
JANANUDI.COM NETWORK ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವ ಕುಂದಾಪುರ : ಸ : 12 : ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕ್ರೀಡೋತ್ಸವವು ನವೆಂಬರ್ 12 ರಂದು ಗಾಂಧಿ ಮೈದಾನದಲ್ಲಿ ನಡೆಯಿತು. ಸರಸ್ವತಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ್ ಶೆಟ್ಟಿಯವರು ಧ್ವಜಾರೋಹಣ ಮಾಡುವ ಮೂಲಕ ಕ್ರೀಡೊತ್ಸವವನ್ನು ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶಾಲಾ ಸಂಚಾಲಕರಾದ ಅತೀ ವಂದನೀಯ ಧರ್ಮ ಗುರುಗಳಾದ […]

ವರದಿ: ವಾಲ್ಟರ್ ಮೊಂತೇರೊ ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಆಯ್ಕೆ ಅಂತರಾಷ್ಟ್ರೀಯ ಭಾರತೀಯ ಜೇಸಿಐನ ಬೆಳ್ಮಣ್ಣು ಘಟಕದ 40ನೇ ವರ್ಷದ 2020ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೇಸಿ. ಸತ್ಯನಾರಾಯಣ ಭಟ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಘಟಕದ ಪದಾಧಿಕಾರಿಗಳು: ನಿಕಟ ಪೂರ್ವಾಧ್ಯಕ್ಷರು- ಶ್ವೇತಾ ಸುಭಾಸ್, ಉಪಾಧ್ಯಕ್ಷರುಗಳು- ಸತೀಶ್ ಪೂಜಾರಿ ಅಬ್ಬನಡ್ಕ (ಘಟಕ), ಚಂದ್ರಿಕಾ ಎಸ್. ತಂತ್ರಿ (ತರಬೇತಿ ವಿಭಾಗ), ಸುಧೀರ್ ಕಾಮತ್ (ಕಾರ್ಯಕ್ರಮ ವಿಭಾಗ), ವಿರೇಂದ್ರ ಆರ್.ಕೆ. (ಸಮುದಾಯ ಅಭಿವೃದ್ಧಿ ವಿಭಾಗ), ಪ್ರದೀಪ್ ಶೆಟ್ಟಿ (ವ್ಯವಹಾರ […]

ಕರ್ನಾಟಕ ಸರ್ಕಾರದ ಮಾನ್ಯತೆಯ ಸಂಯೋಜಿತ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಕುಂದಾಪುರ,ನ.೯. ಕರ್ನಾಟಕ ಸರ್ಕಾರದ ಮಾನ್ಯತೆ ಕರ್ನಾಟಕ ರಾಜ್ಯ ರಾಜ್ಯ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಸಂಯೋಜಿತ ಸಂಸ್ಥೆಯಾದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ನವೆಂಬರ್ 12 ಮಂಗಳವಾರ ಸಂಜೆ 5 ಗಂಟೆಗೆ ಕುಂದಾಪುರದ ಜ್ಯೂನಿಯರ್ ಕಾಲೇಜಿನ (ಬೋರ್ಡ್ ಹೈಸ್ಕೂಲ್) ಕಲಾಮಂದಿರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಮತ್ತು […]

JANANUDI.COM NETWORK ಪತ್ರಕರ್ತ ಸಮಾಜಕ್ಕೆ ಉಪಕಾರ ಆಗುವ ಕೆಲಸ ಮಾಡಬೇಕು : ಎ.ಎಸ್.ಎನ್.ಹೆಬ್ಬಾರ್ ಪತ್ರಕರ್ತರಾಗಿ ಸೇವೆಸಲ್ಲಿಸುವವರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಅವರ ವರದಿಗಳು ಧನಾತ್ಮಕವಾಗಿರಬೇಕು. ಆ ವರದಿಯಿಂದ ಜನರಿಗೆ ಉಪಯೋಗವಾದರೆ ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ. ಎಷ್ಟೋ ಉತ್ತಮ ಪತ್ರಕರ್ತರಿಂದ ಸಮಾಜದಲ್ಲಿ ಕ್ರಾಂತಿಕಾರಿಕ ಬದಲಾವಣೆಗಳಾಗಿವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯಸಿಕ್ಕಿದೆ. ಅಸಹಾಯಕರಿಗೆ ಸಹಾಯ ದೊರಕಿದೆ. ಇದರಿಂದ ಪತ್ರಕರ್ತರಿಗೆ ಸಿಗುವ ತೃಪ್ತಿ ಖುಷಿಯೇ ಬೇರೆ. ” ಎಂದು ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಹೇಳಿದರು. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಿದ “ಪತ್ರಿಕೋದ್ಯಮದ ಶಕ್ತಿ” ವಿಚಾರವಾಗಿ […]

JANANUDI.COM NETWORK ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ಕ್ರಿಡೋತ್ಸವ ಕುಂದಾಪುರ, ನ.8: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲಾಯ ಕ್ರಿಡೋತ್ಸವವು ನ. 8 ರಂದು ರೋಟರಿ ಕ್ಲಬ್ ರೀವರ್ ಸೈಡ್ ಇವರ ಸಹಯೋಗದಲ್ಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೀರ್ತನಾ ದ್ವಜಾರೋಹಣ ಮಾಡುವ ಮೂಲಕ ಕ್ರಿಡೋತ್ಸವನ್ನು ಉದ್ಘಾಟಿಸಿ ಶುಭ ಕೋರಿದರು. ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ರೀವರ್ ಸೈಡ್ ಇದರ ಅಧ್ಯಕ್ಷ ರೊ| ರಾಜು ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ […]

JANANUDI.COM NETWORK ಕುಂದಾಪುರ ಕಾರ್ಟೂನು ಹಬ್ಬದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ಧೆ ಕುಂದಾಪುರ ಕಾರ್ಟೂನು ಹಬ್ಬದ ‘ಸ್ಕೂಲ್ಟೂನ್ ಚಾಂಪಿಯನ್ಶಿಪ್’ ಸ್ಪರ್ಧೆಯ ಪ್ರಯುಕ್ತ ನವೆಂಬರ್ 23 ರಂದು ಬೋರ್ಡ್ ಹೈಸ್ಕೂಲ್, ರೋಟರಿ ಕಲಾಮಂದಿರ ಕುಂದಾಪುರ ಇಲ್ಲಿ ಮಧ್ಯಾಹ್ನ 2 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. 5ನೇ ತರಗತಿಯ ತನಕ ಸ್ಪರ್ಧೆಯ ವಿಷಯವಾಗಿ ‘ಗಾಂಧೀಜಿ’ಯವರ ಚಿತ್ರ ರಚನೆ – ಪ್ರಥಮ ಬಹಮಾನ ರೂ.6000/-, ದ್ವಿತೀಯ ರೂ.4000/-. […]

JANANUDI.COM NETWORK ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕಾರ್ಯಕರ್ತರ ಸಭೆಗೆ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಆಗಮನ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕಾರ್ಯಕರ್ತರ ಸಭೆ ವಿರೋದ ಪಕ್ಷದ ನಾಯಕ , ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ, ಮತ್ತು ಸಭೆ ಆರಂಭ ಗೊಂಡಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮಾಧ್ಯಮಕ್ಕೆ ತಿಳಿಸಿದ್ದಾರೆ

JANANUDI.COM NETWORK ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು – ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿಧನ ಕುಂದಾಪುರ, ನ.2. ಕುಂದಾಪುರದ ಹಿರಿಯ ಕಾಂಗ್ರೆಸಿಗ ವಾಸು ಸೇರೆಗಾರ್ರು, ಪ್ರಸಿದ್ದ ವಾಣಿಜದ್ಯೋಮಿ ( ಗಣೇಶ್ ಸ್ಟೋರ್ ಮಾಲಕ ) ನಿನ್ನೆ (ನವೆಂಬರ್ 1) ರಾತ್ರಿ 11ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿರುತ್ತಾರೆ. ಮೃತ ದೇಹವು ಇಂದು ಮಧ್ಯಾಹ್ನ 2ಗಂಟೆಗೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವರ ಸ್ವಗ್ರಹಕ್ಕೆ ಆಗಮಿಸಲಿದೆ ಮತ್ತು ಅಂತ್ಯಕ್ರಿಯೆಯು ಸಂಜೆ 4ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು […]
JANANUDI.COM NETWORK ಅಕಸ್ಮಿಕವಾಗಿ ನದಿಯಲ್ಲಿ ಬಿದ್ದ ಡೇವಿಡ್ ಕರ್ವಾಲ್ಲೊ ಸಾವನ್ನಪ್ಪಿದ್ದಾರೆ ಗುಜ್ಜಾಡಿ ಗ್ರಾಮದ ನಾಯಕ್ವಾಡಿ ನಿವಾಸಿ ಡೇವಿಡ್ ಕರ್ವಾಲ್ಲೊ (43ವರ್ಷ) ರವರು ದಿನಾಂಕ 1/11/2019 ರಂದು ಬೆಳಿಗ್ಗೆ 9.00 ಗಂಟೆಯ ಸುಮಾರಿಗೆ ಕನ್ನಡಕುದ್ರು – ಗುಜ್ಜಾಡಿ ಮಧ್ಯೆ ಸೌಪರ್ಣಿಕಾ ನದಿಯಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದಿದ್ದರು. ಇಂದು ಅವರ ದೇಹ ದೊರಕಿದ್ದು ಅವರು ಮ್ರತ ಪಟ್ಟಿದ್ದಾರೆಂದು ತಿಳಿದು ಬಂದಿದೆ. ಅವರು ಪತ್ನಿ ಶೋಭಾ ಕರ್ವಾಲ್ಲೊ, ಮತ್ತು ೩ ಮಕ್ಕಳನ್ನು ಅಗಲಿದ್ದಾರೆ.