ಮುಳಬಾಗಿಲು, ಫೆ-5, ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹುರಳಿ, ರಾಗಿ, ಒಕ್ಕಣಿ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ, ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಮುಂದೆ ಹುರಳಿ ಸಮೇತ ಹೋರಾಟ ಮಾಡಿ, ಮನವಿ ನೀಡಿ, ಒತ್ತಾಯಿಸಲಾಯಿತು.ಕೋಟ್ಯಾಂತರ ರೂಪಾಯಿ ಅನುದಾನಗಳಲ್ಲಿ ಅಭಿವೃದ್ದಿ ಪಡಿಸಿರುವ ರಸ್ತೆಗಳಲ್ಲಿ ಮಾಡುತ್ತಿರುವ ಹುರಳಿ, ರಾಗಿ, ಒಕ್ಕಣಿಯಿಂದ ಆಗುತ್ತಿರುವ ಅನಾಹುತಗಳಿಗೆ ಜವಾಬ್ದಾರಿ ಯಾರು?. ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯೇ ಇಲ್ಲವೆ, ಕಣ್ಮರೆಯಾಗಿರುವ ಹಳ್ಳಿಗಳಲ್ಲಿನ ಕಣಗಳ […]

Read More

ಕೋಲಾರ:- ಹೃದಯವಂತರಿಗೆ ಮಾತ್ರ ಹೆಣ್ಣು ಮಕ್ಕಳ ಸಂಕಷ್ಟ-ಸಂವೇದನೆಗಳು ಅರ್ಥವಾಗುತ್ತದೆ ಎಂದು ಅಬಕಾರಿ ನಿರೀಕ್ಷಕಿ ಸುಮ ಅವರು ತಿಳಿಸಿದರು.ಅವರು ಬೆಂಗಳೂರಿನ ನೀಡುವ ಹೃದಯ ಪೌಂಡೇಶನ್ ವತಿಯಿಂದ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಅನುದಾನಿತ ಚೌಡೇಶ್ವರಿ ಪ್ರೌಢಶಾಲೆಯ ನವೀಕೃತ ಕೊಠಡಿಯಲ್ಲಿ ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಿಸಿರುವ ಪಿಂಕ್‍ರೂಂ ಸಮರ್ಪಣೆ, ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಅದರ ನಿರ್ವಹಣೆ, ವಿಶ್ರಾಂತಿ ಹಾಸಿಗೆಗಳು, ಪ್ಯಾಡ್‍ಬರ್ನಿಂಗ್ ಯಂತ್ರ ಹಾಗೂ ದೇಸಿ ಮತ್ತು ವಿದೇಶಿ ಶೈಲಿಯ ಶೌಚಾಲಯ ಸೌಕರ್ಯ ಸ್ಥಳ ಹಾಗೂ 600 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‍ಗಳ […]

Read More

ಕುಂದಾಪುರ :”ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಜರಗಿ ಹೋಗುವ ಭಯಾನಕತೆಗೆ ತೆರ ಬೇಕಾದ ದಂಡ ಮಾತ್ರ ಅಪಾರ.ಹೆತ್ತವರಿಗೆ ಮಗನಿಲ್ಲ, ಹೆಂಡತಿಗೆ ಗಂಡನಿಲ್ಲ, ತಂಗಿಗೆ ಅಣ್ಣನಿಲ್ಲ, ಮಕ್ಕಳಿಗೆ ಅಪ್ಪನಿಲ್ಲ ಕಟ್ಟ ಕಡೆಗೆ ಒಂದು ಸಂಸಾರವೇ ಕಣ್ಣೀರಿನಲ್ಲಿ ಬದುಕನ್ನು ಸವೆಸ ಬೇಕಾದ ದುರಂತವಿದು.ಇಂದು ಮಾನವನ ನಿರ್ಲಕ್ಷ ದಿಂದಾಗಿಯೇ ಭಾರತದಲ್ಲಿ ವರ್ಷವೊಂದಕ್ಕೆ ಸರಿಸುಮಾರು 1.5 ಲಕ್ಷದಿಂದ 2ಲಕ್ಷದ ತನಕ ರಸ್ತೆ ಅಪಘಾತ ಗಳು ಜರಗುತ್ತದೆ. ಅದರಲ್ಲಿ ಪ್ರಾಣ ಚೆಲ್ಲುವರ ಸಂಖ್ಯೆ ಅನಾಥವಾಗುವ ಕುಟುಂಬಗಳನ್ನು ಗಮನಿಸಿದರೆ ರಸ್ತೆ ಆಪಘಾತಗಳ ತಿವ್ರತೆ ಅರ್ಥವಾಗುತ್ತದೆ. ಕರಾರುವಾಕ್ಕಾಗಿ ಚಾಲನಾ […]

Read More

ಶ್ರೀನಿವಾಸಪುರ :ವಕೀಲರ ಸಂಘದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಕೀಲ ರಮೇಶ್‌ಬಾಬು ಮಾತನಾಡಿ ತಾಲೂಕಿನಲ್ಲಿ ಒಟ್ಟು ೬೪ ಮತಗಳಿದ್ದು ಅದರಲ್ಲಿ ೬೩ ಮತಗಳು ಚಲಾವಣೆಯಾಗಿದೆ ಅಧ್ಯಕ್ಷ ಸ್ಥಾನಕ್ಕೆ ಎನ್.ವಿ.ಜಯರಾಮೇಗೌಡ ಪ್ರತಿ ಸ್ಪರ್ಧಿಯಾಗಿ ಟಿ. ವೆಂಕಟೇಶ್   ನಾಮಪತ್ರ ಸಲ್ಲಿಸಿದ್ದರು. ಎನ್.ವಿ.ಜಯರಾಮೇಗೌಡ ೩೮ ಪ್ರತಿ ಸ್ಪರ್ಧಿ ಟಿ.ವೆಂಕಟೇಶ್ ೨೫ ಮತಗಳನ್ನು ಪಡೆದಿದ್ದು , ಎನ್.ವಿ.ಜಯರಾಮೇಗೌಡ ಜಯ ಶೀಲರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಗೆಂಗಿರೆಡ್ಡಿ ೨೫ ಪ್ರತಿಸ್ಪರ್ಧಿ ಸಿ.ಸೌಭಾಗ್ಯ ೩೭ ಮತಗಳು ಪಡೆದಿದ್ದು, ಸಿ.ಸೌಭಾಗ್ಯ ಜಯಶೀಲರಾಗಿದ್ದಾರೆ.  ಕಾರ್ಯದರ್ಶಿ ಸ್ಥಾನಕ್ಕೆ ವಿ.ಅರ್ಜುನ್ ೩೦ ಮತಗಳು, ಪ್ರತಿ ಸ್ಫರ್ಧಿ […]

Read More

ಕೋಲಾರ,ಫೆ.05: ಕೋಲಾರ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯನ್ನು ಫೆಬ್ರವರಿ 23 ರಂದು ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯಲ್ಲಿ ಕರೆದು, ಸಂಪಾದಕರ ಸಮಸ್ಯೆಗಳ ಸಾಧಕ ಬಾದಕಗಳನ್ನು ಚರ್ಚಿಸಿ, ಸರ್ಕಾರದ ಗಮನಕ್ಕೆ ತರುವ ಮೂಲಕ ಮುಂದಿನ ದಿನಗಳಲ್ಲಿ ಬಗೆಹರಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಪ್ರಾದೇಶಿಕ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಕಾರ್ಯನಿರತ ಸಂಪಾದಕರ ಸಂಘಕ್ಕೆ […]

Read More

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಫೆಬ್ರವರಿ 4ರಂದು ಮಿಲಾಗ್ರಿಸ್ ಕಾಲೇಜು ಆಫ್ ನರ್ಸಿಂಗ್ ನ ಪ್ರಥಮ ವರ್ಷದ‌‌ 35 ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು . ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್‌ ದಿನ ವನ್ನು ಮನುಷ್ಯನನ್ನು ಶತ್ರುವಾಗಿ ಕಾಡುವ ಕ್ಯಾನ್ಸರ್‌ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ . ವಿದ್ಯಾರ್ಥಿಗಳು ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಕಾರಣಗಳು , ಅದರ‌ ಎಚ್ಚರಿಕೆಯ ಚಿಹ್ನೆಗಳು ಹಾಗೂ ಅದನ್ನು ನಿಯಂತ್ರಿಸುವ ಕುರಿತು […]

Read More

ಉಡುಪಿ: ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಎರಡು ಜುಬಿಲಿ ಮಹೋತ್ಸವಕ್ಕೆ ಭಕ್ತವೃಂದ ಸಜ್ಜಾಗಿದೆ. ಧರ್ಮಾಧ್ಯಕ್ಷರು 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ 2025 ರ ಫೆಬ್ರವರಿ 9 ರಂದು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ತೆರೆದ ಮೈದಾನದಲ್ಲಿ ಜರುಗಲಿದೆ.ಭಾನುವಾರ ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರುಗಲಿದ್ದು, ಜಗದ್ಗುರು ಪೋಪ್ […]

Read More

ಕುಂದಾಪುರ(ಫೆ.4): ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ. ಶೆಟ್ಟಿಗಾರ್ ಇವಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತವನ ಟ್ರಸ್ಟ್(ರಿ.) ಹಾಗೂ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಕಾರದೊಂದಿಗೆ ಧರ್ಮಸ್ಥಳದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.ಈ ಸಾಧನೆಗೈದ ವಿದ್ಯಾರ್ಥಿನಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ […]

Read More

ಕುಂದಾಪುರ, ಫೆ.2; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಭಾರತೀಯ ಕಿಸಾನ್ ಸಂಘದ ಸಹಯೋಗದೊಂದಿಗೆ ‘ಕ್ರಷಿ ವಿಚಾರ ಸಂಕಿರಣ’ ಕುಂದಾಪುರ ರೋಟರಿ ಲಕ್ಷ್ಮೀ ನರಸಿ೦ಹ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಭಾಟಿಸಿದ ಜಿಲ್ಲಾ ಸಾಧಕ ರೈತ ಪ್ರಶಸ್ತಿ ವಿಜೇತರಾದ  ರಮೇಶ್‌ ನಾಯಕ್ ‘ಯಾವುದೇ ಕ್ಷೇತ್ರದಲ್ಲಿ ಸಫಲತೆ ಪಡೆಯ ಬೇಕಾದರೆ, ನಿರಂತರ ಪರಿಶ್ರಮ ಮತ್ತು ಅಧ್ಯಯನ ಮಾಡಬೇಕು. ಕ್ರಷಿಯಲ್ಲಿ ಸೊಲಿಲ್ಲ, ರೈತರು ಕ್ರಷಿ ವಿಧಾನದಲ್ಲಿ ನವೀಕ್ರತಗೊಳ್ಳುತ್ತಲೇ ಇರಬೇಕು, ಯಾವ ಜಾಗದಲ್ಲಿ ಯಾವ ಕ್ರಷಿ, ಯಾವ ವಿಧಾನದೊಂದಿಗೆ ಮಾಡಬೇಕು […]

Read More
1 3 4 5 6 7 209