
ಮಂಗಳೂರು ಸೆ.28: ನಗರದಲ್ಲಿ ಸೆ.25 ರಂದು ನಾಪತ್ತೆಯಾಗಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರ್ಬನ್ ಜೆ. ಅರ್ನಾಲ್ಡ್ ಡಿಸೋಜಾ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಸೆ.25 ರರಾತ್ರಿ 7 ಗಂಟೆ ಸುಮಾರಿಗೆ ಡಾ ಡಿಸೋಜಾ ಅವರು ತಮ್ಮ ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಸಮೀಪದ ಅಂಗಡಿಗೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ, ರಾತ್ರಿಯಾದರೂ ಹಿಂತಿರುಗದ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಡಿಸೋಜಾ ಅವರ ಮೊಬೈಲ್ ಫೋನ್ ಸ್ವಿಜ್ ಆಫ್ ಆಗಿದ್ದು, […]

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆಯು ತಾರೀಖು 27-09-2022 ರಂದು 4-30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಇವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಭೆಯಲ್ಲಿ70 ಜನ ಸದಸ್ಯರು ಹಾಜರಿದ್ದರು. ರಕ್ತ ಕೇಂದ್ರದ ಸಿಭಂದಿಗಳಿಂದ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಇವರು ಸ್ವಾಗತಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಾರ್ಷಿಕ […]

ಕುಂದಾಫುರ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ,ಆಯ್ಕೆಯಾಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಪತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಲಿ. ಅಧ್ಯಕ್ಷರಾದ ಜಾನ್ಸನ್ ಡಿಅಲ್ಮೇಡಾ, ಉಪಾಧ್ಯಕ್ಷರಾದ ಕಿರಣ್ ಮೆಲ್ವಿನ್ ಲೋಬೊ ಪಡುಕೋಣೆ, ನಿರ್ದೇಶಕ ವಿಲ್ಸನ್ ಡಿಸೋಜಾ ಶಿರ್ವ, ಸಂತೋಷ್ […]

ಕರ್ನಾಟಕ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಬೈಂದೂರು ಕ್ಷೇತ್ರದ ಶಾಸಕರಾಗಿ, ಸಹಕಾರಿ ಧುರೀಣರಾಗಿ, ಹೈನುಗಾರಿಕೆ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿ ಪರ ಕಾರ್ಯಗಳಿಂದ ಜನಪ್ರಿಯರಾಗಿದ್ದ ದಿ. ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಜನ್ಮದಿನ ಅಕ್ಟೋಬರ್ 1 ರಂದು “ಕೊಡ್ಗಿ ನೆನಪು” ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ.ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಎ. ಜಿ. ಕೊಡ್ಗಿ ಬಯಲು ರಂಗ ಮಂಟಪದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯುವ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಸಚಿವರಾದ ಅಂಗಾರ, ಕೋಟ ಶ್ರೀನಿವಾಸ […]

ಉಡುಪಿ: ಕಥೊಲಿಕ್ ಸಭಾ ಪೆರಂಪಳ್ಳಿ ಘಟಕದಿಂದ ಪ್ರತಿಭಾ ಪುರಸ್ಕಾರ ಮತ್ತು ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಪೆರಂಪಳ್ಳಿ ಚರ್ಚಿನ ಧರ್ಮಗುರು ಹಾಗೂ ಪೆರಂಪಳ್ಳಿ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಅನಿಲ್ ಡಿಸೋಜಾ ಬಹುಮಾನ ವಿತರಣೆ ಮಾಡಿ ಸಂದೇಶ ನೀಡಿದರು. ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಒಲಿವರ್ ಡಿಸೋಜಾ, ಕಾರ್ಯದರ್ಶಿ ಆಲ್ಬಿನ್ ಡಿಸೋಜಾ ಕೂಡ ಬಹುಮಾನಗಳನ್ನು ವಿತರಿಸಿದರು. ಭಾಷಣ ಸ್ಪರ್ಧೆಯ ನಾಲ್ಕು ವಿಭಾಗಗಳಿದ್ದು, ಇದರಲ್ಲಿ 36 ಮಂದಿ ಭಾಗವಹಿಸಿದ್ದು, 13 ಮಂದಿ ಮಕ್ಕಳು […]

ಬಾರ್ಕೂರು: ಭಾಗ್ಯವಂತ ಪಾದ್ರೆ ಪಿಯೊರ ವಾರ್ಷಿಕ ಹಬ್ಬವನ್ನು ಪ್ರಥಮವಾಗಿ ಇದೇ ಸಪ್ಟೆಂಬರ್ 23 ರಂದು ಬಾರ್ಕೂರು ಸಂತ ಪೀಟರ್ ಇಗರ್ಜಿಯಲ್ಲಿ ಆಚರಣೆ ಆರಂಭಗೊಂಡಿತು. ಬೆಂಗಳೂರಿನ ಕಾಪುಚಿನ್ ಧರ್ಮಗುರುಗಳಾದ ಫಾ| ನವೀನ್ ಡಿಸೋಜಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಸಂದೇಶವನ್ನು ನೀಡಿದರು. ಬಲಿದಾನದ ತರುವಾಯ ಪಾದ್ರೆ ಪಿಯೊರ ಅವಶೇಷ (ಭಾಗವೊಂದನ್ನು) ಮೆರವಣಿಗೆಯನ್ನು ಮಾಡಲಾಯಿತು. ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ರೆಕ್ಟರ್ ವಂ|ಫಾ| ಆಲ್ಬನ್ ಡಿಸೋಜಾರು ನವಿಕ್ರತ ಮಾಡಿದ ಚಾಪೆಲ್ ಮತ್ತು ಪಾದ್ರೆ ಪಿಯೊರ ಎರಡು ಪ್ರತಿಮೆಗಳನ್ನು (ಪ್ರತಿಕೃತಿಗಳು) […]

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ “ಒಕ್ಸಿಜನ್ ಕಾನ್ಸಂಟ್ರೆಟರ್” ಹಸ್ತಾಂತರಿಸಲಾಯಿತು.ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ಮಾಜಿ ಅಧ್ಯಕ್ಷರುಗಳಾದ ಶಾಂತರಾಮ ಪ್ರಭು, ಡಾ. ವಿಶ್ವೇಶ್ವರ್ ಹಾಗೂ ಚಿತ್ರಕೂಟದ ಡಾ. ರಾಜೇಶ್ ಬಾಯರಿ, ಡಾ. ಅನುಲೇಖಾ ಬಾಯರಿ ಉಪಸ್ಥಿತರಿದ್ದರು.

ಶಿರ್ವ: ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು.ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ಶ್ರೀ ರಾಧಾಕೃಷ್ಣ ಪ್ರಭು ಅವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಯುತ ಯುವಜನರನ್ನು […]