಮಪತ್ರ ಸ್ವೀಕರಿಸುವ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಂಕರ ವಣಿಕ್ಯಾಳ ಅವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ರೋಡ್ ಶೋ

ಕಾರಿನಲ್ಲಿ ಸುಟ್ಟು ಕರಕಲಾದ ಮೂವರ ಶವಗಳು ! ಕಡಿಮೆ ದರದಲ್ಲಿ ಚಿನ್ನ ಸಿಗುತ್ತೆ ಅಂದು, ಜೀವ ಕಳೆದುಕೊಂಡ್ರಾ !!

ಕುಂದಾಪುರ ಎಚ್.ಎಮ್.ಎಮ್. ಮತ್ತು ವಿ. ಕೆ. ಆರ್. ಶಾಲೆ ಪ್ಯಾಟಿ ಮಕ್ಕಳ್ ಹಳ್ಳಿಟೂರ್ – ಬೇಸಿಗೆ ಶಿಬಿರ ಉದ್ಘಾಟನೆ

ಲೋಕಸಭೆ ಚುನಾವಣೆ ಎದುರಿಸಲು 25 ಗ್ಯಾರಂಟಿ ಸಾರಿದ ಕಾಂಗ್ರೆಸ್ -ಗ್ಯಾರಂಟಿಗಳ ವಿವರ ಹೀಗಿದೆ !!

  • ಶಿಕ್ಷಣ ಪಡೆದ ಯುವಜನತೆಗೆ ವಾರ್ಷಿಕ 1 ಲಕ್ಷ ರೂ. ಅಪ್ರೆಂಟಿಸ್‌ಶಿಪ್‌
  • 30 ಲಕ್ಷ ಉದ್ಯೋಗ ಸೃಷ್ಟಿ
  • ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
  • ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
  • ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್‌ ಫಂಡ್(Fund).
  • ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು
  • ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ
  • ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ
  • ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು
  • ಮಹಿಳಾ ಕಾರ್ಮಿಕರ ಹಾಸ್ಟೆಲ್‌ಗಳನ್ನು ಎರಡು ಪಟ್ಟು ಹೆಚ್ಚಿಸುವುದು.
  • ಎಂ.ಎಸ್.ಸ್ವಾಮಿನಾಥನ್‌ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು
  • ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ
  • ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು
  • ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು
  • ಕೃಷಿ ಸಲಕರಣೆಗಳಿಗೆ ಜಿಎಸ್‌ಟಿಯಿಂದ ಮುಕ್ತಿ.
  • ನರೇಗಾ ದಿನಗೂಲಿ ಕಾರ್ಮಕರ ದಿನಗೂಲಿ 400 ರೂ.ಗೆ ಏರಿಕೆ
  • ಪ್ರತಿಯೊಬ್ಬರಿಗೂ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ
  • ನರೇಗಾ ರೀತಿ ನಗರಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ
  • ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ
  • ಸರ್ಕಾರಿ ನೌಕರರಿಗೆ ರಕ್ಷಣೆ, ಪಾರದರ್ಶಕತೆಗೆ ಆದ್ಯತೆ.
  • ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ದೇಶಾದ್ಯಂತ ಜಾತಿ ಗಣತಿ
  • ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಶೇ.50ರ ಮತಿ ತೆಗೆದುಹಾಕಲಾಗುವುದು
  • ಎಸ್‌ಸಿ, ಎಸ್‌ಟಿಯವರಿಗೆ ವಿಶೇಷ ಬಜೆಟ್‌ ಮಂಡನೆ
  • ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಜ್ಯಗಳನ್ನು 1 ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು
  • ಎಸ್‌ಟಿ ಸಮುದಾಯದವರು ಜಾಸ್ತಿ ಇರುವ ಕಡೆ ಪಂಚಾಯತ್‌ ಎಕ್ಸ್‌ಟೆನ್ಶನ್‌ ಟು ಶೆಡ್ಯೂಲ್ಡ್‌ ಏರಿಯಾಸ್‌ ಆಕ್ಟ್‌ (PESA) ವಿಸ್ತರಣೆ.

ಕುಂದಾಪುರ: ದಿ.ಬಾಬಾ ಆಚಾರ್ ಅವರ ಪುತ್ರ ಮೆಕ್ಯಾನಿಕ್ ಸುಧಾಕರ್ ಆಚಾರ್ ನಿಧನ

Celebration of Perpetual Profession at Bethany Provincialate, Vamanjoor / ವಾಮಂಜೂರಿನ ಬೆಥನಿ ಪ್ರಾಂತೀಯದಲ್ಲಿ ಶಾಶ್ವತ ವೃತ್ತಿಯ ಆಚರಣೆ

“ಮಾನಸ ಜ್ಯೋತಿ ವಿಶೇಷ ಶಾಲೆ”ಗೆ ಸೋಲಾರ್ ವಿದ್ಯುಚಕ್ತಿ ಕೊಡುಗೆ

ಎಪ್ರಿಲ್ 17 ರಂದು ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ