
ಶ್ರೀನಿವಾಸಪುರ : ಗೌನಿಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ಜನವರಿ 2 ಗುರುವಾರ ರಂದು ಚುನಾವಣೆ ನಡೆದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಕ್ಕಯ್ಯಮ್ಮನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ನಾಗರತ್ನಮ್ಮ ರಾಮ್ ಮೋಹನ್ ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾಗಿದ್ದಂತಹ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದ್ದು ಅಧ್ಯಕ್ಷರ ಸ್ಥಾನಕ್ಕೆ ಅಕ್ಕಯ್ಯಮ್ಮ ನವರು ಒಂದೇ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದ ಕಾರಣ ಚುನಾವಣಾ ಅಧಿಕಾರಿ ರವಿಚಂದನ್ ರವರು ನಾಮಪತ್ರ ಸಲ್ಲಿಕೆ ಸಮಯ ಮುಕ್ತಾಯವಾಗುತ್ತಿದ್ದಂತೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ […]

ಕೋಲಾರ,ಜ.03: ಪತ್ರಕರ್ತರಿಗೆ ವೃತ್ತಿ ಬದ್ಧತೆ ಇದ್ದರೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಇಂಥ ಸಂದರ್ಭದಲ್ಲಿ ಯಾವುದೇ ಲಾಬಿ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಹಾಬಿ ರಮೇಶ್ ಹಾಗೂ ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಓಂಕಾರ ಮೂರ್ತಿ ಅವರಿಗೆ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ […]

ಶ್ರೀನಿವಾಸಪುರ,ಜ.2-ಮಾವಿನ ತೋಟಗಳಲ್ಲಿ ಹಳಸಿದ ಕಾಯಿಗಳು ಕ್ಲೀನಿಂಗ್ ಮಾಡಿ ತೋಟಗಳು ಸುರಕ್ಷತವಾಗಿ ಇಟ್ಟುಕೊಂಡರೆ ಬರುವ ಹೂವು ಕಾಯಿಗೆ ಕೀಟ ಬಾದೆ ಕಡಿಮೆಯಾಗುತ್ತದೆ. ತೋಟದಲ್ಲಿ ಉದುರಿರುವ ಕಾಯಿಗಳನ್ನು ತೆಗೆದು ಹಾಕಿ ತೋಟಗಳು ನಿರ್ವಹಣೆ ಮಾಡಿ ಅಗತ್ಯ ಪ್ರಮನದಲ್ಲಿ ಮಾತ್ರ ಕ್ರೀಮಿನಾಶಕ ಸಿಂಪಡಿಸಿದರೆ ಉತ್ತಮವಾಗಿ ಪಸಲು ಸಿಗುತ್ತದೆ ಎಂದು ಸಂಶೋದಕಿ ಡಾ.ಅಶ್ವಥನಾರಾಯಣರೆಡ್ಡಿ ಸಲಹೆ ಮಾಡಿದರು.ಇಲ್ಲಿನ ಮಾರುತಿ ಸಭಾ ಭವನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಮತ್ತು ಮಾವು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಮಾವು ಬೆಳೆಗಾರ ಸಂಯುಕ್ತ ಹೋರಾಟ ಸಮಿತಿಯ ಸಂಯುಕ್ತಾಶ್ರಯದಲ್ಲಿ […]

ಶ್ರೀನಿವಾಸಪುರ: ಅಂತರರಾಜ್ಯ ಸಾರಿಗೆಯಲ್ಲಿ ವಿದ್ಯಾರ್ಥಿಗಳ ಪಾಸ್ ಅಂಗಿಕರಿಸಬೇಕು. ವಿದ್ಯಾರ್ಥಿಗಳ ಶಾಲೆಯ ಸಮಯದಲ್ಲಿ ಪ್ರತಿಯೊಂದು ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.ಬಸ್ಪಾಸ್ ಸಂಪೂರ್ಣವಾಗಿ ಉಚಿತಗೊಳಿಸಬೇಕು. ಹಾಗು ಉಪನ್ಯಾಸಕರ , ಶಿಕ್ಷಕರ ಒತ್ತಡಕ್ಕೆ ಕೆಲ ವಿದ್ಯಾರ್ಥಿಗಳು ಮಾನಸಿಕವಾಗಿ ಆತ್ಮಸ್ಥೈ ಕುಗ್ಗುತಿದ್ದು, ಇದೆನ್ನೆಲ್ಲಾ ಇಲಾಖಾಧಿಕಾರಿಗಳು ತನಿಖೆ ನಡೆಸಿ ಸರಿಪಡಿಸಬೇಕಾಗಿದೆ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಧಿಕ್ ಅಹ್ಮದ್ ಒತ್ತಾಯಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಕನ್ನಡವೇ ಉಸಿರು ನವವೇದಿಕೆ, ನವ ಕರ್ನಾಟಕ ಸ್ವಾಭಿಮಾನ ಕನ್ನಡಿಗರ ಯುವ ಸೈನ್ಯ ರಾಜ್ಯ ಸಮಿತಿ […]

ಶ್ರೀನಿವಾಸಪುರ; ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು.ಪಟ್ಟಣದ ಹೊರವಲಯದಲ್ಲಿರುವ ಕೇತಗಾನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ನೆಲಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು, ಬೆಳಗ್ಗೆ 5 ಗಂಟೆಯಿಂದಲೇ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ತಂಡೋಪ […]

ಶ್ರೀನಿವಾಸಪುರ; ಡಿ.31: ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಅವರೆಕಾಯಿ ವಹಿವಾಟಿಗೆ ಸೂಕ್ತ ಜಾಗ ಗುರುತಿಸಲು ಜ.3ರ ಶುಕ್ರವಾರ ಖಾಲಿ ಬಿಂದಿಗೆಗಳು, ಅವರೆಕಾಯಿ ಸಮೇತ ತಾಲೂಕು ಕಚೇರಿ ಮುಂದೆ ಹೋರಾಟ ಮಾಡಲು ತೋಟಗಾರಿಕೆ ಆವರಣದಲ್ಲಿ ಕರೆದಿದ್ದ ರೈತಸಂಘದ ಮುಖಂಡರು ಪತ್ರಿಕಾ ಹೇಳಿಕೆ ಮುಖಾಂತರ ತಿಳಿಸಿದರು.ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲವೇ ಸೂಕ್ತ ಜಾಗವನ್ನು ಗುರುತಿಸುವಲ್ಲಿ ತಾಲೂಕು ಆಡಳಿತ ನಗರಸಭೆ […]

ಶ್ರೀನಿವಾಸಪುರ; ಭೀಮಾ ಕೋರೆಗಾಂವ್ ಯುದ್ದ ದಲಿತರ ಪಾಲಿಗೆ ಅತ್ಯಂತ ಮಹತ್ವದ ದಿನ ಎಂದ ದಲಿತ ಮುಖಂಡ ರಾಮಾಂಜಮ್ಮ .ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಭೀಮಾ ಕೋರೆಗಾಂವ್ ಕಾರ್ಯಕ್ರಮಕ್ಕೆ ಪ್ರಯಾಣ ಬೆಳಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜಮ್ಮ ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೆ ಇರುವ ಸ್ಥಳ ಭೀಮಾ ಕೋರೆಗಾಂವ್ ಈ ಹೆಸರು ಭಾರತದ ಇತಿಹಾಸದಲ್ಲಿ ಹೆಸರಾದ ಕದನ ಹಾಗೂ ಭೂಮಿ ಇದು ದಲಿತರ ಆತ್ಮ ಗೌರವ ಹಾಗೂ ಹಕ್ಕುಗಳಿಗೆ […]

ಶ್ರೀನಿವಾಸಪುರ : ಆಧ್ಯಾತ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿರುವಂತೆ ಓಂಕಾರವನ್ನು ಪ್ರತಿದಿನ ಪಠಿಸುವುದರ ಮೂಲಕ ನಮ್ಮ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಹಾಗೂ ಭಾವನೆಗಳು ನಿಯಂತ್ರಣಕ್ಕೆ ಬಂದು ಮನಸ್ಸು ಪ್ರಹ್ಲಾದಕರವಾಗಿರುತ್ತದೆ ಎಂದು ಧಾರ್ಮಿಕ ಚಿಂತಕ ಕೆ.ಎಂ.ಸೋಮಶೇಖರ್ ತಿಳಿಸಿದರು.ಪಟ್ಟಣದ ಸಂತೆ ಮೈದಾನದಲ್ಲಿ ನೆಲಸಿರುವ ಶ್ರೀಬೋಯಿಕೊಂಡ ಗಂಗಮ್ಮ ದೇವಾಲಯದಲ್ಲಿ ಲೋಕಕಲ್ಯಾಣರ್ಥವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಕೇತಗಾನಹಳ್ಳಿ ಕೆ.ಎಂ. ಸೋಮಶೇಖರ್ ಧನಾತ್ಮಕ ಕಂಪನವನ್ನುಂಟು ಮಾಡುವುದರ ಜೊತೆಗೆ ಓಂಕಾರ ಉಚ್ಚಾರಣೆಯು ನಮ್ಮ ಶರೀರದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕಿ ನಮ್ಮ ಹೃದಯದ […]

ಶ್ರೀನಿವಾಸಪುರ : ರಾಯಲ್ಪಾಡು ಕ್ರಾಸ್ ಸಮೀಪ ಭಾನುವಾರ ಮಧ್ಯರಾತ್ರಿ ಸುಮಾರು 12-15 ಗಂಟೆ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ 40 ಅಡಿ ಆಳದ ಕಂದಕ್ಕೆ ಬಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮೃತರಾಗಿದ್ದು ಉಳಿದ 39 ಜನರು ಗಾಯಗಳಾಗಿವೆ .ಭಾನುವಾರ ರಾತ್ರಿ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಯಲ್ಪಾಡು ಕ್ರಾಸ್ ಬಳಿ 40 ಅಡಿ ಆಲದ ಕಂದಕ್ಕೆ ಬಿದ್ದು ಬಸ್ನಲ್ಲಿ […]